More

    ಅಣ್ಣ ಎಂದು ಹೇಳಿ ದೊಡ್ಡಮ್ಮನ ಮಗನ ಜತೆ ಪತ್ನಿಯ ಲವ್ವಿ ಡವ್ವಿ; ಸ್ನ್ಯಾಪ್​ ಚಾಟ್​ ಬಳಸಿ ಗಂಡನ ಕಥೆ ಮುಗಿಸಿದ್ರು..!

    ತುಮಕೂರು: ಇತ್ತೀಚೆಗೆ ರಾತ್ರಿ ಬರ್ತಡೆ ಆಚರಿಸಿಕೊಂಡವ ಬೆಳಗ್ಗೆ ಶವವಾಗಿ ಪತ್ತೆ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಇದೀಗ ಪೊಲೀಸರು ಈ ಅನುಮಾನಸ್ಪದ ಸಾವಿನ ಪ್ರಕರಣಕ್ಕೆ ಅಂತ್ಯ ಹಾಡಿದ್ದು ಅದಕ್ಕೂ ಮೊದಲು ದೊಡ್ಡ ಟ್ವಿಸ್ಟ್ ಒಂದು ಎದುರಾಗಿತ್ತು.

    ದೊಡ್ಡಮ್ಮನ ಮಗನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಪತ್ನಿ ತನ್ನ ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದಾಳೆ. ತನ್ನ ಗಂಡನ‌ ಮುಂದೆ ನಮ್ಮ ಅಣ್ಣ ಅಂದುಕೊಂಡು ದೊಡ್ಡಮ್ಮನ ಮಗನ ಜತೆ ಪತ್ನಿ ಲವ್ವಿ ಡವ್ವಿ ಮಾಡುತ್ತಿದ್ದಳು.

    ಕಿಲಾಡಿ ಪತ್ನಿ ಹರ್ಷಿತಾ (20) ಹಾಗೂ ಪ್ರಿಯಕರ ಸೇರಿದಂತೆ ಇದೀಗ ಕುಣಿಗಲ್​ ಪೊಲೀಸರು 7 ಜನರನ್ನು ಅರೆಸ್ಟ್ ಮಾಡಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸೀನಪ್ಪನಹಳ್ಳಿಯ ನಿವಾಸಿ ಮಂಜುನಾಥ ಕೊಲೆಯಾಗಿದ್ದ ಮೃತ ದುರ್ದೈವಿ.

    ಈತ ಇದೇ ಫೆಬ್ರವರಿ 3 ರಂದು ರಾತ್ರಿ ಬರ್ತಡೆ ಆಚರಿಸಿಕೊಂಡಿದ್ದ, ಮರುದಿನ ಬೆಳಗ್ಗೆ ಕೆರೆಯಲ್ಲಿ ಮಂಜುನಾಥ್ ಶವ ಪತ್ತೆಯಾಗಿತ್ತು. ಐದಾರು ವರ್ಷಗಳ ಹಿಂದೆ ಮಂಜುನಾಥ್, ತನ್ನ ತಂದೆ ತಾಯಿ ಕಳೆದುಕೊಂಡಿದ್ದ.

    ಈತ ಕಳೆದ 11 ತಿಂಗಳ ಹಿಂದೆ ಹರ್ಷಿತಾ ಎಂಬಾಕೆಯನ್ನ ಮದುವೆಯಾಗಿದ್ದ. ಮಂಜುನಾಥ್, ತನ್ನ ಅಜ್ಜಿ ಹಾಗೂ ಪತ್ನಿ ಹರ್ಷಿತಾ ಜೊತೆ ವಾಸವಾಗಿದ್ದ. ವೃತ್ತಿಯಲ್ಲಿ ಅಡುಗೆ ಕಂಟ್ರಾಕ್ಟರ್ ಆಗಿದ್ದ ಮಂಜುನಾಥ್, ಹಣ ಹಾಗೂ ಅಂತಸ್ತಿನಲ್ಲಿ ಚೆನ್ನಾಗಿದ್ದ. ತನ್ನ ದೊಡ್ಡಮ್ಮನ ಮಗ ರಘು ಜೊತೆ ಹರ್ಷಿತಾ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಪ್ರಿಯಕರ‌ ರಘು ಮಂಜುನಾಥ್ ಮನೆಯಲ್ಲಿ ಇಲ್ಲದಿದ್ದಾಗ ಹರ್ಷಿತಾ ಮನೆಗೆ ಬರುತ್ತಿದ್ದ. ತನ್ನ ಗಂಡನನ್ನು ಕೊಲೆ ಮಾಡಿದ್ರೆ ತಾವು ಹಾಯಾಗಿ ಇರಬಹುದು ಎಂದುಕೊಂಡ ಹರ್ಷಿತಾ, ಮಂಜುನಾಥ್ ಕೊಲೆಗೆ ಸ್ಕೆಚ್ ಹಾಕಿದ್ದಳು.

    ಇದೇ ಫೆಬ್ರವರಿ 3 ರಂದು ಬೆಂಗಳೂರಿನಲ್ಲಿ ಅಡುಗೆ ಕೆಲಸ ಮುಗಿಸಿ ತನ್ನ ಊರಿಗೆ ವಾಪಸ್ ಆಗಿದ್ದ ಮಂಜುನಾಥ್, ತನ್ನ ಸ್ನೇಹಿತರ ಜೊತೆ ಸೇರಿ ಕೇಕ್ ಕಟ್ ಮಾಡಿ ಬರ್ತಡೆ ಪಾರ್ಟಿ ಆಚರಿಸಿಕೊಂಡು ಮನೆಗೆ ವಾಪಸ್ ಆಗಿದ್ದ. ಎಂದಿನಂತೆ ಮನೆಗೆ ಬಂದವನು ತನ್ನ ರೂಂ‌ನಲ್ಲಿ ಮಲಗಿದ್ದಾನೆ. ಹರ್ಷಿತಾ ಹಾಗೂ ಆಕೆಯ ಪ್ರಿಯಕರ ರಘು, ಮಂಜುನಾಥ್ ಕೊಲೆಗೆ ಮೊದಲೇ ಪ್ಲಾನ್ ಮಾಡಿದ್ದರು.

    ಮಂಜುನಾಥ್​ನನ್ನು ಕೊಲೆ ಮಾಡಲು ರಘು, ಕಾರಿನಲ್ಲಿ ತನ್ನ ಜೊತೆ 6 ಜನ ಸ್ನೇಹಿತರನ್ನ ಕರೆತಂದಿದ್ದ. ಅದರಂತೆ ಮನೆಯ ಹಿಂಬಾಗಿಲಿನಿಂದ ಮನೆಗೆ ಎಂಟ್ರಿ ಕೊಟ್ಟ ಆರೋಪಿಗಳು ಮಲಗಿದ್ದ ಮಂಜುನಾಥ್ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ವಿಚಿತ್ರ ಎಂದರೆ ಪತ್ನಿಯ ಮುಂದೆಯೇ ಆರೋಪಿಗಳು ಗಂಡನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದರು. ಬಳಿಕ ಕಿತ್ತನಾಮಂಗಲ ಕೆರೆಗೆ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಮಂಜುನಾಥ್ ಪ್ಯಾಂಟ್ ನಲ್ಲಿ ಗಾಂಜಾ ತುಂಬಿ ಎಸ್ಕೇಪ್ ಆಗಿದ್ದಾರೆ. ಮಂಜುನಾಥ್​ ಗಾಂಜಾ ಸೇವಿಸಿ ಕೆರೆಗೆ ಬಿದ್ದು ಸಾವನ್ನಪ್ಪಿದ್ದಾನೆಂದು ಪೊಲೀಸರ ದಿಕ್ಕು ತಪ್ಪಿಸಲು ಆರೋಪಿಗಳು ಖತರ್ನಾಕ್ ಪ್ಲಾನ್ ಮಾಡಿದ್ದರು.

    ಈ ಹರ್ಷಿತಾ ಮನೆಯಲ್ಲೆ ಇದ್ದುಕೊಂಡು ಬೆಳಗ್ಗಿನ ಜಾವ ಮಂಜುನಾಥ್ ಮೊಬೈಲ್​ಗೆ ಮೇಸೆಜ್ ಕೂಡಾ ಮಾಡಿದ್ದಾಳೆ. Wru, Call me ಎಂದು ಮೇಸೆಜ್ ಮಾಡಿದ್ದ ಹರ್ಷಿತಾ, ತನ್ನ ಮೇಲೂ ಅನುಮಾನ ಬರಬಾರದು ಎಂದು ಇಷ್ಟೆಲ್ಲಾ ನಾಟಕ ಮಾಡಿದ್ದಳು. ಇದಾದ ಮೇಲೆ ಅಕ್ಕಪಕ್ಕದ ಮನೆಯವರಿಗೆ ಹಾಗೂ ಸಂಬಂಧಿಕರಿಗೆ ಕರೆ ಮಾಡಿ ಮಂಜುನಾಥ್ ಎಲ್ಲೂ ಕಾಣುತ್ತಿಲ್ಲ ಅಂತ ನಾಟಕ ಮಾಡಿದ್ದಾಳೆ.

    ಪೊಲೀಸರು ಪ್ರಕರಣ ಭೇದಿಸಿದ್ದು ಹೇಗೆ?
    ಒಂದೇ ಒಂದು ಪೋಟೋ ದಿಂದ ಕೊಲೆಗೆ ಟ್ವಿಸ್ಟ್ ಸಿಕ್ಕಿತ್ತು! ಈ ಆರೋಪಿಗಳು ಸ್ನ್ಯಾಪ್ ಚಾಟ್ ಆ್ಯಪ್ ಬಳಸಿ ಕೊಲೆ ಮಾಡಲು ಪ್ಲ್ಯಾನಿಂಗ್​ ನಡೆಸಿದ್ದರು. ಇವರು, 6+1 ಎಂದು ಸ್ನ್ಯಾಪ್ ಚಾಟ್ ಆ್ಯಪ್​ನಲ್ಲಿ ಗ್ರೂಪ್ ಮಾಡಿಕೊಂಡಿದ್ದರು. ಎರಡು ಬಾರಿ ಕುಣಿಗಲ್ ಪೊಲೀಸ್ ಠಾಣೆಗೆ ಹರ್ಷಿತಾ‌ ಹಾಗೂ ಪ್ರಿಯಕರ ರಘು ಬಂದಿದ್ದರು. ಇಬ್ಬರೂ ತಮಗೆ ಏನು ಗೊತ್ತಿಲ್ಲದಂತೆ ಪೊಲೀಸರ ಮುಂದೆ ಡ್ರಾಮಾ ಮಾಡಿದ್ದಾರೆ. ಈ ವೇಳೆ ಮಂಜುನಾಥ್ ಮೊಬೈಲ್​ನಲ್ಲಿ ಪೊಲೀಸರಿಗೆ ಪತ್ತೆಯಾಗಿದೆ ಫೋಟೊ ಒಂದು ಸಿಕ್ಕಿತ್ತು. ಆ ಮೊಬೈಲ್ ನಲ್ಲಿದ್ದ ಪೋಟೋದಿಂದ ಆರೋಪಿಗಳು ಸಿಕ್ಕಿಬಿದ್ದಿದ್ದರು.

    ರಘು ಹೆಸರನ್ನ ತನ್ನ ಕೈ ಮೇಲೆ H,R ಎಂದು ಪೆನ್ನಿನಲ್ಲಿ ಬರೆದುಕೊಂಡ ಹರ್ಷಿತಾ ರಘು ಮೊಬೈಲ್​ಗೆ ಪೋಟೋ ಕಳುಹಿಸಿದ್ದಳು. ಇದರ ಆಧಾರದ ಮೇಲೆ ತನಿಖೆ‌ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರಿಂದ ತಪ್ಪಿಸಿಕೊಳ್ಳಲು ಮಂಜುನಾಥ್​ನನ್ನ ಕೊಲೆ ಮಾಡಲು ಸ್ನ್ಯಾಪ್ ಚಾಟ್ ಆ್ಯಪ್, ಟ್ವಿಟರ್, ಟೆಲಿಗ್ರಾಂ ಆ್ಯಪ್​ಗಳನ್ನು ಈ ಆರೋಪಿಗಳು ಬಳಕೆ‌ ಮಾಡಿದ್ದರು.

    ಹರ್ಷಿತಾ ಜೊತೆ ಸೇರಿ ಸ್ನ್ಯಾಪ್ ಚಾಟ್ ಆ್ಯಪ್ ನಲ್ಲಿ 6+1 ಎಂದು ಗ್ರೂಪ್ ರಘು ಮಾಡಿದ್ದ. ವಾಟ್ಸಪ್, ಮೇಸೆಜ್​ಗಳನ್ನು ಬಳಸದ ಆರೋಪಿಗಳು, ಸ್ನ್ಯಾಪ್ ಚಾಟ್ ಆ್ಯಪ್ ನಲ್ಲಿ ಮೇಸೆಜ್ ಮಾಡಿಕೊಂಡು ಕೊಲೆಗೆ ಪ್ಲಾನ್ ಮಾಡಿದ್ದರು. ಸದ್ಯ ಕುಣಿಗಲ್ ಪೊಲೀಸರು ಹರ್ಷಿತಾ ಹಾಗೂ ಆಕೆಯ ಪ್ರೀಯಕರ ಸೇರಿ 7 ಜನರ ಅರೆಸ್ಟ್ ಮಾಡಿದ್ದಾರೆ. ಸದ್ಯ ಕುಣಿಗಲ್ ಪೊಲೀಸರು, ತಮ್ಮ ತನಿಖೆಯನ್ನು ಮುಂದುವರೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts