ಆನಂದಪುರ: ಹೊಸೂರು ಗ್ರಾಮದ ಚಿಗುರು ಯುವ ವೇದಿಕೆ ಸದಸ್ಯರು ಭಾನುವಾರ ಶ್ರಮದಾನ ಮಾಡಿದರು.
ಹೊಸೂರು-ಚೆನ್ನಶೆಟ್ಟಿಕೊಪ್ಪ ಸಂಪರ್ಕ ರಸ್ತೆಯ ಶಾಂತಿನಗರ ಬಳಿ ಕಾಂಕ್ರೀಟ್ ಹಾಕಿದಾಗ ಕ್ಯೂರಿಂಗ್ಗಾಗಿ ಅಡಕೆ ಸಿಪ್ಪೆ ಹಾಸಿದ್ದರು. ಆದರೆ ಗುತ್ತಿಗೆದಾರರರು ಅಡಕೆ ಸಿಪ್ಪೆ ತೆಗೆದು ಸ್ವಚ್ಛಗೊಳಿಸಿರಲಿಲ್ಲ. ಮಳೆಗಾಲ ಆರಂಭವಾಗುತ್ತಿದ್ದಂತೆ ಅಡಕೆ ಸಿಪ್ಪೆ ಕೊಳೆತು ಇಡೀ ರಸ್ತೆ ಕೆಸರುಮಯವಾಗಿತ್ತು. ಈ ರಸ್ತೆಯಲ್ಲಿ ನಡೆದಾಡುವುದೂ ಕಷ್ಟವಾಗಿತ್ತು.
ಸಮಸ್ಯೆ ಮನಗಂಡ ಚಿಗುರು ಯುವ ವೇದಿಕೆ ಸದಸ್ಯರು ಕೊಳೆತ ಸಿಪ್ಪೆಗಳನ್ನು ತೆಗೆದು ಬೇರೆಡೆ ಸಾಗಿಸಿದರು. ವೇದಿಕೆಯ ಗಿರೀಶ್, ಅಶ್ವತ್ಥ್, ಪವನ್, ಅಣ್ಣಪ್ಪ, ಸಂತೋಷ್, ಸುನೀಲ್, ಆದರ್ಶ, ಸಂದೀಪ್, ಗಣೇಶ್ ಇತರರಿದ್ದರು.