ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾತ್ ಇತ್ತೀಚೆಗೆ ಬಿಡುಗಡೆಯಾದ ಕಂಗನಾ ರನೌತ್ ತೇಜಸ್ ಸಿನಿಮಾ ವೀಕ್ಷಿಸಿದ್ದಾರೆ.
ಇತ್ತೀಚೆಗೆ ಬಿಡುಗಡೆಯಾಗಿರುವ ತೇಜಸ್ ಸಿನಿಮಾದ ವಿಶೇಷ ಪ್ರದರ್ಶನವನ್ನ ಲಕ್ನೋದ ಲೋಕಭವನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ತ್ರವನ್ನು ವೀಕ್ಷಿಸಿ ನಂತರ ಸಿಎಂ ಯೋಗಿ ಆದಿತ್ಯನಾಥ್ ಕಣ್ಣೀರು ಹಾಕಿದ್ದಾರೆ.
ಚಿತ್ರದ ಕುರಿತಂತೆ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರತಿಕ್ರಿಯೆ ಹಂಚಿಕೊಂಡ ನಟಿ ಕಂಗನಾ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗಾಗಿ ಹುತಾತ್ಮರ ಜೀವನ ಆಧಾರಿತ ತೇಜಸ್ ಚಲನಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿತ್ತು.
ಚಿತ್ರದ ನೊಕೆಯವರೆಗೂ ನೀವು ಫೋಟೋದಲ್ಲಿ ನೋಡುವಂತೆ ಯೋಗಿ ಅವರಿಗೆ ಕಣ್ಣೀರು ತಡೆಯೋಕೆ ಆಗಿಲ್ಲ. ಕಂಗನಾ ರನೌತ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಟೋದಲ್ಲಿ ಯೋಗಿ ಆದಿತ್ಯನಾಥ್ ಭಾವುಕರಾಗಿರೋದನ್ನ ಕಾಣಬಹುದು.
ನಟಿ ಕಂಗನಾ ಯೋಗಿ ಆದಿತ್ಯನಾಥ್ಗೆ ” ಒಬ್ಬ ಸೈನಿಕನಿಗೆ ಇದಕ್ಕಿಂತ ಇನ್ನೇನು ಬೇಕು…? ನಮ್ಮ ಸೈನಿಕರ ಧೈರ್ಯ, ಶೌರ್ಯ ಮತ್ತು ತ್ಯಾಗವನ್ನು ಕಂಡು ಮಹಾರಾಜ್ ಜೀ ಎಷ್ಟು ಭಾವುಕರಾದರು ಎಂದರೆ ಅವರ ಕಣ್ಣುಗಳು ತುಂಬಿ ಬಂದವು. ಧನ್ಯವಾದಗಳು ಮಹಾರಾಜ್ ಜೀ, ನಿಮ್ಮ ಪ್ರಶಂಸೆ ಮತ್ತು ಆಶೀರ್ವಾದದಿಂದ ನಾವು ಕೃತಜ್ಞರಾಗಿರುತ್ತೇವೆ” ಎಂದು ಧನ್ಯವಾದ ತಿಳಿಸಿದ್ದಾರೆ.
ನಟಿ ಕಂಗನಾ ರನೌತ್ ಸಿನಿಮಾ ಬಿಡುಗಡೆಯಾಗೋಕೂ ಮುನ್ನವೇ ದೆಹಲಿಯ ಇಂಡಿಯನ್ ಏರ್ಫೋರ್ಸ್ ಆಡಿಟೋರಿಯಂನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಲವಾರು ಭಾರತೀಯ ವಾಯುಪಡೆ ಅಧಿಕಾರಿಗಳಿಗೆ ತೇಜಸ್ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು.