More

    ಯುಗಾದಿ ದಿನದಂದು ಶುರುವಾಯ್ತು ‘ಕಾಂತಾರ 2’ ಚಿತ್ರದ ಬರವಣಿಗೆ …

    ಬೆಂಗಳೂರು: ಮಾರ್ಚ್​ನಿಂದ ‘ಕಾಂತಾರ 2’ ಚಿತ್ರದ ಬರವಣಿಗೆ ಕೆಲಸವನ್ನು ಶುರು ಮಾಡುವುದಾಗಿ ರಿಷಭ್​ ಶೆಟ್ಟಿ ಹೇಳಿದ್ದರು. ಅದರಂತೆ ಇಂದಿನಿಂದ ಬರವಣಿಗೆ ಕೆಲಸಕ್ಕೆ ಓಂಕಾರ ಹಾಕಿದ್ದಾರೆ.

    ಇದನ್ನೂ ಓದಿ: ರೈತನೇ ನಿಜವಾದ ‘ಶ್ರೀಮಂತ’ ಎಂದು ಸಾರುವ ಚಿತ್ರದ ಟ್ರೈಲರ್ ಬಿಡುಗಡೆ

    ಇಂದಿನಿಂದ ‘ಕಾಂತಾರ 2’ ಚಿತ್ರದ ಬರವಣಿಗೆ ಕೆಲಸ ಪ್ರಾರಂಭವಾಗಿದೆ. ಈ ಕುರಿತು ಟ್ವೀಟ್​ ಮಾಡಿರುವ ರಿಷಭ್​ ಶೆಟ್ಟಿ, ಚಿತ್ರದ ಕೆಲಸಗಳನ್ನು ಶುರು ಮಾಡಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಮುಂದಿನ ಕೆಲವು ತಿಂಗಳುಗಳ ಕಾಲ ಬರವಣಿಗೆ ಕೆಲಸ ಮುಂದುವರೆಯಲಿದ್ದು, ಆ ನಂತರ ಚಿತ್ರೀಕರಣ ಪ್ರಾರಂಭವಾಗಲಿದೆ.
    ಅಣ್ಣಪ್ಪ ಪಂಜುರ್ಲಿ ಕೋಲಕ್ಕೆ ರಿಷಭ್​ ಶೆಟ್ಟಿ ಮತ್ತು ತಂಡದವರು ಪ್ರಾರ್ಥನೆ ಸಲ್ಲಿಸುವುದಕ್ಕೆ ಹೋದ ಸಂದರ್ಭದಲ್ಲಿ, ‘ಕಾಂತಾರ 2′ ಚಿತ್ರಕ್ಕೆ ಅನುಮತಿ ಕೇಳಿದ್ದರು ಮತ್ತು ಅವರಿಗೆ ದೈವದಿಂದ ಅಭಯ ಸಿಕ್ಕಿತ್ತು ಎಂದು ಹೇಳಲಾಗಿತ್ತು.

    ಆ ನಂತರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ”ಕಾಂತಾರ’ ಚಿತ್ರಕ್ಕೆ ಸಿಕ್ಕ ಯಶಸ್ಸು ಮತ್ತು ಪ್ರೋತ್ಸಾಹ, ‘ಕಾಂತಾರ 2’ ಮಾಡಲು ಪ್ರೇರೇಪಿಸಿದೆ. ಅದು “ಕಾಂತಾರ’ದ ಮುಂದುವರೆದ ಭಾಗವೂ ಇರಬಹುದು ಅಥವಾ ಆ ಕಥೆಗಿಂತ ಹಿಂದಿನ ಕಥೆಯೂ ಇರಬಹುದು. ರಿಷಭ್​ ಜತೆಗೆ ಕೂತು ಚರ್ಚೆ ನಡೆಸಿ, ಮುಂದಿನ ಕೆಲವು ತಿಂಗಳಲ್ಲಿ ಅಧಿಕೃತವಾಗಿ ಘೋಷಿಸುತ್ತೇವೆ. ‘ಕಾಂತಾರ 2′ ಚಿತ್ರ ಆಗುತ್ತಿರುವುದು ಹೌದು. ಆದರೆ, ಇಂಥದ್ದೇ ಸಮಯದಲ್ಲಿ ಬರಲಿದೆ ಎಂದು ಹೇಳುವುದು ಕಷ್ಟ. ನಾವು ಯಾವುದೇ ಟೈಮ್​ಲೈನ್​ ಹಾಕಿಕೊಂಡಿಲ್ಲ. ಚಿತ್ರ ಯಾವಾಗ ಬೇಕಾದರೂ ಬರಬಹುದು’ ಎಂದು ಹೇಳಿದ್ದರು.

    ಇದನ್ನೂ ಓದಿ: ಹಲವು ಕಥೆಗಳ ‘ಜುಗಲ್​ಬಂದಿ’ ಚಿತ್ರದ ಟ್ರೇಲರ್​​ ಬಿಡುಗಡೆ …

    ಅದರಂತೆ, ಈಗ ‘ಕಾಂತಾರ 2’ ಚಿತ್ರದ ಕೆಲಸಗಳು ಯುಗಾದಿ ಹಬ್ಬದ ಪ್ರಯುಕ್ತ ಇಂದು ಅಧಿಕೃತವಾಗಿ ಪ್ರಾರಂಭವಾಗಿದೆ. ಮುಂದಿನ ಕೆಲವು ತಿಂಗಳ ಕಾಲ ಪ್ರೀ-ಪ್ರೊಡಕ್ಷನ್​ ಕೆಲಸಗಳು ನಡೆಯಲಿದ್ದು, ಆ ನಂತರ ಚಿತ್ರೀಕರಣ ಶುರುವಾಗಲಿದೆ. ಮೊದಲ ಚಿತ್ರದಲ್ಲಿ ನಟಿಸಿದವರು ಇಲ್ಲಿ ಯಾರೆಲ್ಲಾ ಇರುತ್ತಾರೆ? ಮತ್ತು ಹೊಸದಾಗಿ ಯಾರು ಸೇರ್ಪಡೆಯಾಗಲಿದ್ದಾರೆ? ಎಂಬ ವಿಷಯ ಇನ್ನಷ್ಟೇ ಹೊರಬೀಳಬೇಕಿದೆ. ಈ ಚಿತ್ರವನ್ನು ‘ಕಾಂತಾರ’ ನಿರ್ಮಿಸಿದ್ದ ಹೊಂಬಾಳೆ ಫಿಲಂಸ್​ನ ವಿಜಯ್​ ಕಿರಗಂದೂರು ನಿರ್ಮಿಸುತ್ತಿದ್ದಾರೆ.

    ಜೋಗಪ್ಪನನ್ನು ಹುಡುಕಿ ಹೊರಟ ಸಂಜನಾ ದಾಸ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts