More

    ಕಳ್ಳತನದ ಕೇಸಲ್ಲಿ ಬಂಧನಕ್ಕೊಳಗಾದ ಮಹಿಳೆ, ಮರಳಿ ಬಂದದ್ದು ಶವವಾಗಿ!

    ಹೈದರಾಬಾದ್​ : ಕಳ್ಳತನದ ಆರೋಪದ ಮೇಲೆ ಬಂಧಿತಳಾದ ಮಹಿಳೆಯೊಬ್ಬಳು ಪೊಲೀಸ್​ ಕಿರುಕುಳದಿಂದಾಗಿ ಲಾಕಪ್​​ನಲ್ಲಿ ಮೃತಮಟ್ಟಿದ್ದಾಳೆ ಎಂದು ಆಪಾದಿಸಲಾಗಿದೆ. ತೆಲಂಗಾಣದ ಯಾದಾದ್ರಿಯಲ್ಲಿನ ಅಡ್ಡಗುಡೂರ್​ ಪೊಲೀಸರು ಬಂಧಿಸಿದ್ದ 45 ವರ್ಷದ ಏಸುಮ್ಮ ಎಂಬುವರು ಮೃತರು.

    ಕಳ್ಳತನದ ವಿಚಾರಣೆ ನಡೆಸಲು ಏಸುಮ್ಮಳನ್ನು ಶುಕ್ರವಾರ ಬಂಧಿಸಿ ಲಾಕಪ್​ನಲ್ಲಿರಿಸಿದ್ದರು. ಪೊಲೀಸರು ನೀಡಿದ ಕಿರುಕುಳದಿಂದಾಗಿ ಆಕೆ ಶನಿವಾರದಂದು ಮೃತಪಟ್ಟಿದ್ದಾಳೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಆದರೆ, ಪೊಲೀಸರು ಈ ಆಪಾದನೆಯನ್ನು ನಿರಾಕರಿಸಿದ್ದಾರೆ.

    ಇದನ್ನೂ ಓದಿ: ಬಾಂಗ್ಲಾಯುವತಿಯ ಗ್ಯಾಂಗ್‌ರೇಪ್ ಕೇಸ್‌: ಪೊಲೀಸರಿಗೆ ಶಾಕ್‌ ಕೊಟ್ಟ ಸಹಸ್ರಾರು ವಿಡಿಯೋ!

    ಶನಿವಾರದಂದು ಏಸುಮ್ಮ ಮತ್ತು ಆಕೆಯ ಮಗನನ್ನು ಕಳ್ಳತನದ ಪ್ರಕರಣದಲ್ಲಿ ವಿಚಾರಣೆಗಾಗಿ ಅಡ್ಡಗುಡೂರ್ ಪೊಲೀಸ್​ ಠಾಣೆಗೆ ಕರೆತರಲಾಯಿತು. ಆಕೆ ಠಾಣೆಯಲ್ಲಿ ಮೂರ್ಛೆ ಹೋದುದರಿಂದ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ವೈದ್ಯರು ಆಕೆ ಸತ್ತುಹೋಗಿದ್ದಾಳೆಂದು ಘೋಷಿಸಿದರು ಎಂದು ಯಾದಾದ್ರಿ ಡಿಸಿಪಿ ಹೇಳಿದ್ದಾರೆ. (ಏಜೆನ್ಸೀಸ್)

    ಡ್ಯೂಟಿಗೆ ಹಾಜರಾಗಲು ಸರ್ಕಾರಿ ನೌಕರರಿಗೆ ಬುಲಾವ್​; ಗರ್ಭಿಣಿಯರಿಗೆ, ಅಂಗವಿಕಲರಿಗೆ ಮಾತ್ರ ವಿನಾಯಿತಿ

    ಈ ರಾಜ್ಯದಲ್ಲಿ ಸಂಪೂರ್ಣ ಅನ್​ಲಾಕ್​! ಜುಲೈ 1 ರಿಂದ ಶಾಲೆ, ಕಾಲೇಜು ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts