ಹಾಸನ: ರಾಜಧಾನಿ ಬೆಂಗಳೂರಿನಿಂದ ಗೆಳೆಯರೊಂದಿಗೆ ಪ್ರವಾಸಕ್ಕೆ ಹೋಗಿದ್ದ ವಿದ್ಯಾರ್ಥಿಯೊಬ್ಬ ಹಾಸನದಲ್ಲಿ ಸಾವಿಗೀಡಾಗಿದ್ದಾನೆ. ಬೆಂಗಳೂರಿನ ಜೆ.ಸಿ.ನಗರದ ನಿವಾಸಿ 18 ವರ್ಷದ ಲಿಂಗರಾಜ್ ಮೃತಪಟ್ಟ ಯುವಕ.
ಪ್ರಥಮ ವರ್ಷದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಯಾಗಿದ್ದ ಲಿಂಗರಾಜ್ 27 ಗೆಳೆಯರೊಂದಿಗೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮೂಕನಮನೆ ಜಲಪಾತದ ಬಳಿಗೆ ಹೋಗಿದ್ದಾಗ ಈ ಅವಘಡ ಸಂಭವಿಸಿದೆ.
ಪ್ರವಾಸಕ್ಕೆ ತೆರಳಿದ್ದ ಎಲ್ಲರೂ ಬೆಂಗಳೂರಿನ ಜೆ.ಸಿ.ನಗರ ಮೂಲದ ವಿದ್ಯಾರ್ಥಿಗಳು. ಜಲಪಾತದಲ್ಲಿ ಸ್ನೇಹಿತರೆಲ್ಲ ಈಜಾಡುತ್ತಿದ್ದಾಗ ದುರಂತ ಸಂಭವಿಸಿದೆ. ಲಿಂಗರಾಜ್ ಮುಳುಗುತ್ತಿದ್ದರೂ ಜತೆಗಿದ್ದ ಅಷ್ಟೂ ಗೆಳೆಯರು ರಕ್ಷಿಸಲಾಗದೆ ಅಸಹಾಯಕರಾಗುವಂಥ ಪರಿಸ್ಥಿತಿ ಆಗಿತ್ತು.
ಕೊನೆಗೆ ಸ್ಥಳೀಯರ ನೆರವಿನಿಂದ ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಹೊರಕ್ಕೆ ತೆಗೆದಿದ್ದಾರೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಬಾಡಿಗೆದಾರನೊಂದಿಗಿನ ಗಲಾಟೆಯಲ್ಲಿ ‘ಬಾಡಿ’ಯಾದ ಮನೆ ಮಾಲೀಕ; ತಲೆಗೆ ಪೆಟ್ಟು ಬಿದ್ದು ಸಾವು…