ಭಟ್ಕಳ: ಇಲ್ಲಿನ ಎಎಸ್ಪಿ ನಿಖಿಲ್ ಬುಳ್ಳಾವರ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ವಂಚಿಸಲು ಯತ್ನಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಭಟ್ಕಳ ಎಎಸ್ಪಿ ನಿಖಿಲ್ ಬಿ. ಅವರ ಹೆಸರಿನಲ್ಲಿ ನಕಲಿ ಫೇಸ್ಬುಕ್ ಸೃಷ್ಟಿಸಿ ಅವರ ಪರಿಚಯಸ್ಥರ ಖಾತೆಗೆ ಸಂದೇಶ ರವಾನೆ ಮಾಡಿ ಹಣ ಕೇಳಲಾಗಿದೆ. ಈ ವಿಷಯ ಎಎಸ್ಪಿ ನಿಖಿಲ್ ಬಿ ಅವರ ಗಮನಕ್ಕೆ ಬರುತ್ತಿರುವಂತೆ ಈ ರೀತಿ ಹಣ ಕೇಳಿದರೆ ಇದಕ್ಕೆ ದಯವಿಟ್ಟು ಸ್ಪಂದಿಸಬೇಡಿ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಸ್ಕಿ›ೕನ್ ಶಾಟ್ ಹಾಕಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಕಾರವಾರ ಗ್ರಾಮೀಣ ಠಾಣೆಯ ಪಿಎಸ್ಐ ರೇವಣ್ಣ ಜೀರನಕಳಗಿ ಅವರ ಹೆಸರಿನಲ್ಲಿ ಅವರ ಸ್ನೇಹಿತರೊಬ್ಬರಿಗೆ 7 ಸಾವಿರ ವಂಚಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.