ಚಿಕ್ಕಮಗಳೂರು : ಮೂರು ತಿಂಗಳ ಹಿಂದಷ್ಟೇ ಮದುಮಗಳಾಗಿ ವೈವಾಹಿಕ ಜೀವನ ಆರಂಭಿಸಿದ್ದ ಯುವತಿಯೊಬ್ಬಳು ಮಸಣದ ಹಾದಿ ಹಿಡಿರುವ ದುರಂತ ನಡೆದಿದೆ. ಚಿಕ್ಕಮಗಳೂರು ನಗರದ ಪೆನ್ಷನ್ ಮೊಹಲ್ಲಾದ ನಿವಾಸಿ 22 ವರ್ಷದ ಸಿಮ್ರಾನ್ ಮೃತ ದುರ್ದೈವಿ.
ಸಿಮ್ರಾನ್ಳ ಪತಿ ಫೈರೋಜ್ ತನ್ನ ಅಕ್ರಮ ಸಂಬಂಧದ ಬಗ್ಗೆ ಪ್ರಶ್ನಿಸಿದಕ್ಕೆ ಆಕೆಯನ್ನು ನೀರಿನ ಸಂಪ್ನಲ್ಲಿ ಮುಳುಗಿಸಿ ಕೊಲೆ ಮಾಡಿರುವುದಾಗಿ ಸಿಮ್ರಾನ್ ಕುಟುಂಬಸ್ಥರು ಆರೋಪಿಸಿದ್ದಾರೆ. ಚಿಕ್ಕಮಗಳೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸಿಮ್ರಾನ್ ಪತಿ ಫೈರೋಜ್ ಮತ್ತು ಆಕೆಯ ಅತ್ತೆ-ಮಾವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಐಸ್ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿದ ಕಿರಾತಕ! ಗಂಡಹೆಂಡತಿ ಜಗಳಕ್ಕೆ ಮಕ್ಕಳಿಗೆ ಸಜೆ!