ವಿಜಯವಾಣಿ ಸುದ್ದಿಜಾಲ ಧಾರವಾಡ
ಹವಾಮಾನ ಬದಲಾವಣೆಯು ಸಿಹಿ ನೀರಿನ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ. ಜಾಗತಿಕ ತಾಪಮಾನ ಏರಿಕೆಯು ಮಳೆಯ ನಮೂನೆಗಳನ್ನು ಬದಲಾಯಿಸಲಿದೆ. ಶುಷ್ಕ ದಿನಗಳ ಸಂಖ್ಯೆಯಲ್ಲಿ ಹೆಚ್ಚಳ, ಅಲ್ಪಾವಧಿಯಲ್ಲಿ ಧಾರಾಕಾರ ಮಳೆ ಮತ್ತು ಹವಾಮಾನ ವೈಪರಿತ್ಯ ಇವೆಲ್ಲವೂ ಬರ ಮತ್ತು ಪ್ರವಾಹದ ಸಾಧ್ಯತೆ ಹೆಚ್ಚಿಸುತ್ತವೆ. ಇದು ಪ್ರತಿಯಾಗಿ ಆಹಾರ ಸರಬರಾಜು ಮತ್ತು ಮಾನವನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪರಿಸರ ತಜ್ಞ ಪಿ.ವಿ. ಹಿರೇಮಠ ಹೇಳಿದರು.
ನಗರದ ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್, ರೋಟರಿ ಕ್ಲಬ್ ಆ್ ಸೆವೆನ್ ಹಿಲ್ಸ್, ನೇಚರ್ ಸ್ಟ್ ಇಕೋ ವಿಲೇಜ್ ಮತ್ತು ಯುವ ರೆಡ್ ಕ್ರಾಸ್ ಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ನೀರಿಗಾಗಿ ನಾರಿಯರ ನಡೆ (ವಾಕ್ಥಾನ್) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭವಿಷ್ಯದಲ್ಲಿ ನೀರು ಸಂಘರ್ಷದ ಪ್ರಮುಖ ಮೂಲವಾಗಿದೆ ಎಂದು ನಿರೀಕ್ಷಿಸಲಾಗಿದೆ. ಬೇಡಿಕೆ ಗಗನಕ್ಕೆ ಏರುತ್ತಿದ್ದು, ಸಿಹಿ ನೀರಿನ ಮೀಸಲು ತೀವ್ರವಾಗಿ ಒತ್ತಡಕ್ಕೊಳಗಾಗುತ್ತದೆ. ಅನೇಕ ಪ್ರದೇಶಗಳಲ್ಲಿ ಅಂತರ್ಜಲ ಸಂಪನ್ಮೂಲಗಳು ಕುಸಿಯುತ್ತಿರುವುದು ಮತ್ತು ನೀರಿನ ಅಸಮರ್ಥ ಬಳಕೆ ಗಂಭೀರ ಕಳವಳಕಾರಿ ವಿಷಯವಾಗಿದೆ ಎಂದರು.
ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಎಂ.ಎಸ್. ಸಾಳುಂಕೆ ಜಾಥಾಕ್ಕೆ ಚಾಲನೆ ನೀಡಿದರು. ಬಳಿಕ ಕೆಡಿಸಿ ಕಾಲೇಜಿನಿಂದ ರಂಗಾಯಣವರೆಗೂ ನೀರಿಗಾಗಿ ನಡಿಗೆ ಜಾಥಾ ನಡೆಸಲಾಯಿತು.
ರೋಟರಿ ಕ್ಲಬ್ ಆಫ್ ಸೆವೆನ್ ಹಿಲ್ಸ್ ಅಧ್ಯೆ ಸಂಗೀತಾ ಬಾಗೇವಾಡಿ, ಮಾರ್ತಾಂಡಪ್ಪ ಕತ್ತಿ, ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಅಧ್ಯಕ್ಷ ಸುನೀಲ ಬಾಗೇವಾಡಿ, ಶರಯೂ ನಾಯಕ್, ಆದಿತಿ ಕನವಳ್ಳಿ, ಸುಮನ್ ಹೆಬ್ಳೀಕರ, ವೀಣಾ ಹಿರೇಮಠ, ರಂಜಿತಾ ಜಾಧವ, ಶೀತಲ ಲದ್ವಾ, ಗೀತಾ ಹದ್ಲಿ, ಸುನಿತಾ ಹಿರೇಮಠ, ಸುಮಿತ್ರಾ ಸಿದ್ದಾಶ್ರಮ, ರೇಣುಕಾ ಭರತ, ಸುಜಾತಾ ಆನಿಶೆಟ್ಟರ್, ಗುಲ್ಜನ್ಸಿಂಗ್, ಅರುಣಕುಮಾರ ಶೀಲವಂತ, ಗಿರೀಶ ಬೆಟಗೇರಿ, ಮಹಾಂತೇಶ ಗುಂಜಟ್ಟಿ, ಇತರರು ಇದ್ದರು.