ಚಿಕ್ಕಮಗಳೂರು: ಲಾಕ್ಡೌನ್ನಿಂದಾಗಿ ರೈತರ ಪಾಡು ಸಂಕಷ್ಟಕ್ಕೀಡಾಗಿದೆ. ಬೆಳೆದ ಬೆಳೆಗಳಿಗೆ ಮಾರುಕಟ್ಟೆ ಸಿಗದಂತಾಗಿದೆ. ರೈತರ ಪರವಾಗಿ ಸರ್ಕಾರ ನಿಂತಿದೆ. ಆದರೂ ಪ್ರತಿ ಹಳ್ಳಿಯ ರೈತರನ್ನು ತಲುಪುವುದು ಕೊಂಚ ಕಷ್ಟವೇ ಆಗುತ್ತಿದೆ.
ಹೀಗಿರುವಾಗ ಮಾಜಿ ಶಾಸಕ ವೈ.ಎಸ್.ವಿ.ದತ್ತ ಕಡೂರು ರೈತರ ನೆರವಿಗೆ ನಿಂತಿದ್ದಾರೆ. ಜಮೀನಿಗೇ ಹೋಗಿ ಅವರು ಬೆಳೆದ ಹಣ್ಣು, ತರಕಾರಿ ಖರೀದಿ ಮಾಡಿದ್ದಾರೆ.
ಇದನ್ನೂ ಓದಿ: ಏರ್ ಇಂಡಿಯಾದ ಐವರು ಪೈಲಟ್ಗಳಲ್ಲಿ ಕರೊನಾ ಸೋಂಕು; ಚೀನಾವೇ ಮೂಲ…!
ಸುಮಾರು ಒಂದೂವರೆ ಲಕ್ಷ ರೂ.ಮೌಲ್ಯದ 10 ಟನ್ ಕಲ್ಲಂಗಡಿ, 3 ಟನ್ ಟೊಮ್ಯಾಟೋವನ್ನು ಅದರ ಬೆಳೆಗಾರರಿಂದಲೇ ನೇರವಾಗಿ ಖರೀದಿಸಿ ಔದಾರ್ಯ ತೋರಿಸಿದ್ದಾರೆ.
ಕಡೂರಿನ ಕೆಲವು ರೈತರು ತಮ್ಮ ಕಲ್ಲಂಗಡಿ, ಟೊಮ್ಯಾಟೋಗಳನ್ನೆಲ್ಲ ಮಾರಾಟ ಮಾಡಲು ಸಾಧ್ಯವಾಗದೆ ಜಮೀನಿನಲ್ಲಿಯೇ ಬಿಟ್ಟಿದ್ದರು. ಅವರಿಗೆಲ್ಲ ಹಣ ಪಾವತಿಸಿ ಖರೀದಿ ಮಾಡಿದ ವೈ.ಎಸ್.ವಿ.ದತ್ತ, ಅದನ್ನು ಕಡೂರು, ಬೀರೂರು ಮತ್ತಿತರ ಕಡೆ ಉಚಿತವಾಗಿ ಹಂಚಲು ತೀರ್ಮಾನಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ಬೇಕರಿ ಮಾಲೀಕನ ಬಂಧನ..ಕಾರಣ ಅಂಗಡಿಯೆದುರು ಹಾಕಿದ್ದ ಒಂದು ಜಾಹೀರಾತು…!