ಪಟನಾ: ಮಾವ ಮಾಡುವ ಸರ್ಕಾರಿ ಕೆಲಸ ಗಂಡನಿಗೆ ಸಿಗಬೇಕೆಂಬ ದುರಾಸೆಯಿಂದಾಗಿ ಹೆಂಡತಿ ತನ್ನ ಬಾಯ್ಫ್ರೆಂಡ್ ಜತೆ ಸೇರಿಕೊಂಡು ಮಾವನ ಕೊಲೆಗೆ ಸುಪಾರಿ ಕೊಟ್ಟಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್ ಚೌಧರಿ ಹೆಸರಿನ ವ್ಯಕ್ತಿಯನ್ನು ಮಾರ್ಚ್ 24ರಂದು ಯಾರೋ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿಗಳ ಬೆನ್ನು ಬಿದ್ದಿದ್ದರು. ಎಸ್ಐಟಿ ಕೂಡ ತನಿಖೆ ನಡೆಸಿದೆ. ಸತೀಶ್ ಅವರ ಸೊಸೆ ಸಾಕ್ಷಿ ಕುಮಾರಿ ಮೇಲೆ ಅನುಮಾನ ಬಂದಿದ್ದು, ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆಗ ಆಕೆ ತಾನು ಮಾಡಿದ ಮಾಸ್ಟರ್ ಪ್ಲ್ಯಾನ್ ಅನ್ನು ಬಾಯಿ ಬಿಟ್ಟಿದ್ದಾಳೆ.
ಮಾವನಿಗೆ ಸರ್ಕಾರಿ ಕೆಲಸವಿತ್ತು. ಆ ಕೆಲಸ ನನ್ನ ಗಂಡನದಾಗಬೇಕೆಂಬ ಆಸೆ ಇತ್ತು. ಅದಕ್ಕೇ ಅವರನ್ನು ಕೊಲೆ ಮಾಡಿಸುವ ಪ್ಲ್ಯಾನ್ ಮಾಡಿದೆ. ನನ್ನ ಬಾಯ್ಫ್ರೆಂಡ್ ಸಹಾಯದಿಂದ ಸುಪಾರಿ ಕಿಲ್ಲರ್ಗಳನ್ನು ಸಂಪರ್ಕಿಸಿ ಸುಪಾರಿ ಕೊಟ್ಟೆ. ಕೊಲೆಗೆ ಎರಡು ಲಕ್ಷ ರೂಪಾಯಿ ಕೊಡುವುದಾಗಿ ಹೇಳಿದ್ದೆ ಎಂದು ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಎಲ್ಲವೂ ಪ್ಲ್ಯಾನ್ ಪ್ರಕಾರವೇ ಆಗಿತ್ತು ಆದರೆ ಸುಪಾರಿ ಕಿಲ್ಲರ್ಗಳು ಮಾಡಿದ ಸಣ್ಣ ಪುಟ್ಟ ತಪ್ಪಿನಿಂದ ನಾನು ಸಿಕ್ಕಿಹಾಕಿಕೊಳ್ಳಬೇಕಾಯಿತು ಎಂದು ಆಕೆ ಹೇಳಿದ್ದಾಳೆ. (ಏಜೆನ್ಸೀಸ್)
ಸಿಡಿ ಲೇಡಿಗೆ ಸಹಾಯ ಮಾಡಿದ್ದೇವೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ಮಹಮದ್ ನಳಪಾಡ್
ಹೆಂಡತಿ ತವರಿಂದ ಮರಳಿ ಬರ್ತಿಲ್ಲವೆಂದು ಮರವೇರಿ ಕುಳಿತ ಪತಿರಾಯ! ಇಳಿಸಲು ಪರದಾಡಿದ ನಗರ ಪಾಲಿಕೆ