More

    ನಿಮ್ಮ ದ್ರೋಹ ಎಂದಿಗೂ ಮರೆಯಲ್ಲ, ರೆಬೆಲ್​ ಶಾಸಕರಿಗೆ ಸಚಿವ ಆದಿತ್ಯ ಠಾಕ್ರೆ ವಾರ್ನಿಂಗ್​​

    ಮುಂಬೈ: ಬಂಡಾಯ ಶಾಸಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಶಿವಸೇನೆ, ಇದೀಗ ರೆಬೆಲ್​ ಶಾಸಕರಿಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರೂ ಆಗಿರುವ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಬಂಡಾಯ ಶಾಸಕರ ವಿರುದ್ಧ ಗುಡುಗಿದ್ದಾರೆ.

    ನಮ್ಮ ಸರ್ಕಾರದ ವಿರುದ್ಧ ಶಾಸಕರನ್ನು ಬಂಡಾಯವೆಬ್ಬಿಸಿದ ಏಕನಾಥ್ ಶಿಂಧೆ ಅವರು ಮಾಡಿರುವ ದ್ರೋಹವನ್ನು ಎಂದೂ ಮರೆಯಲ್ಲ, ಉಳಿದ ಶಾಸಕರಿಗೂ ಇದೇ ಮಾತನ್ನು ಹೇಳಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ.

    ಶಿವಸೇನ-ಕಾಂಗ್ರೆಸ್​ಎನ್​​ಸಿಪಿ ಮೈತ್ರಿ ಸರ್ಕಾರಕ್ಕೆ ಮುಂದೆಯೂ ಗೆಲುವಾಗಲಿದೆ. ಇವರು ಮಾಡಿರುವ ದ್ರೋಹ ಎಲ್ಲರಿಗೂ ಗೊತ್ತಿದೆ. ನಾವೂ ಕೂಡ ಅದನ್ನು ಎಂದಿಗೂ ಮರೆಯುವುದಿಲ್ಲ ಎಂದಿದ್ದಾರೆ.ಈ ಮಧ್ಯೆ ಬಂಡಾಯ ಶಾಸಕರಿಗೆ ಅನರ್ಹತೆಯ ನೊಟೀಸ್​ ನೀಡಲಾಗಿದ್ದು, ಸೋಮವಾರದೊಳಗೆ ಉತ್ತರಿಸುವಂತೆ ಸೂಚಿಸಿದೆ. ಬಂಡಾಯವೆಬ್ಬಿಸಿದ ಏಕನಾಥ್​ ಶಿಂಧೆ ವಿರುದ್ಧವೂ ಕ್ರಮ ಕೈಗೊಂಡಿದೆ.

    ಬಾಳಾಠಾಕ್ರೆ ಅವರ ಸಿದ್ಧಾಂತದ ಮೇಲೆಯೇ ಪಕ್ಷ ಮುನ್ನಡೆಯಲಿದೆ, ಹಿಂದುತ್ವ ಹಾಗೂ ಮರಾಠ ನಮ್ಮ ಹೆಮ್ಮೆ. ಇದನ್ನು ಇಬ್ಭಾಗ ಮಾಡಲು ಎಂದಿಗೂ ಶಿವಸೇನೆ ಬಯಸುವುದಿಲ್ಲ ಎಂದು ಸಂಸದ ಸಂಜಯ್​ ರಾವತ್​ ಹೇಳಿದ್ದಾರೆ. (ಏಜೆನ್ಸೀಸ್​)

    ನೀವೇನಾದ್ರೂ ಮಾಡ್ಕೊಳಿ, ಆದರೆ ಬಾಳಾ​ಸಾಹೇಬ್​ಠಾಕ್ರೆ ಹೆಸರು ಬಳಸುವಂತಿಲ್ಲ: ರೆಬೆಲ್​ ಶಾಸಕರಿಗೆ ಉದ್ಧವ್​ ಎಚ್ಚರಿಕೆ

    ನಿಮ್ಮ ಮಕ್ಕಳನ್ನು ಅಮೆರಿಕ ಕಳುಹಿಸಬೇಡಿ, ಈ ದೇಶದಲ್ಲಿ ಮಾತ್ರ ನೆಮ್ಮದಿಯಿಂದಿರಲು ಸಾಧ್ಯ: ಟಿ.ಬಿ.ಜಯಚಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts