More

    ಕುಕ್ಕೆ, ಧರ್ಮಸ್ಥಳಕ್ಕೆ ಯಶ್ ಭೇಟಿ; ಕರುನಾಡಲ್ಲಿ ‘ಕೆಜಿಎಫ್ 2’ ಟಿಕೆಟ್ ಬುಕ್ಕಿಂಗ್ ಆರಂಭ!

    ದಕ್ಷಿಣ ಕನ್ನಡ: ದೇಶದ ಮೂಲೆ ಮೂಲೆಯಲ್ಲೂ ಕೆಜಿಎಫ್ 2′ ಕ್ರೇಜ್ ಇದ್ದರೂ, ಸಿನಿಮಾದ ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಿತ್ರತಂಡ ಮಾತ್ರ ತಮ್ಮ ಸಿನಿಮಾದ ಪ್ರಚಾರವನ್ನು ನಿಲ್ಲಿಸದೆ ಮಾಡುತ್ತಿದ್ದಾರೆ. ಇದರ ಜೊತೆಗೆ, ದೇವರ ದರ್ಶನ ಹಾಗೂ ಆಶೀರ್ವಾದ ಪಡೆಯುವುದನ್ನು ಮಾತ್ರ ನಟ ಯಶ್ ಮರೆತಿಲ್ಲ ಎಂಬಂತೆ ಕಾಣಿಸುತ್ತಿದೆ.
    ಹೌದು, ‘ಕೆಜಿಎಫ್ 2′ ಸಿನಿಮಾದ ಪ್ರಚಾರದಲ್ಲಿ ಯಶ್ ಮತ್ತವರ ತಂಡ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಕಳೆದೆರಡು ವಾರಗಳಿಂದ ನಟ ಯಶ್ ಇಡೀ ದೇಶದ ಪ್ರಮುಖ ನಗರಗಳಿಗೆ ವಿಸಿಟ್ ಹಾಕುತ್ತಿದ್ದಾರೆ. ಇನ್ನು, ಸಿನಿಮಾ ರಿಲೀಸ್ ಆಗೋಕೆ ಹಾಗೂ ಅಬ್ಬರಿಸೋಕೆ ಕೇವಲ ಮೂರೇ ದಿನ ಬಾಕಿಯಿದೆ. ಹಾಗಾಗಿ, ಈಗಲೇ ನಟ ಯಶ್ ಟೆಂಪಲ್ ರನ್ ಆರಂಭಿಸಿದಂತೆ ಕಾಣುತ್ತಿದೆ.
    ಇಂದು ನಟ ಯಶ್ ಅವರು ದಕ್ಷಿಣ ಕನ್ನಡದ ಸುಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ಬಳಿಕ ಧರ್ಮಸ್ಥಳದ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದಾರೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಆಶೀರ್ವಾದವನ್ನು ಸಹ ಪಡೆದಿದ್ದಾರೆ. ಯಶ್ ಅವರ ಈ ಭೇಟಿಯ ಕುರಿತಾದ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.
    ಇನ್ನು, ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ನಟ ರಾಕಿಂಗ್ ಸ್ಟಾರ್ ಯಶ್ ದರ್ಶನದ ಬಳಿಕ ಮಾಧ್ಯಮಗಳ ಜತೆಗೆ ಮಾತಾಡಿದ್ದು, ”ಸಿನಿಮಾ ರಿಲೀಸ್ ಹತ್ತಿರ ಬರ್ತಿದೆ. ಹಾಗಾಗಿ, ದೇವಸ್ಥಾನಕ್ಕೆ ಭೇಟಿ ನೀಡಿದ್ದೀನಿ. ನಾನು ಮತ್ತು ನಮ್ಮ ನಿರ್ಮಾಪಕರು ಒಳ್ಳೆ ಕೆಲಸ ಶುರು ಮಾಡುವಾಗ ದೇವರ ದರ್ಶನ ಮಾಡ್ತೇವೆ. ನಾವು ಪಟ್ಟ ಶ್ರಮಕ್ಕೆ ದೇವರ ಅನುಗ್ರಹ ಇರಬೇಕಲ್ವಾ. ಸದ್ಯ, ಮಂಜುನಾಥ ಸ್ವಾಮಿ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹ ಪಡೆದಿದ್ದೇವೆ. ವೀರೇಂದ್ರ ಹೆಗ್ಗಡೆಯವರ ಜೊತೆ ಮಾತನಾಡಿ ಅವರ ಆಶೀರ್ವಾದ ಪಡೆದಿದ್ದೇವೆ. ನಾನು ತುಂಬಾ ವರ್ಷದಿಂದ ಧರ್ಮಸ್ಥಳಕ್ಕೆ ಬರ್ತಾ ಇದೇನೆ. ಹೆಗ್ಗಡೆಯವರು ನನ್ನೆಲ್ಲಾ ಬೆಳವಣಿಗೆಯನ್ನೂ ನೋಡ್ತಾ ಬಂದವರು. ಇವತ್ತು ಅವರು ಖುಷಿ ಪಟ್ಟು ಆಶೀರ್ವಾದ ಮಾಡಿದ್ರು. ‘ಕೆಜಿಎಫ್ 2′ ರಿಲೀಸ್ ಅಭಿಮಾನಿಗಳಿಗೊಂದು ಖುಷಿ. ಈಗ, ಟಿಕೆಟ್ ಓಪನ್ ಆಗಿದೆ, ಎಲ್ಲರೂ ನಮ್ಮನ್ನು ಆಶೀರ್ವದಿಸಿ”, ಎಂದು ಹೇಳಿದ್ದಾರೆ.
    ಅಂದಹಾಗೆ, ದೆಹಲಿ, ಮುಂಬೈ, ಚೆನ್ನೈ, ಕೇರಳ ಸೇರಿ ಹಲವು ನಗರಗಳಿಗೆ ವಿಸಿಟ್ ಕೊಟ್ಟ ಬಳಿಕ ಕರ್ನಾಟಕದಲ್ಲೂ ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಎಲ್ಲಿ ನೋಡಿದರೂ ಕೆಜಿಎಫ್ 2 ಸಿನಿಮಾ ಬಗ್ಗೆನೇ ಚರ್ಚೆಯಾಗುತ್ತಿದೆ. ಎಲ್ಲಾ ಕಡೆ ಟಿಕೆಟ್ ಬುಕಿಂಗ್ ಜೋರಾಗಿಯೇ ಆಗುತ್ತಿದೆ. ಇನ್ನು, ಇಂದೇ ತೆಲಂಗಾಣ, ಆಂಧ್ರಪ್ರದೇಶ್ ಹಾಗೂ ಕರ್ನಾಟಕದಲ್ಲಿ ಪ್ರೀಬುಕ್ಕಿಂಗ್ ಆರಂಭವಾಗಿದೆ.

    ಕುಕ್ಕೆ, ಧರ್ಮಸ್ಥಳಕ್ಕೆ ಯಶ್ ಭೇಟಿ; ಕರುನಾಡಲ್ಲಿ 'ಕೆಜಿಎಫ್ 2' ಟಿಕೆಟ್ ಬುಕ್ಕಿಂಗ್ ಆರಂಭ! ಕುಕ್ಕೆ, ಧರ್ಮಸ್ಥಳಕ್ಕೆ ಯಶ್ ಭೇಟಿ; ಕರುನಾಡಲ್ಲಿ 'ಕೆಜಿಎಫ್ 2' ಟಿಕೆಟ್ ಬುಕ್ಕಿಂಗ್ ಆರಂಭ!

    ಮಹೇಶ್ ಜತೆ ಮೇಘಾ: ಟಾಲಿವುಡ್​ಗೆ ಎಂಟ್ರಿನಾ ಅಥವಾ ಜಾಹೀರಾತಿನ ಶೂಟಿಂಗ್​ಗಾ?

    ಅಪ್ಪು ಅಭಿಮಾನಿಗಳಿಂದ ರಶ್ಮಿಕಾಗೆ ಛೀಮಾರಿ! ಕಾರಣ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts