More

    ಯುವತಿಯನ್ನು ಪ್ರೀತಿಸುತ್ತಿದ್ದಾತನ ಎದೆಗೇ ಚಾಕು ಚುಚ್ಚಿದ್ರು; ಆಕೆಯನ್ನು ಭೇಟಿ ಮಾಡ್ಬೇಡ ಅಂದ್ರೂ ಮಾಡಿದ್ದಕ್ಕೆ ಇರಿದಿದ್ದವರ ಸೆರೆ

    ಬೆಂಗಳೂರು: ಇದು ಇವರಿಬ್ಬರ ನಡುವಿನ ಸಂಘರ್ಷ, ಆದರೆ ಅದಕ್ಕೆ ಕಾರಣ ಅವಳು. ಆಕೆಗಾಗಿ ಈ ಇಬ್ಬರೂ ಯಾವ ಪರಿ ಕಾದಾಡಿದ್ದರೆಂದರೆ ಒಬ್ಬ ಇನ್ನೊಬ್ಬನನ್ನು ಚಾಕುವಿನಿಂದ ಇರಿದೇ ಬಿಟ್ಟಿದ್ದ. ಕೊನೆಗೂ ಯುವತಿಗಾಗಿ ಜಗಳ ಮಾಡಿಕೊಂಡು ಇರಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು ಪತ್ತೆ ಮಾಡಿ ಬಂಧಿಸಿದ್ದಾರೆ.

    ಮುತ್ತುರಾಜ್​ ಮತ್ತು ಹೇಮಂತ್ ಬಂಧಿತ ಆರೋಪಿಗಳು. ಹರಿಕೀರ್ತನ್ ಎಂಬಾತ ಇರಿತಕ್ಕೊಳಗಾದ ಯುವಕ. ನಿನ್ನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳಿಬ್ಬರು ಹರಿಕೀರ್ತನ್​ ಚೂರಿ ಇರಿದು ಪರಾರಿಯಾಗಿದ್ದರು.

    ಇದನ್ನೂ ಓದಿ: ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ; ಕಾರು ಅಡ್ಡಗಟ್ಟಿ ರಾಡ್​ನಿಂದ ಥಳಿಸಿದ ದುಷ್ಕರ್ಮಿಗಳು..

    ವಿದ್ಯಾರ್ಥಿಯಾಗಿರುವ ಹರಿಕೀರ್ತನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು, ಅದೇ ವಿಚಾರಕ್ಕೆ ಮುತ್ತುರಾಜ್ ಜೊತೆ ದ್ವೇಷ ಬೆಳೆದಿತ್ತು. ಆ ಯುವತಿಯನ್ನು ಭೇಟಿ ಆಗಬಾರದು ಎಂದು ಹರಿಕೀರ್ತನ್​ಗೆ ಮುತ್ತುರಾಜ್ ಎಚ್ಚರಿಕೆಯನ್ನೂ ಕೊಟ್ಟಿದ್ದ. ಆದರೆ ಅದನ್ನು ಲೆಕ್ಕಿಸದ ಹರಿಕೀರ್ತನ್​ ಆಕೆಯನ್ನು ಭೇಟಿಯಾಗಿದ್ದ.

    ಇದನ್ನೂ ಓದಿ: ಗಾಂಜಾ ವ್ಯಸನಿಗಳ ವಿರುದ್ಧ ಪೊಲೀಸರಿಗೆ ಮಾಹಿತಿ‌ ನೀಡಿದ್ದ ಕರಾಟೆ ಮಾಸ್ಟರ್‌ಗೇ ಚೂರಿ ಇರಿತ

    ಇದರಿಂದ ಸಿಟ್ಟಾದ ಮುತ್ತುರಾಜ್​, ಹೇಮಂತ್ ಎಂಬಾತನ ಜತೆಗೂಡಿ ನಿನ್ನೆ ಸುಂಕದಕಟ್ಟೆ ಬಳಿ ಬಸ್​ವೊಂದನ್ನು ಅಡ್ಡಗಟ್ಟಿ ಹರಿಕೀರ್ತನ್​ನನ್ನು ತರಾಟೆಗೆ ತೆಗೆದುಕೊಂಡಿದ್ದರು. ಮಾತ್ರವಲ್ಲದೆ ಚಾಕುವಿನಿಂದ ಆತನ ಎದೆ ಮತ್ತಿತರ ಭಾಗಕ್ಕೆ ಇರಿದು ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರು ಪೊಲೀಸರು, ಆರೋಪಿಗಳಿಬ್ಬರನ್ನು ಇಂದು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

    9 ವರ್ಷಗಳ ಬಳಿಕ ನಕ್ಸಲ್​ ನಂಟು ಆರೋಪದಿಂದ ಮುಕ್ತರಾದ್ರು ವಿಠಲ ಮಲೆಕುಡಿಯ ಮತ್ತು ತಂದೆ; ಆರೋಪಮುಕ್ತಗೊಳಿಸಿದ ನ್ಯಾಯಾಲಯ

    ಕರ್ತವ್ಯದಲ್ಲಿರುವಾಗ, ಸಮವಸ್ತ್ರ ಧರಿಸಿಕೊಂಡೇ ಪೊಲೀಸರ ಡ್ರಿಂಕ್ಸ್​ ಪಾರ್ಟಿ; ಬಾರ್​ವೊಂದರ ಕೊಠಡಿಯಲ್ಲಿ ಕುಡಿಯುತ್ತಿದ್ದ ವಿಡಿಯೋ ವೈರಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts