More

    ಐಪಿಎಲ್ ಬೆಟ್ಟಿಂಗ್ ಹಣ ಕೊಡುವ ವಿಚಾರಕ್ಕೆ ಗಲಾಟೆ; ಯುವಕನ ಹತ್ಯೆ

    ಮದ್ದೂರು: ಹಾಲಿ ಐಪಿಎಲ್​ ಋತು ಅನೇಕ ಕಾರಣಗಳಿಗೆ ಹೆಚ್ಚು ಸದ್ದು ಮಾಡುತ್ತಿದ್ದು ಈ ಮಧ್ಯೆ ತಂಡಗಳ ಪರ ಕ್ರಿಕೆಟ್​ ಬೆಟ್ಟಿಂಗ್​ ಕೂಡ ಜೋರಾಗಿ ನಡೆಯುತ್ತಿದ್ದು ಹಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

    ಇದೀಗ ಪ್ರಕರಣ ಒಂದರಲ್ಲಿ ಬೆಟ್ಟಿಂಗ್​ ಹಃಣ ನೀಡುವ ಸಂಬಂಧ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು ಹಣ ಗೆದ್ದ ಯುವಕನನ್ನು ಸೌದೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬೊಆರಪುರ ಸಮೀಪ ಇರುವ ವಿ.ಸಿ.ನಾಲೆ ಬಳಿ ನಡೆದಿದೆ.

    ಬೆಟ್ಟಿಂಗ್​ ಗೀಳು

    ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದ ಪುನೀತ್​(28) ಬೆಟ್ಟಿಂಗ್ ಗೀಳಿಗೆ ಬಲಿಯಾದ ಯುವಕ. ಐಪಿಎಲ್​ ಶುರುವಾದಾಗಿನಿಂದಲೂ ಪುನೀತ್​ ಬೆಟ್ಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದು ಹಣ ಕಟ್ಟಿ ಗೆಲುವು ಕಂಡಿದ್ದರು.

    murdered youth

    ಗುರುವಾರ ರಾತ್ರಿ ಪುನೀತ್​ ತಾವು ಗೆದ್ದ ಹಣ ನೀಡುವಂತೆ ಬೋರಾಪುರದ ಶರತ್​ ಹಅಗು ಮಂಜು ಬಳಿ ಕೇಳಿಕೊಂಡಿದ್ದಾರೆ. ಈ ವೇಳೆ ಯುವಕರ ಗುಂಪು ತಾವು ವಿ.ಸಿ.ನಾಲೆ ಬಳಿ ಇದ್ದು ಅಲ್ಲಿಗೆ ಬರುವಂತೆ ಪುನೀತ್​ಗೆ ಸೂಚಿಸಿದ್ದಾರೆ. ಸ್ಥಳಕ್ಕೆ ತೆರಳಿದ ಪುನೀತ್​ ತಮ್ಮ ಹಣ ನೀಡುವಂತೆ ಯುವಕರ ಗುಂಪಿಗೆ ಹೇಳಿದ್ದಾರೆ.

    ಇದನ್ನೂ ಓದಿ: VIDEO| ನೋಡ ನೋಡುತ್ತಿದ್ದಂತೆ ಬಡಿದಾಡಿಕೊಂಡ ಪ್ರಯಾಣಿಕರು; ಕಾರಣ ನಿಗೂಢ ಎಂದ ಪೊಲೀಸರು

    ಹಣ ಕೇಳಿದ್ದಕ್ಕೆ ಹಲ್ಲೆ

    ಈ ವೇಳೆ ಏಕಾಏಕಿ ಸೌದೆಯಿಂದ ಯುವಕರ ತಂಡ ಪುನೀತ್​ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಪುನೀತ್​ರನ್ನು ಕೆ.ಎಂ.ಡೊಡ್ಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಪುನೀತ್​ ಕೊನೆಯುಸಿರು ಎಳೆದಿದ್ದಾರೆ.

    ಮದ್ದೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆ ನಡೆದ 24 ಘಂಟೆಗಳ ಒಳಗೆ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎನ್​. ಯತೀಶ್​ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts