ರಾಂಚಿ: ಈತನ ಪತ್ನಿ ತನ್ನ ಪ್ರಿಯಕರನ ಜತೆ ಕೆಲತಿಂಗಳ ಹಿಂದೆ ಓಡಿಹೋಗಿದ್ದಳು. ಅಂದಿನಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಈತ ಮದ್ಯವ್ಯಸನಿಯಾಗಿ ಮಾರ್ಪಟ್ಟಿದ್ದ. ಎರಡು ಬಾರಿ ಕಂಠಮಟ್ಟ ಮದ್ಯ ಸೇವಿಸಿದ್ದ ಈತ ಲೈಂಗಿಕ ಸುಖಕ್ಕಾಗಿ ಹಸ್ತಮೈಥುನಕ್ಕೆ ಮುಂದಾಗಿದ್ದ. ಇದಕ್ಕಾಗಿ ಆತ ಎರಡು ಬಾರಿ ಮೊಬೈಲ್ ಚಾರ್ಜರ್ ಕೇಬಲ್ ಅನ್ನು ತನ್ನ ಶಿಶ್ನದ ಮೂಲಕ ಒಳಗೆ ತೂರಿಸಿಕೊಂಡು ಕೂದಲೆಳೆ ಅಂತರದಲ್ಲಿ ಸಾವನ್ನು ಗೆದ್ದುಬಂದಿದ್ದಾನೆ!
ಜಾರ್ಖಂಡ್ನ ಧುಮಕಾ ನಿವಾಸಿ 35 ವರ್ಷದ ವ್ಯಕ್ತಿ ಈ ಅನಾಹುತ ಮಾಡಿಕೊಂಡವನು. ಈತನ ಪತ್ನಿ ತನ್ನ ಪ್ರಿಯಕರನ ಜತೆ ಓಡಿ ಹೋದ ನಂತರದಲ್ಲಿ ಈತ ತೀವ್ರ ಖಿನ್ನತೆಗೆ ಒಳಗಾಗಿದ್ದ. ಪಾನಮತ್ತನಾಗಿ ಯುರೇರ್ಥಲ್ ಸೌಂಡಿಂಗ್ ಎಂಬ ಹಸ್ತಮೈಥುನ ಮಾಡಿಕೊಳ್ಳುವಾಗ ಶಿಶ್ನದ ಮೂಲಕ ಈತ ಮೊಬೈಲ್ ಚಾರ್ಜರ್ ಕೇಬಲ್ಗಳನ್ನು ಒಳಗೆ ತೂರಿಸಿಕೊಂಡಿದ್ದ. ಆಗ ಎರಡು ಕೇಬಲ್ಗಳು ಈತನ ಮೂತ್ರಕೋಶಕ್ಕೆ ಸೇರಿಕೊಂಡಿದ್ದವು.
ಆರಂಭದಲ್ಲಿ ಮೂತ್ರವಿಸರ್ಜನೆಗೆ ಈತನಿಗೆ ಯಾವುದೇ ತೊಂದರೆಯಾಗಿರಲಿಲ್ಲ. ನಂತರದಲ್ಲಿ ತೊಂದರೆ ಆರಂಭವಾಗಿದ್ದಲ್ಲದೆ, ತೀವ್ರವಾಗಿ ನೋವು ಬಾಧಿಸಲಾರಂಭಿಸಿತ್ತು. ಆಗ ರಾಂಚಿಗೆ ತೆರಳಿದ ಆತ ಅಲ್ಲಿನ ಪ್ರತಿಷ್ಠಿತ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಆರ್ಐಎಂಎಸ್) ವೈದ್ಯರ ಸಲಹೆ ಪಡೆಯಲು ಮುಂದಾಗಿದ್ದ. ಆದರೆ, ತಾನು ಮಾಡಿಕೊಂಡಿರುವ ಕೃತ್ಯವನ್ನು ಹೇಳಿಕೊಂಡರೆ ಸಾಮಾಜಿಕವಾಗಿ ನಗೆಪಾಟಲಿಗೀಡಾಗುವ ಭಯದಲ್ಲಿ ವೈದ್ಯರಿಗೆ ಕೇವಲ ಹೊಟ್ಟೆ ನೋವು ಎಂದು ಹೇಳಿ ಮಾತ್ರೆಗಳನ್ನು ಬರೆಯಿಸಿಕೊಂಡು ಬಂದಿದ್ದ.
ಇದನ್ನೂ ಓದಿ: ಲಾಕ್ಡೌನ್ನಿಂದಾಗಿ ಹಾಸ್ಟೆಲ್ನಲ್ಲೇ ಉಳಿದ 9 ವರ್ಷದ ಬಾಲಕ ಅನುಭವಿಸಿದ ನರಕಯಾತನೆ…!
ಆದರೆ ದಿನಗಳೆದಂತೆ ನೋವು ತೀವ್ರವಾಗಲು ತೊಡಗಿದ್ದರಿಂದ, ಧುಮ್ಕಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದ. ವೈದ್ಯರು ಈತನ ಹೊಟ್ಟೆ ಭಾಗದ ಎಕ್ಸ್ರೇ ತೆಗೆಸಿದಾಗ, ಆತನ ಮೂತ್ರಕೋಶದಲ್ಲಿ ವೈರ್ನಂಥ ಎರಡು ವಸ್ತುಗಳು ಇರುವುದು ಪತ್ತೆಯಾಗಿತ್ತು.
ಈತ ಯುರೇರ್ಥಲ್ ಸೌಂಡಿಂಗ್ ಹಸ್ತಮೈಥುನ ಮಾಡಿಕೊಳ್ಳಲು ಹೋಗಿ ಎರಡು ಮೊಬೈಲ್ ಚಾರ್ಜರ್ ಕೇಬಲ್ಗಳನ್ನು ಶಿಶ್ನದ ಮೂಲಕ ತೂರಿಸಿಕೊಂಡಿದ್ದ. ಆ ಕೇಬಲ್ಗಳು ಈತನ ಮೂತ್ರಕೋಶಕ್ಕೆ ಸೇರಿದ್ದವು. ಅವುಗಳಿಂದಾಗಿ ಮೂತ್ರದ ಸಹಜ ಹೊರಹರಿವಿಗೆ ಅಡ್ಡಿಯಾಗಿ, ಕೇಬಲ್ಗಳ ಸುತ್ತ ಕೊಳಕು ಸಂಗ್ರಹವಾಗಲು ಆರಂಭವಾಗಿತ್ತು. ಇದರಿಂದ ಈತನಿಗೆ ಮೂತ್ರ ವಿಸರ್ಜಿಸಲು ಭಾರಿ ತೊಂದರೆಯಾಗಿತ್ತು. ಹಾಗಾಗಿ ಆಸ್ಪತ್ರೆಗೆ ಬಂದಿದ್ದ. ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿ ಅಂದಾಜು ಒಂದೂವರೆ ಅಡಿ ಉದ್ದವಿದ್ದ ಎರಡು ಕೇಬಲ್ಗಳನ್ನು ಹೊರತೆಗೆಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಒಂದು ವೇಳೆ ಕೇಬಲ್ಗಳನ್ನು ತೆಗೆಯದೇ ಹೋಗಿದ್ದರೆ, ಅವು ಅಲ್ಲಿಯೇ ಉಳಿದು ಕ್ಯಾನ್ಸರ್ ಗಡ್ಡೆಗಳು ಬೆಳೆಯುತ್ತಿದ್ದವು. ಇದರಿಂದಾಗಿ ಆತನ ಪ್ರಾಣಕ್ಕೇ ಅಪಾಯವಾಗುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ.
ಅಸ್ಸಾಂನಲ್ಲೂ ಕಂಡುಬಂದಿತ್ತು ಇಂಥ ಪ್ರಕರಣ: ಅಸ್ಸಾಂನ ಗುವಾಹಟಿಯಲ್ಲೂ ಕಳೆದ ವಾರ ಇಂಥದ್ದೇ ಪ್ರಕರಣ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ವ್ಯಕ್ತಿ ತಾನು ಕೇಬಲ್ ನುಂಗಿರುವುದಾಗಿ ಹೇಳಿ ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದ. ಬಳಿಕ ಈತ ಕೂಡ ಯುರೇರ್ಥಲ್ ಸೌಂಡಿಂಗ್ ಹಸ್ತಮೈಥುನ ಮಾಡಿಕೊಳ್ಳಲು ಶಿಶ್ನದ ಮೂಲಕ ಮೊಬೈಲ್ ಚಾರ್ಜರ್ ಕೇಬಲ್ ತೂರಿಸಿಕೊಂಡಿದ್ದು ಗೊತ್ತಾಗಿತ್ತು. ಆಗಲೂ ಕೂಡ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು ಆತನ ಪ್ರಾಣವುಳಿಸಿದ್ದರು.
ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ ರಾಜಕೀಯ ಗಣ್ಯರು; ದಿಗ್ಭ್ರಮೆಯಾಗಿದೆ ಎಂದ್ರು ಸಿಎಂ ಯಡಿಯೂರಪ್ಪ