ಬೆಂಗಳೂರು: ಯಶ್ ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಮನೆಯಲ್ಲಿರುವುದಿಲ್ಲ ಎಂದು ಗುರುವಾರ ರಾತ್ರಿಯಷ್ಟೇ ಸೋಷಿಯಲ್ ಮೀಡಿಯಾ ಎಂದು ಹೇಳಿದ್ದರು. ಅದಕ್ಕೆ ಸರಿಯಾಗಿ, ಅವರು ಕುಟುಂಬದ ಜತೆಗೆ ದುಬೈಗೆ ಹಾರಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಘೋಷಣೆ ಇಲ್ಲ; ಅಭಿಮಾನಿಗಳಿಗೆ ‘ರಾಕಿಂಗ್ ಸ್ಟಾರ್’ ಪತ್ರ
ಜನವರಿ 8ರಂದು ಯಶ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಅಭಿಮಾನಿಗಳಿಗೆ ಒಂದು ಪತ್ರ ಬರೆದಿದ್ದಾರೆ. ‘ಈ ವರ್ಷದ ಹುಟ್ಟುಹಬ್ಬಕ್ಕೆ ನಿಮ್ಮ ಜೊತೆ ಇರಲು ಸಾಧ್ಯವಾಗುತ್ತಿಲ್ಲ ಆದರೆ ಆದಷ್ಟು ಬೇಗ ನಿಮಗೆ ಸಿಗುತ್ತೇನೆ ಮತ್ತು ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ’ ಎಂದು ಹೇಳಿಕೊಂಡಿದ್ದಾರೆ. ಹೀಗೆ ಪತ್ರ ಪೋಸ್ಟ್ ಮಾಡಿ ಅವರು ದುಬೈಗೆ ಕುಟುಂಬ ಸಮೇತ ಹಾರಿದ್ದಾರೆ.
ಅದಕ್ಕೂ ಮುನ್ನವೇ ಯಶ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿದ್ದರು. ಯಶ್ ಈ ಬಾರಿ ಹುಟ್ಟುಹಬ್ಬಕ್ಕೆ ಇರುವುದಿಲ್ಲ ಎಂದು ಅರಿತ ಅವರ ಅಭಿಮಾನಿಗಳು, ಅವರ ಮನೆಯತ್ತ ಹೋಗಿದ್ದಾರೆ. ಈ ಸಂದರ್ಭದಲ್ಲಿ ಯಶ್ ತಮ್ಮ ಅಭಿಮಾನಿಗಳನ್ನು ಭೇಟಿ ಮಾಡಿ ಕಳುಹಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ಆರೋಗ್ಯದ ಜವಾಬ್ದಾರಿ ಆಕೆಗೆ ಮಾತ್ರ ಸೀಮಿತವಾಗಿಲ್ಲ! ವಿದ್ಯಾ ಬಾಲನ್ ಮಾತಿನ ಆಶಯವೇನು?
ಇನ್ನು, ಯಶ್ ಈ ಬಾರಿ ಹುಟ್ಟುಹಬ್ಬಕ್ಕೆ ಯಾವುದೇ ಹೊಸ ಚಿತ್ರದ ಘೋಷಣೆ ಇರುವುದಿಲ್ಲ ಎಂದು ಹೇಳಿದ್ದರು. ಏನೋ ವಿಭಿನ್ನ ಪ್ರಯತ್ನವಾಗಿರುವುದರಿಂದ, ಇನ್ನೊಂದಿಷ್ಟು ಸಮಯ ಕೊಡಿ ಎಂದು ಕೇಳಿದ್ದರು. ಆದರೆ, ಜನವರಿ 8ರಂದು ದುಬೈನ ಬುರ್ಜ್ ಖಲೀಫಾ ಮೇಲೆ ಯಶ್ ಅಭಿನಯದ ಹೊಸ ಚಿತ್ರದ ಘೋಷಣೆಯಾಗಲಿದೆ ಮತ್ತು ಅದೇ ಕಾರಣಕ್ಕೆ ಯಶ್ ತಮ್ಮ ಕುಟುಂಬ ಸಮೇತ ಅಲ್ಲಿಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ‘ತಾಳ್ಮೆ ಮತ್ತು ಪ್ರೀತಿ ಇರಲಿ. ನಿಮ್ಮ ಕಾಯುವಿಕೆಯನ್ನು ಅರ್ಥಪೂರ್ಣವಾಗಿಸುತ್ತೇನೆ’ ಎಂದು ಯಶ್ ಹೇಳಿಕೊಂಡಿದ್ದರೂ, ಇಂಥದ್ದೊಂದು ಸುದ್ದಿ ಓಡಾಡುತ್ತಿದೆ. ಇದರಲ್ಲಿ ಎಷ್ಟು ನಿಜವೋ, ಎಷ್ಟು ಸುಳ್ಳೋ ಇನ್ನಷ್ಟೇ ಗೊತ್ತಾಗಬೇಕಿದೆ.
ರೀಮೇಕ್ ಆಗ್ತಿದೆಯಂತೆ ‘ತೇಜಾಬ್’ … ಅನಿಲ್-ಮಾಧುರಿ ಪಾತ್ರಗಳಲ್ಲಿ ರಣವೀರ್, ಜಾಹ್ನವಿ?