ಕೆಸರುಮಯ ರಸ್ತೆಗೆ ಚಿಗುರು ಯುವ ವೇದಿಕೆ ಕಾಯಕಲ್ಪ

blank

ಆನಂದಪುರ: ಹೊಸೂರು ಗ್ರಾಮದ ಚಿಗುರು ಯುವ ವೇದಿಕೆ ಸದಸ್ಯರು ಭಾನುವಾರ ಶ್ರಮದಾನ ಮಾಡಿದರು.

ಹೊಸೂರು-ಚೆನ್ನಶೆಟ್ಟಿಕೊಪ್ಪ ಸಂಪರ್ಕ ರಸ್ತೆಯ ಶಾಂತಿನಗರ ಬಳಿ ಕಾಂಕ್ರೀಟ್ ಹಾಕಿದಾಗ ಕ್ಯೂರಿಂಗ್‌ಗಾಗಿ ಅಡಕೆ ಸಿಪ್ಪೆ ಹಾಸಿದ್ದರು. ಆದರೆ ಗುತ್ತಿಗೆದಾರರರು ಅಡಕೆ ಸಿಪ್ಪೆ ತೆಗೆದು ಸ್ವಚ್ಛಗೊಳಿಸಿರಲಿಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ಅಡಕೆ ಸಿಪ್ಪೆ ಕೊಳೆತು ಇಡೀ ರಸ್ತೆ ಕೆಸರುಮಯವಾಗಿತ್ತು. ಈ ರಸ್ತೆಯಲ್ಲಿ ನಡೆದಾಡುವುದೂ ಕಷ್ಟವಾಗಿತ್ತು.
ಸಮಸ್ಯೆ ಮನಗಂಡ ಚಿಗುರು ಯುವ ವೇದಿಕೆ ಸದಸ್ಯರು ಕೊಳೆತ ಸಿಪ್ಪೆಗಳನ್ನು ತೆಗೆದು ಬೇರೆಡೆ ಸಾಗಿಸಿದರು. ವೇದಿಕೆಯ ಗಿರೀಶ್, ಅಶ್ವತ್ಥ್, ಪವನ್, ಅಣ್ಣಪ್ಪ, ಸಂತೋಷ್, ಸುನೀಲ್, ಆದರ್ಶ, ಸಂದೀಪ್, ಗಣೇಶ್ ಇತರರಿದ್ದರು.

Share This Article

ಮಕ್ಕಳು ಪ್ರತಿದಿನ ತಿನ್ನಲೇ ಬೇಕಾದ ಹಣ್ಣುಗಳಿವು..ಕಾರಣ ಹೀಗಿದೆ | Fruits

Fruits: ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ನೆನಪಿನ ಶಕ್ತಿ ಹೆಚ್ಚಿಸಲು ಹಣ್ಣುಗಳು ಬಹಳ ಪ್ರಯೋಜನಕಾರಿ. ಹಣ್ಣುಗಳಲ್ಲಿ…

ನೀವು ಕೂಡ ಇದೇ ರೀತಿಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈರುಳ್ಳಿ ತಿನ್ನಲೇಬೇಡಿ.. onion

onion : ಈರುಳ್ಳಿಯಿಂದ ಹಲವು ಪ್ರಯೋಜನಗಳಿವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈರುಳ್ಳಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು.…

ನೀವು ಹೆಚ್ಚಾಗಿ ಹೈ ಹೀಲ್ಸ್ ಧರಿಸುತ್ತೀರಾ? ಹುಷಾರಾಗಿರಿ.. heels

heels : ಮಹಿಳೆಯರು ತಮ್ಮ ಬಟ್ಟೆಗಳಿಗೆ ಹೊಂದಿಕೆಯಾಗುವಂತೆ ಹೈ ಹೀಲ್ಸ್ ಧರಿಸಿ ಸ್ಟೈಲಿಶ್ ಆಗಿ ಕಾಣುವುದು…