ಬೆಂಗಳೂರು: ತಾನು ಖರೀದಿಸಿದ್ದ ಹೊಸ ಮನೆಯನ್ನು ತೋರಿಸಬೇಕು ಎಂದು ಕುಟುಂಬಸ್ಥರನ್ನು ಕರೆದಿದ್ದ ಮಹಿಳೆ, ಮನೆ ನೋಡಲು ಬಂದಿದ್ದವರ ಕಣ್ಮುಂದೆಯೇ ಸಾವಿಗೀಡಾದ ದುರಂತವೊಂದು ನಡೆದಿದೆ.
ಆಂಧ್ರಪ್ರದೇಶದ ಕೃಷ್ಣ ಜಿಲ್ಲೆ ತೇಲಾಪೋರಲು ಗ್ರಾಮದ ಭಾನುರೇಖಾ (22) ಸಾವಿಗೀಡಾದವರು. ಈಕೆ ಬೆಂಗಳೂರಿನ ಇನ್ಫೊಸಿಸ್ನಲ್ಲಿ ಉದ್ಯೋಗಿಯಾಗಿದ್ದು, ಇತ್ತೀಚೆಗೆ ಎಲೆಕ್ಟ್ರಾನಿಕ್ ಸಿಟಿಯ ಪ್ರಗತಿನಗರದಲ್ಲಿ ಹೊಸ ಮನೆ ಖರೀದಿಸಿದ್ದರು. ಈ ಮನೆಯನ್ನು ತೋರಿಸಲು ಕುಟುಂಬಸ್ಥರನ್ನು ಆಹ್ವಾನಿಸಿದ್ದರು.
ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ರಾಜ್ಯಕ್ಕೆ ಮುಂಗಾರು ಪ್ರವೇಶ ಯಾವಾಗ?
ಮನೆ ನೋಡಲು ಬಂದಿದ್ದ ಕುಟುಂಬಸ್ಥರನ್ನು ಕ್ಯಾಬ್ನಲ್ಲಿ ಕಬ್ಬನ್ಪಾರ್ಕ್ ಮುಂತಾದ ಪ್ರೇಕ್ಷಣೀಯ ಸ್ಥಳ ತೋರಿಸಲು ಕರೆದುಕೊಂಡು ಬಂದಿದ್ದು, ಅವರಿದ್ದ ವಾಹನ ಕೆ.ಆರ್. ವೃತ್ತದ ನೀರು ತುಂಬಿದ್ದ ಅಂಡರ್ಪಾಸ್ನಲ್ಲಿ ಸಿಲುಕಿಕೊಂಡಿತ್ತು. ಪರಿಣಾಮವಾಗಿ ಕಾರಿನೊಳಗೆ ನೀರು ತುಂಬಿಕೊಂಡಿದ್ದು ಬಾಗಿಲು ತೆರೆಯಲಾಗದೆ ತೊಂದರೆಗೆ ಸಿಲುಕಿದ್ದರು.
ಇದನ್ನೂ ಓದಿ: ಎಷ್ಟು ಕೋರಿಕೊಂಡರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ; ವೈದ್ಯರು-ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿಯಾದ ಮಹಿಳೆ
ಕ್ಯಾಬ್ನಲ್ಲಿ ಸಿಲುಕಿದ್ದವರನ್ನು ಸಾರ್ವಜನಿಕರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಭಾನುರೇಖಾರನ್ನು ಸಮೀಪದ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಸ್ವಸ್ಥ ಭಾನುರೇಖಾರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ಮತ್ತು ಸಿಬ್ಬಂದಿ ಹಿಂಜರಿದಿದ್ದು, ಚಿಕಿತ್ಸೆ ತಡವಾದ್ದರಿಂದ ಈಕೆ ಕುಟುಂಬಸ್ಥರ ಕಣ್ಮುಂದೆಯೇ ಸಾವಿಗೀಡಾದರು.
ಅಂದು ‘ತಪ್ಪಾಯ್ತು ಕ್ಷಮಿಸಿ’ ಎಂದು ಕೈಮುಗಿದು ಕೇಳಿ ಇಂದು ಮತ್ತದೇ ತಪ್ಪು ಮಾಡಿದ ಜಮೀರ್ ಅಹಮದ್!