More

    ಜೀವಂತ ಸುಟ್ಟುಹೋದ ಯುವಕ, ಶವ ಕರಟಿ ಕರಕಲು; ಗ್ಯಾಸ್​ ಸಿಲಿಂಡರ್ ಸ್ಫೋಟ, ಸಿಡಿತಕ್ಕೆ ಕಿತ್ತುಹೋಯ್ತು ಮನೆ ಚಾವಣಿ..

    ಚಾಮರಾಜನಗರ: ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಯುವಕನೊಬ್ಬ ಜೀವಂತ ಸುಟ್ಟುಹೋಗಿದ್ದು, ಶವ ಕರಟಿ ಕರಕಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ದುರಂತ ಸಂಭವಿಸಿದೆ.

    ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದ ಸ್ವಾಮಿ (28) ಸಾವಿಗೀಡಾದ ಯುವಕ. ಮನೆಯಲ್ಲಿ ಅಡುಗೆ ಅನಿಲ ಸೋರಿಕೆ ಹಾಗೂ ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಸಂಭವಿಸಿದ ಸ್ಫೋಟದಲ್ಲಿ ಈತ ಸಾವಿಗೀಡಾಗಿದ್ದಾನೆ.

    ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಮನೆಯ ಛಾವಣಿ ಕಿತ್ತು ಹಾರಿಹೋಗಿದ್ದು, ಛಾವಣಿಯ ಜಂತಿಗಳು ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಬೆಂಕಿಗೆ ಆಹುತಿಯಾಗಿವೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಸಂಭವಿಸಿದೆ.

    ಜೀವಂತ ಸುಟ್ಟುಹೋದ ಯುವಕ, ಶವ ಕರಟಿ ಕರಕಲು; ಗ್ಯಾಸ್​ ಸಿಲಿಂಡರ್ ಸ್ಫೋಟ, ಸಿಡಿತಕ್ಕೆ ಕಿತ್ತುಹೋಯ್ತು ಮನೆ ಚಾವಣಿ..
    ಶವದ ಮುಂದೆ ರೋದಿಸುತ್ತಿರುವ ಸಂಬಂಧಿಕರು

    ಶೂಟ್​ ಮಾಡ್ಕೊಂಡು ಉದ್ಯಮಿ ಆತ್ಮಹತ್ಯೆ; ಡೆತ್​ನೋಟ್​ನಲ್ಲಿತ್ತು ಆ ಇಬ್ಬರ ಹೆಸರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts