More

    ಸಿಲಿಂಡರ್ ಸ್ಫೋಟ, ಗುಡಿಸಲು ನಾಶ

    ಕೊಕಟನೂರ: ಆಕಸ್ಮಿಕ ಬೆಂಕಿ ಅವಘಡದಿಂದ ಜಮೀನಿನಲ್ಲಿದ್ದ ಗುಡಿಸಲು ಸಂಪೂರ್ಣ ನಾಶಕೊಂಡಿದ್ದು, ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾದ ಘಟನೆ ಅಥಣಿ ತಾಲೂಕಿನ ಯಲ್ಲಮ್ಮನವಾಡಿ-ಐಗಳಿ ಕ್ರಾಸ್ ಮಧ್ಯದಲ್ಲಿರುವ ಹುದ್ದಾರ ಗದ್ದೆಯಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

    ಬಾಡಗಿ ಗ್ರಾಮದ ಕಾಮು ರಾಮಪ್ಪ ಹುದ್ದಾರ ಅವರಿಗೆ ಸೇರಿದ ಗುಡಿಸಲು ಇದಾಗಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳು ಸೇರಿ ನಾಲ್ವರು ವಾಸಿಸುತ್ತಾರೆ. ಇವರೆಲ್ಲ ತಮ್ಮದೇ ಗದ್ದೆಯಲ್ಲಿ ಕೆಲಸಕ್ಕೆ ಹೋದಾಗ ಗುಡಿಸಲಿನೊಳಗಿದ್ದ ಸಿಲಿಂಡರ್ ಗ್ಯಾಸ್ ಸ್ಫೋಟಗೊಂಡು ಈ ದುರ್ಘಟನೆ ಸಂಭವಿಸಿದೆ.

    ಗುಡಿಸಲಿಗೆ ಬೆಂಕಿ ಹೊತ್ತಿರುವುದನ್ನು ಕಂಡ ಪಕ್ಕದ ಗದ್ದೆಯಲ್ಲಿದ್ದ ಜನರು ಅಗ್ನಿಶಾಮಕ ದಳದವರಿಗೆ ತಿಳಿಸಿದರು. ಆದರೆ, ಅವರು ಬರುವಷ್ಟರಲ್ಲಿ ಗುಡಿಸಲು ಹಾಗೂ ಅದರೊಳಗಿದ್ದ ನಗದು, ಆಭರಣ ಹಾಗೂ ಸಂಗ್ರಹಿಸಿಟ್ಟುಕೊಂಡಿದ್ದ ಜೋಳ, ಕಡಲೆ, ಗೋವಿನ ಜೋಳ ಸೇರಿದಂತೆ ದಿನಬಳಕೆ
    ವಸ್ತುಗಳೆಲ್ಲ ಸುಟ್ಟು ಕರಕಲಾಗಿವೆ. ಅಲ್ಲದೆ, ಎರಡು ಕುರಿಗಳೂ ಸಹ ಸ್ಥಳದಲ್ಲೇ ಮೃತಪಟ್ಟಿವೆ.

    ಘಟನಾ ಸ್ಥಳಕ್ಕೆ ಐಗಳಿ ಠಾಣೆಯ ಪೊಲೀಸರು ಹಾಗೂ ಗ್ರಾಮಲೆಕ್ಕಾಧಿಕಾರಿ ಕಲ್ಮೇಶ ಕಲಮಡಿ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts