More

    ಪ್ರಿಯಕರನ ಜತೆ ಪತ್ನಿ ಪರಾರಿ; ಬೇಸರದಲ್ಲಿ ಪಾನಮತ್ತ ಪತಿ ಮಾಡಿಕೊಂಡ ಅನಾಹುತ ನೋಡಿ…!

    ರಾಂಚಿ: ಈತನ ಪತ್ನಿ ತನ್ನ ಪ್ರಿಯಕರನ ಜತೆ ಕೆಲತಿಂಗಳ ಹಿಂದೆ ಓಡಿಹೋಗಿದ್ದಳು. ಅಂದಿನಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಈತ ಮದ್ಯವ್ಯಸನಿಯಾಗಿ ಮಾರ್ಪಟ್ಟಿದ್ದ. ಎರಡು ಬಾರಿ ಕಂಠಮಟ್ಟ ಮದ್ಯ ಸೇವಿಸಿದ್ದ ಈತ ಲೈಂಗಿಕ ಸುಖಕ್ಕಾಗಿ ಹಸ್ತಮೈಥುನಕ್ಕೆ ಮುಂದಾಗಿದ್ದ. ಇದಕ್ಕಾಗಿ ಆತ ಎರಡು ಬಾರಿ ಮೊಬೈಲ್​ ಚಾರ್ಜರ್​ ಕೇಬಲ್​ ಅನ್ನು ತನ್ನ ಶಿಶ್ನದ ಮೂಲಕ ಒಳಗೆ ತೂರಿಸಿಕೊಂಡು ಕೂದಲೆಳೆ ಅಂತರದಲ್ಲಿ ಸಾವನ್ನು ಗೆದ್ದುಬಂದಿದ್ದಾನೆ!

    ಜಾರ್ಖಂಡ್​ನ ಧುಮಕಾ ನಿವಾಸಿ 35 ವರ್ಷದ ವ್ಯಕ್ತಿ ಈ ಅನಾಹುತ ಮಾಡಿಕೊಂಡವನು. ಈತನ ಪತ್ನಿ ತನ್ನ ಪ್ರಿಯಕರನ ಜತೆ ಓಡಿ ಹೋದ ನಂತರದಲ್ಲಿ ಈತ ತೀವ್ರ ಖಿನ್ನತೆಗೆ ಒಳಗಾಗಿದ್ದ. ಪಾನಮತ್ತನಾಗಿ ಯುರೇರ್ಥಲ್​ ಸೌಂಡಿಂಗ್​ ಎಂಬ ಹಸ್ತಮೈಥುನ ಮಾಡಿಕೊಳ್ಳುವಾಗ ಶಿಶ್ನದ ಮೂಲಕ ಈತ ಮೊಬೈಲ್​ ಚಾರ್ಜರ್​ ಕೇಬಲ್​ಗಳನ್ನು ಒಳಗೆ ತೂರಿಸಿಕೊಂಡಿದ್ದ. ಆಗ ಎರಡು ಕೇಬಲ್​ಗಳು ಈತನ ಮೂತ್ರಕೋಶಕ್ಕೆ ಸೇರಿಕೊಂಡಿದ್ದವು.

    ಆರಂಭದಲ್ಲಿ ಮೂತ್ರವಿಸರ್ಜನೆಗೆ ಈತನಿಗೆ ಯಾವುದೇ ತೊಂದರೆಯಾಗಿರಲಿಲ್ಲ. ನಂತರದಲ್ಲಿ ತೊಂದರೆ ಆರಂಭವಾಗಿದ್ದಲ್ಲದೆ, ತೀವ್ರವಾಗಿ ನೋವು ಬಾಧಿಸಲಾರಂಭಿಸಿತ್ತು. ಆಗ ರಾಂಚಿಗೆ ತೆರಳಿದ ಆತ ಅಲ್ಲಿನ ಪ್ರತಿಷ್ಠಿತ ರಾಜೇಂದ್ರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ಆರ್​ಐಎಂಎಸ್​) ವೈದ್ಯರ ಸಲಹೆ ಪಡೆಯಲು ಮುಂದಾಗಿದ್ದ. ಆದರೆ, ತಾನು ಮಾಡಿಕೊಂಡಿರುವ ಕೃತ್ಯವನ್ನು ಹೇಳಿಕೊಂಡರೆ ಸಾಮಾಜಿಕವಾಗಿ ನಗೆಪಾಟಲಿಗೀಡಾಗುವ ಭಯದಲ್ಲಿ ವೈದ್ಯರಿಗೆ ಕೇವಲ ಹೊಟ್ಟೆ ನೋವು ಎಂದು ಹೇಳಿ ಮಾತ್ರೆಗಳನ್ನು ಬರೆಯಿಸಿಕೊಂಡು ಬಂದಿದ್ದ.

    ಇದನ್ನೂ ಓದಿ: ಲಾಕ್​ಡೌನ್​ನಿಂದಾಗಿ ಹಾಸ್ಟೆಲ್​ನಲ್ಲೇ ಉಳಿದ 9 ವರ್ಷದ ಬಾಲಕ ಅನುಭವಿಸಿದ ನರಕಯಾತನೆ…!

    ಆದರೆ ದಿನಗಳೆದಂತೆ ನೋವು ತೀವ್ರವಾಗಲು ತೊಡಗಿದ್ದರಿಂದ, ಧುಮ್ಕಾದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮುಂದಾಗಿದ್ದ. ವೈದ್ಯರು ಈತನ ಹೊಟ್ಟೆ ಭಾಗದ ಎಕ್ಸ್​ರೇ ತೆಗೆಸಿದಾಗ, ಆತನ ಮೂತ್ರಕೋಶದಲ್ಲಿ ವೈರ್​ನಂಥ ಎರಡು ವಸ್ತುಗಳು ಇರುವುದು ಪತ್ತೆಯಾಗಿತ್ತು.

    ಈತ ಯುರೇರ್ಥಲ್​ ಸೌಂಡಿಂಗ್​ ಹಸ್ತಮೈಥುನ ಮಾಡಿಕೊಳ್ಳಲು ಹೋಗಿ ಎರಡು ಮೊಬೈಲ್​ ಚಾರ್ಜರ್​ ಕೇಬಲ್​ಗಳನ್ನು ಶಿಶ್ನದ ಮೂಲಕ ತೂರಿಸಿಕೊಂಡಿದ್ದ. ಆ ಕೇಬಲ್​ಗಳು ಈತನ ಮೂತ್ರಕೋಶಕ್ಕೆ ಸೇರಿದ್ದವು. ಅವುಗಳಿಂದಾಗಿ ಮೂತ್ರದ ಸಹಜ ಹೊರಹರಿವಿಗೆ ಅಡ್ಡಿಯಾಗಿ, ಕೇಬಲ್​ಗಳ ಸುತ್ತ ಕೊಳಕು ಸಂಗ್ರಹವಾಗಲು ಆರಂಭವಾಗಿತ್ತು. ಇದರಿಂದ ಈತನಿಗೆ ಮೂತ್ರ ವಿಸರ್ಜಿಸಲು ಭಾರಿ ತೊಂದರೆಯಾಗಿತ್ತು. ಹಾಗಾಗಿ ಆಸ್ಪತ್ರೆಗೆ ಬಂದಿದ್ದ. ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿ ಅಂದಾಜು ಒಂದೂವರೆ ಅಡಿ ಉದ್ದವಿದ್ದ ಎರಡು ಕೇಬಲ್​ಗಳನ್ನು ಹೊರತೆಗೆಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

    ಒಂದು ವೇಳೆ ಕೇಬಲ್​ಗಳನ್ನು ತೆಗೆಯದೇ ಹೋಗಿದ್ದರೆ, ಅವು ಅಲ್ಲಿಯೇ ಉಳಿದು ಕ್ಯಾನ್ಸರ್​ ಗಡ್ಡೆಗಳು ಬೆಳೆಯುತ್ತಿದ್ದವು. ಇದರಿಂದಾಗಿ ಆತನ ಪ್ರಾಣಕ್ಕೇ ಅಪಾಯವಾಗುವ ಸಾಧ್ಯತೆ ಇತ್ತು ಎಂದು ಹೇಳಿದ್ದಾರೆ.

    ಅಸ್ಸಾಂನಲ್ಲೂ ಕಂಡುಬಂದಿತ್ತು ಇಂಥ ಪ್ರಕರಣ: ಅಸ್ಸಾಂನ ಗುವಾಹಟಿಯಲ್ಲೂ ಕಳೆದ ವಾರ ಇಂಥದ್ದೇ ಪ್ರಕರಣ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ವ್ಯಕ್ತಿ ತಾನು ಕೇಬಲ್​ ನುಂಗಿರುವುದಾಗಿ ಹೇಳಿ ವೈದ್ಯರ ಬಳಿ ಚಿಕಿತ್ಸೆಗೆ ಬಂದಿದ್ದ. ಬಳಿಕ ಈತ ಕೂಡ ಯುರೇರ್ಥಲ್​ ಸೌಂಡಿಂಗ್​ ಹಸ್ತಮೈಥುನ ಮಾಡಿಕೊಳ್ಳಲು ಶಿಶ್ನದ ಮೂಲಕ ಮೊಬೈಲ್​ ಚಾರ್ಜರ್​ ಕೇಬಲ್​ ತೂರಿಸಿಕೊಂಡಿದ್ದು ಗೊತ್ತಾಗಿತ್ತು. ಆಗಲೂ ಕೂಡ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು ಆತನ ಪ್ರಾಣವುಳಿಸಿದ್ದರು.

    ಅಗಲಿದ ನಟನಿಗೆ ಶ್ರದ್ಧಾಂಜಲಿ ಅರ್ಪಿಸಿದ ರಾಜಕೀಯ ಗಣ್ಯರು; ದಿಗ್ಭ್ರಮೆಯಾಗಿದೆ ಎಂದ್ರು ಸಿಎಂ ಯಡಿಯೂರಪ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts