ಯಾದಗಿರಿ: ಜಿಲ್ಲೆಯಾದ್ಯಂತ ಇಂದು ಗುಡುಗು ಸಹಿತ ಭಾರಿ ಮಳೆಯಾಗಿದೆ. ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ಜನರಿಗೆ ಸ್ವಲ್ಪ ತಂಗಾಳಿಯನ್ನು ಮಳೆ ತಂದಿದ್ದರೆ, ಅದರೊಂದಿಗೆ ಕೆಲ ಸಮಸ್ಯೆಗಳನ್ನೂ ಸೃಷ್ಟಿಸಿ ಹೋಗಿದೆ.
ಭಾರಿ ಮಳೆಯಿಂದಾಗಿ ಅಲ್ಲಲ್ಲಿ ಮರಗಳು ಹಾಗೂ ವಿದ್ಯುತ್ ಕಂಬಗಳು ನೆಲಕ್ಕುರಳಿವೆ. ಸುಭಾಷ್ ಚೌಕ್ ಹತ್ತಿರವಿರುವ ಉಳ್ಳೆಸೂಗುರ್ ಕಾಂಪ್ಲೆಕ್ಸ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ಮೇಲ್ಛಾವಣಿ ಕುಸಿದು ಬಿದ್ದಿದೆ. ಇದರಿಂದಾಗಿ ಓರ್ವ ಮಹಿಳೆ ಗಾಯಾಳುವಾಗಿರುವುದಾಗಿ ಹೇಳಲಾಗಿದೆ. ಕಾಂಪ್ಲೆಕ್ಸ್ ಬಳಿ ಇದ್ದ ಹತ್ತಾರು ಬೈಕ್ಗಳು ನುಜ್ಜುಗುಜ್ಜಾಗಿರುವ ಮಾಹಿತಿಯಿದೆ.
ಯಾದಗಿರಿ ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಾಗಪ್ಪ ಹೆಸರಿನ ರೈತನಿಗೆ ಸೇರಿರುವ ಹಸುವೊಂದಕ್ಕೆ ಸಿಡಿಲು ಬಡಿದಿದ್ದು, ಹಸು ಸ್ಥಳದಲ್ಲೇ ಸಾವನ್ನಪ್ಪಿದೆ. ಯಾದಗಿರಿ-ಬೆಂಗಳೂರು ರಾಜ್ಯ ಹೆದ್ದರಿಯಲಿ ದೊಡ್ಡ ನೀಲಗಿರಿ ಮರವೊಂದು ಧರೆಗುರುಳಿದೆ. ರಸ್ತೆ ಮೇಲೆ ಮರ ಬಿದ್ದ ಪರಿಣಾಮ ಫುಲ್ ಟ್ರಾಫಿಕ್ ಜಾಮ್ ಆಗಿದೆ. ಗ್ರಾಮಸ್ಥರ ನೆರವಿನಿಂದಾಗಿ ಮರವನ್ನು ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ದಿನಕ್ಕೆ 5 ಬಾಟಲಿ ಬಿಯರ್ ಕುಡಿದು 46 ದಿನಗಳಲ್ಲಿ 18 ಕೆಜಿ ಇಳಿಸಿದ ಭೂಪ!
ಆ ರೀತಿಯ ವಿಡಿಯೋವನ್ನು ಅಮ್ಮನಿಗೆ ಕಳುಹಿಸಿದ ಮಗಳು! ಇದೆಲ್ಲ ಆ್ಯಪ್ ತಪ್ಪೆಂದು ಕ್ಷಮೆಯಾಚನೆ