ನವದೆಹಲಿ: ದೆಹಲಿ, ನೋಯ್ಡಾ ಸೇರಿದಂತೆ ಇಡೀ ಎನ್ಸಿಆರ್ನಲ್ಲಿ ಬುಧವಾರ ಬೆಳಗ್ಗೆ ದಟ್ಟವಾದ ಮಂಜು ಕಾಣಿಸಿಕೊಳ್ಳುತ್ತಿದೆ. ತಾಪಮಾನದ ಕುಸಿತದಿಂದಾಗಿ ದೆಹಲಿ, ನೋಯ್ಡಾ, ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ನಲ್ಲಿ ಮಂಜು ಆವರಿಸಿದೆ. ಹಲವೆಡೆ ಶೂನ್ಯ ಗೋಚರತೆ ದಾಖಲಾಗುತ್ತಿದೆ. ಹವಾಮಾನ ಇಲಾಖೆ ಬುಧವಾರ ಮತ್ತು ಗುರುವಾರ ಸ್ಪಷ್ಟವಾದ ಆಕಾಶ ಮತ್ತು ಬೆಳಗ್ಗೆ ಮಂಜು ತುಂಬಾ ದಟ್ಟವಾಗಿರುತ್ತದೆ ಎಂದು ಮುನ್ಸೂಚನೆ ನೀಡಿದೆ.
ದಟ್ಟ ಮಂಜಿನಿಂದಾಗಿ ಹಲವೆಡೆ ಗೋಚರತೆ ಕಡಿಮೆಯಾಗಿ ವಾಹನಗಳ ವೇಗ ತಗ್ಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಕನಿಷ್ಠ ತಾಪಮಾನವು ಏಳು ಡಿಗ್ರಿ ಸೆಲ್ಸಿಯಸ್ನಲ್ಲಿ ದಾಖಲಾಗಿದೆ. ಇದು ಈ ಋತುವಿನಲ್ಲಿ ಸಾಮಾನ್ಯಕ್ಕಿಂತ ಒಂದು ಡಿಗ್ರಿ ಕಡಿಮೆಯಾಗಿದೆ.
#WATCH | Dense fog covers parts of national capital as cold wave continues.
(Visuals from Dhaula Kuan area, shot at 6:15 am) pic.twitter.com/MneDB9QmJC
— ANI (@ANI) December 27, 2023
ದಟ್ಟವಾದ ಮಂಜು ಬೀಳುತ್ತಿರುವ ರಾಜ್ಯಗಳು
ಹವಾಮಾನ ಇಲಾಖೆಯ ಪ್ರಕಾರ, ದೆಹಲಿ, ಹರಿಯಾಣ, ಪಂಜಾಬ್, ಉತ್ತರ ಪ್ರದೇಶ (ಯುಪಿ), ಮಧ್ಯಪ್ರದೇಶ, ರಾಜಸ್ಥಾನ, ಒಡಿಶಾ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಮಿಜೋರಾಂ, ಮಣಿಪುರ, ಅಸ್ಸಾಂ, ತ್ರಿಪುರಾ, ನಾಗಾಲ್ಯಾಂಡ್, ಚಂಡೀಗಢದಲ್ಲಿ ತುಂಬಾ ದಟ್ಟವಾದ ಮಂಜು ಕಂಡುಬರುತ್ತಿದೆ. ಈ ಸ್ಥಳಗಳಲ್ಲಿ ಡಿಸೆಂಬರ್ 31 ರವರೆಗೆ ದಟ್ಟವಾದ ಮಂಜು ಮುಂದುವರಿಯುತ್ತದೆ.
ಮಂಜು ಆವರಿಸಿರುವ ಸ್ಥಳಗಳು
ಹವಾಮಾನ ಇಲಾಖೆಯು ಇಂದು ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ದಟ್ಟವಾದ ಮಂಜು ಕಂಡುಬರುತ್ತಿದೆ ಎಂದು ಹೇಳಿದೆ. ಪಂಜಾಬ್, ಹರಿಯಾಣ-ಚಂಡೀಗಢ, ದೆಹಲಿ, ಯುಪಿ, ಉತ್ತರ ರಾಜಸ್ಥಾನ, ಉತ್ತರ ಮಧ್ಯಪ್ರದೇಶ ಸೇರಿದಂತೆ ವಾಯುವ್ಯ ಭಾರತ ಮತ್ತು ಸುತ್ತಮುತ್ತಲಿನ ಮಧ್ಯ ಭಾರತದಲ್ಲಿ ದಟ್ಟವಾದ ಮಂಜು ಇದೆ ಎಂದು ಉಪಗ್ರಹ ವೀಕ್ಷಣೆ ತೋರಿಸುತ್ತಿದೆ.
Visibility recorded at 0530 hours IST of today, the 27th December (m): Punjab: Amritsar-0, Patiala-25; Uttar Pradesh: Bareilly-25, Lucknow-25, Paryagraj-25 & Varanasi-50, Jhansi-200; Madhya Pradesh: Gwalior-200; Rajasthan: Ganganagar-50; Delhi Safdarjung-50; Delhi (Palam)-125. pic.twitter.com/hY5dCs6Zck
— India Meteorological Department (@Indiametdept) December 27, 2023
ಇಲ್ಲಿ ತುಂಬಾ ಚಳಿ
ಹವಾಮಾನ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಪಂಜಾಬ್, ಹರಿಯಾಣ-ಚಂಡೀಗಢ-ದೆಹಲಿ ಮತ್ತು ಪಶ್ಚಿಮ ಉತ್ತರ ಪ್ರದೇಶದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನ 6-10 ಡಿಗ್ರಿ ಸೆಲ್ಸಿಯಸ್ ನಡುವೆ ಇದೆ. ರಾಜಸ್ಥಾನ, ಪೂರ್ವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಉತ್ತರ ಛತ್ತೀಸ್ಗಢ ಮತ್ತು ಜಾರ್ಖಂಡ್ನ ಬಹುತೇಕ ಭಾಗಗಳಲ್ಲಿ 11-12 ಡಿಗ್ರಿ ಸೆಲ್ಸಿಯಸ್ ಇದೆ.
ಕಾಶ್ಮೀರದಲ್ಲೂ ಮಂಜು
ಜಮ್ಮು ಮತ್ತು ಕಾಶ್ಮೀರದಲ್ಲೂ ದಟ್ಟವಾದ ಮಂಜು ಕಾಣಿಸಿಕೊಳ್ಳುತ್ತಿದೆ. ಕಾಶ್ಮೀರದ ಬಹುತೇಕ ಭಾಗಗಳಲ್ಲಿ ರಾತ್ರಿಯ ಕನಿಷ್ಠ ತಾಪಮಾನವು ಕುಸಿಯುತ್ತಲೇ ಇತ್ತು. ಬುಧವಾರ ಬೆಳಗ್ಗೆ ಕಣಿವೆಯಲ್ಲಿ ದಟ್ಟವಾದ ಮಂಜು ದೈನಂದಿನ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಕನಿಷ್ಠ ಮೈನಸ್ ಮೂರು ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ, ಹಿಂದಿನ ರಾತ್ರಿ ದಾಖಲಾಗಿದ್ದ ಮೈನಸ್ 2.3 ಡಿಗ್ರಿ ಸೆಲ್ಸಿಯಸ್ಗಿಂತ ಸ್ವಲ್ಪ ಕಡಿಮೆಯಾಗಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ನಲ್ಲಿ ಕನಿಷ್ಠ ತಾಪಮಾನ ಮೈನಸ್ 4.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹವಾಮಾನ ಇಲಾಖೆಯು ತಿಂಗಳಾಂತ್ಯದವರೆಗೂ ಹವಾಮಾನವು ಮುಖ್ಯವಾಗಿ ಶುಷ್ಕವಾಗಿರುತ್ತದೆ ಎಂದು ಹೇಳಿದೆ.