More

    ಹಾಡಹಗಲೇ ಕಳ್ಳತನಕ್ಕೆ ಯತ್ನಿಸಿದ ಯುವಕ

    ಕುಷ್ಟಗಿ: ಹಾಡಹಗಲೇ ಯುವಕನೊಬ್ಬ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ಪಟ್ಟಣದ ವಿದ್ಯಾನಗರದಲ್ಲಿ ಶುಕ್ರವಾರ ನಡೆದಿದೆ. ಕಳ್ಳನನ್ನು ಹಿಡಿದು ಥಳಿಸಿರುವ ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದು, ಕಳ್ಳತನಕ್ಕೆ ಯತ್ನಿಸಿರುವ ಯುವಕ ತಾನು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದ ಸುನೀಲ್ ಸಿಂಗ್ರಿ ಎಂದು ಹೇಳಿಕೊಂಡಿದ್ದಾನೆ.

    ವಿದ್ಯಾನಗರದ ನಿವಾಸಿ ಸಂಪತ್‌ಕುಮಾರ ಬಾಗಿಲು ಬಳಿ ವಿಶ್ರಾಂತಿ ಪಡೆಯುತ್ತಿದ್ದಾಗ ಮನೆಗೆ ನುಗ್ಗಿದ ಕಳ್ಳ, ಗೋಡೆಗೆ ನೇತು ಹಾಕಿದ ಪ್ಯಾಂಟ್ ಹಾಗೂ ಶರ್ಟ್‌ನಲ್ಲಿದ್ದ ಹಣ ದೋಚಿ ಬೆಡ್ ರೂಮ್ ಪ್ರವೇಶಿಸಿದ್ದಾನೆ. ಅಲ್ಲಿ ಮಲಗಿದ್ದ ಸಂಪತ್‌ಕುಮಾರ್ ಪತ್ನಿ ಎಚ್ಚರಗೊಂಡು ಗಾಭರಿಯಿಂದ ಕೂಗಿದ್ದಾರೆ.

    ಎಚ್ಚರಗೊಂಡ ಪತಿ ಸಂಪತ್‌ಕುಮಾರ್, ಕಳ್ಳನನ್ನು ಕೋಣೆಯಲ್ಲಿ ಕೂಡಿಹಾಕಿ ಥಳಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಕ್ಕೂ ಮುನ್ನ ಗಜೇಂದ್ರಗಡ ರಸ್ತೆಯ ಬಸವೇಶ್ವರ ಆಸ್ಪತ್ರೆಯ ಮೇಲಿನ ರೂಮೊಂದರ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts