ಆನೇಕಲ್: ಯೋಗಾಸನ ವಿಶ್ವಕಪ್ ಪ್ರಥಮ ಬಾರಿಗೆ ಭಾರತದಲ್ಲಿ ನಡೆಯುತ್ತಿದ್ದು, ರಾಜಧಾನಿ ಬೆಂಗಳೂರಿನಲ್ಲೇ ಅದಕ್ಕೆ ವೇದಿಕೆ ಸೃಷ್ಟಿಯಾಗಿದೆ. ಕಳೆದ ವರ್ಷ ಚೀನಾದ ಬೀಜಿಂಗ್ನಲ್ಲಿ ನಡೆದಿದ್ದ ಯೋಗಾಸನ ವಿಶ್ವಕಪ್ ಈ ಸಲ ಬೆಂಗಳೂರಿನ ಹೊರವಲಯದ ಜಿಗಣಿಯ ಪ್ರಶಾಂತಿ ಕುಟೀರದಲ್ಲಿ ನಡೆಯುತ್ತಿರುದೆ. ಈ ಸಲದ ಯೋಗಾಸನ ವಿಶ್ವಕಪ್ 2022ರಲ್ಲಿ 40 ದೇಶಗಳ 150ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.
ಪೂರ್ವನಿಗದಿಯಂತೆ ನಿನ್ನೆಯೇ ಈ ಯೋಗಾಸನ ವಿಶ್ವಕಪ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಬೇಕಿತ್ತು. ಆದರೆ ಕಾರಣಾಂತರಗಳಿಂದ ಅವರ ಅನುಪಸ್ಥಿತಿಯಲ್ಲಿ ನಿನ್ನೆ ಈ ವಿಶ್ವಕಪ್ ಚಾಲನೆ ಪಡೆದುಕೊಂಡಿತ್ತು.
ನಿನ್ನೆ ಬೆಳಗಾವಿಯಿಂದ ಬರುವುದು ವಿಳಂಬವಾಗಿದ್ದರಿಂದ ಇಂದು ಆಗಮಿಸಿರುವ ಸಿಎಂ ಬೊಮ್ಮಾಯಿ, ಯೋಗಾಸನ ವಿಶ್ವಕಪ್ ಉದ್ಘಾಟನೆ ನಡೆಸಿದರು. ಯೋಗಾಸನದ ಮಹತ್ವದ ಕುರಿತು ಸಿಎಂ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ
ಒಂದೇ ಒಂದು ಬ್ರೇಕ್ ಫೇಲ್: ಅಪಘಾತಕ್ಕೆ ಒಳಗಾದ್ವು 4 ಲಾರಿ, 3 ಕಾರು, 2 ಬೈಕ್, ಒಂದು ತಳ್ಳುವ ಗಾಡಿ!