More

    ಬ್ರಹ್ಮಾವರ ಉಪ್ಪಿನಕೋಟೆ ಫ್ಲಾಟ್‌ನಲ್ಲಿ ಮಹಿಳೆ ಮೃತದೇಹ, ಕೊಲೆ ಶಂಕೆ

    ಕುಂದಾಪುರ: ಬ್ರಹ್ಮಾವರದ ಉಪ್ಪಿನಕೋಟೆಯ ಅಪಾರ್ಟ್‌ಮೆಂಟ್‌ನಲ್ಲಿ ಸೋಮವಾರ ಮಹಿಳೆ ಮೃತದೇಹ ಕುತ್ತಿಗೆಗೆ ವೈರ್ ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಕೊಲೆ ಶಂಕೆಯಲ್ಲಿ ಆಕೆ ಪ್ರಯಾಣಿಸಿದ್ದ ಆಟೋರಿಕ್ಷಾ ಚಾಲಕನನ್ನು ಬಂಧಿಸಲಾಗಿದೆ.
    ನಾಯಕವಾಡಿ ಜನತಾ ಕಾಲನಿ ನಿವಾಸಿ ವಿಶಾಲಾ (35) ಮೃತರು. ಪತಿ ರಾಮಕೃಷ್ಣ ಜತೆ ವಿದೇಶದಲ್ಲಿದ್ದ ಅವರು, 10 ದಿನಗಳ ಹಿಂದೆ ಮಗು ಜತೆ ಊರಿಗೆ ಬಂದಿದ್ದರು. ದಂಪತಿ ಉಪ್ಪಿನಕೋಟೆಯ ಅಪಾರ್ಟ್‌ಮೆಂಟ್‌ನಲ್ಲಿ ಫ್ಲಾಟ್‌ ಹೊಂದಿದ್ದು, ಊರಿಗೆ ಬಂದಾಗ ಇಲ್ಲಿರುತ್ತಾರೆ. ಈ ಬಾರಿ ತಂದೆ-ತಾಯಿ ಜತೆ ಫ್ಲ್ಯಾಟ್‌ನಲ್ಲಿ ತಂಗಿದ್ದರು. ಸೋಮವಾರ ತಂದೆ, ತಾಯಿ ಹಾಗೂ ಮಗು ಜತೆ ರಿಕ್ಷಾದಲ್ಲಿ ನಾಯಕವಾಡಿ ಮನೆಗೆ ತೆರಳಿದ್ದರು. ನಂತರ ಬ್ಯಾಂಕ್‌ನಲ್ಲಿ ಕೆಲಸವಿದೆ ಎಂದು ಒಬ್ಬರೇ ಹಿಂತಿರುಗಿದ್ದರು. ಸಾಯಂಕಾಲ 3 ಗಂಟೆಯಾದರೂ ಮಗಳು ಬಾರದ ಕಾರಣ, ತಂದೆ ಫ್ಲ್ಯಾಟ್‌ಗೆ ತೆರಳಿದರು. ಆಗ ಬೀಗ ಹಾಕಲಾಗಿತ್ತು. ಇನ್ನೊಂದು ಕೀಯಿಂದ ಬೀಗ ತೆರೆದಾಗ ಮೃತದೇಹ ಪತ್ತೆಯಾಗಿದೆ.
    ಆಕೆ ಮನೆಗೆ ಬಂದ ರಿಕ್ಷಾ ಚಾಲಕನೇ ಮೊಬೈಲ್ ಚಾರ್ಜರ್ ಕೇಬಲ್ ಕುತ್ತಿಗೆಗೆ ಬಿಗಿದು ಕೊಲೆಗೈದ ಶಂಕೆ ವ್ಯಕ್ತವಾಗಿದೆ. ಬ್ಯಾಂಕಿನ ಲಾಕರ್‌ನಿಂದ ಚಿನ್ನವನ್ನು ಮನೆಗೆ ತಂದಿದ್ದರು. ಎಎಸ್ಪಿ ಕುಮಾರಚಂದ್ರ, ಬ್ರಹ್ಮಾವರ ವೃತ್ತ ನಿರೀಕ್ಷಕ ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ತನಿಖೆಗೆ ಕ್ರಮ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts