ಅರಟಾಳ: ಹಲವು ವರ್ಷಗಳ ಬಳಿಕ ಅರಟಾಳ ಗ್ರಾಮದ ವಜ್ರಾಹಳ್ಳ ಕೆರೆ ತುಂಬಿದ ಪರಿಣಾಮ ಗಂಗಾಮಾತೆಗೆ ಉಡಿತುಂಬಿ ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ಕೆ ಸಿದ್ರಾಮಯ್ಯ ಸ್ವಾಮೀಜಿಗಳು ಚಾಲನೆ ನೀಡಿದರು.
ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಶಶಿಕಾಂತ ಗುರುಜೀ ಮತಾನಾಡಿದರು. ಗದ್ಯಾಳ ಚಿಕ್ಕಯ್ಯ ಸ್ವಾಮೀಜಿ, ಗುರುಮೂರ್ತಯ್ಯ ಹಿರೇಮಠ, ತಾಪಂ ಮಾಜಿ ಸದಸ್ಯ ಶಿವಪ್ಪ ಹಟ್ಟಿ, ದಯಾನಂದ ಖ್ಯಾಡಿ, ಶ್ರೀಶೈಲ ಸಿಂಧೂರ, ಭೀಮಣ್ಣ ಕಲಮಡಿ, ಸುರೇಶ ಹಿರೇಕುರಬರ, ಲಕ್ಷ್ಮಣ ಕಲಮಡಿ, ಮಲಕು ಮಾಳಿ, ಗೋಪಾಲ ಕಲಮಡಿ, ದರ್ಶನ ಮಾಳಿ, ಪ್ರಶಾಂತ ಖ್ಯಾಡಿ, ಪರಮಾನಂದ ಖ್ಯಾಡಿ, ಮಾಳಪ್ಪ ಕಾಂಬಳೆ, ಸದಾನಂದ ಮಾಡಗ್ಯಾಳ, ಚನ್ನಬಸು ಬಿರಾದಾರ ಇತರರು ಇದ್ದರು.