More

    ಹೆಂಡತಿಯರು ಯಾಕೆ ಬಿಟ್ಟು ಹೋದರು? ಅನುರಾಗ್​ಗೆ ಪಾಯಲ್​ ಪ್ರಶ್ನೆ

    ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲೆ ನಟಿ ಪಾಯಲ್​ ಘೋಶ್​ ಮೀಟೂ ಆರೋಪ ಹೊರಿಸಿರುವ ಪ್ರಕರಣದಲ್ಲಿ ತಮ್ಮ ಹೆಸರನ್ನು ಅನಾವಶ್ಯಕವಾಗಿ ಎಳೆದು ತಂದಿರುವ ಪಾಯಲ್​ ಮೇಲೆ ರಿಚಾ ಚಡ್ಢಾ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ಮುಂದಾಗಿರುವ ವಿಷಯ ಗೊತ್ತೇ ಇದೆ.

    ಈ ನಿಟ್ಟಿನಲ್ಲಿ ರಿಚಾ ಹೆಜ್ಜೆ ಇಟ್ಟಿದ್ದರೂ ಪಾಯಲ್​ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಅನುರಾಗ್​ ತನ್ನ ಬಳಿ ಏನು ಹೇಳಿದರೋ ಅದನ್ನೂ ಹೇಳಿದೆನೋ ಹೊರತು, ಇಲ್ಲಿ ಯಾರನ್ನೂ ಅನಾವಶ್ಯಕವಾಗಿ ಎಳೆದು ತರುವ ಉದ್ದೇಶ ತಮಗಿಲ್ಲ ಎಂದು ಪಾಯಲ್​ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: 6 ಮಂದಿ ಬಾಲಿವುಡ್​ ಸ್ಟಾರ್​ಗಳ ಎದೆಯಲ್ಲಿ ಢವಢವ; ತಮ್ಮ ಪರ ವಕೀಲರನ್ನು ಕರೆಸಿ ಚರ್ಚೆ

    ‘ನನಗೆ ಅವರ್ಯಾರೂ ವೈಯಕ್ತಿಕವಾಗಿ ಗೊತ್ತಿಲ್ಲ. ಹೀಗಿರುವಾಗ ಅವರ ಹೆಸರನ್ನು ಸುಮ್ಮನೆ ಯಾಕೆ ಎಳೆದು ತರಲಿ. ನಾನು ಎರಡು ದಿನಗಳ ಕಾಲ ಅನುರಾಗ್​ ಕಶ್ಯಪ್​ ಅವರ ಮನೆಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಅವರು ನನಗೆ ಏನೆಲ್ಲಾ ಹೇಳಿದ್ದರೋ ಅದನ್ನೇ ಹೇಳಿದೆ’ ಎನ್ನುತ್ತಾರೆ ಪಾಯಲ್​.

    ಈ ಬಗ್ಗೆ ರಿಚಾಗೆ ಸಮಸ್ಯೆ ಇದ್ದರೆ ಅನುರಾಗ್​ ಅವರನ್ನೇ ಕೇಳಬೇಕು ಎಂದಿರುವ ಪಾಯಲ್​, ‘ನನಗೆ ರಿಚಾ ವೈಯಕ್ತಿಕವಾಗಿ ಗೊತ್ತಿಲ್ಲ. ಹಾಗಿರುವಾಗ ಸುಮ್ಮನೆ ಅವರಿಗೆ ಮಸಿ ಬಳಿಯುವುದಕ್ಕೆ ಯಾಕೆ ಪ್ರಯತ್ನ ಮಾಡಲಿ? ಅನುರಾಗ್​ ಏನು ಹೇಳಿದರೋ ಅದನ್ನು ನಾನು ಹೇಳಿದ್ದೆ ಅಷ್ಟೇ. ಅನುರಾಗ್​ ಯಾಕೆ ರಿಚಾ ಹೆಸರನ್ನು ಹೇಳಿದರು ಎಂಬುದನ್ನು, ಅವರ ಹತ್ತಿರವೇ ಹೋಗಿ ಕೇಳಲಿ’ ಎಂದು ಪಾಯಲ್​ ಹೇಳಿದ್ದಾರೆ.

    ಇದನ್ನೂ ಓದಿ: ಮಣಿರತ್ನಂ, ಶಂಕರ್​, ವೆಟ್ರಿಮಾರನ್​ ಒಂದೇ ಕಡೆ … ಯಾಕಿರಬಹುದು?

    ಇನ್ನು ಅನುರಾಗ್​ ಅಂತ ಮನುಷ್ಯನಲ್ಲ, ಹಾಗೆ ನಡೆದುಕೊಂಡಿರುವುದಕ್ಕೆ ಸಾಧ್ಯವಿಲ್ಲ ಎಂದು ಅವರ ಮಾಜಿ ಪತ್ನಿಯರಾದ ಆರತಿ ಬಜಾಜ್​ ಮತ್ತು ಕಲ್ಕಿ ಕೊಚ್ಚಿನ್​ ಹೇಳಿರುವುದಷ್ಟೇ ಅಲ್ಲ, ಅನುರಾಗ್​ ಬೆನ್ನಿಗೆ ನಿಂತಿದ್ದಾರೆ. ಆದರೆ, ಇದನ್ನು ಚೀಪ್​ ಸ್ಟಂಟ್​ ಎಂದು ಬಣ್ಣಿಸಿದ್ದಾರೆ ಪಾಯಲ್​.

    ‘ಅನುರಾಗ್​ ಅಷ್ಟೊಳ್ಳೆಯ ಮನುಷ್ಯನಾಗಿದ್ದರೆಲ, ಇಷ್ಟಕ್ಕೂ ಅವರ ಪತ್ನಿಯರು ಯಾಕೆ ಬಿಟ್ಟು ಹೋಗಬೇಕಿತ್ತು. ಅನುರಾಗ್​ ಜತೆಗೆ ಅವರಿಬ್ಬರೂ ಸಂತೋಷವಾಗಿದ್ದರೆ, ಅವರನ್ನು ಬಿಟ್ಟು ಹೋಗುತ್ತಲೇ ಇರಲಿಲ್ಲ. ಆಗ ಬಿಟ್ಟು ಹೋಗಿ, ಈಗ ಅವರ ಸಪೋರ್ಟ್​ಗೆ ಬಂದಿದ್ದಾರೆ. ಬಹುಶಃ ಅವರೆಲ್ಲರ ಮಧ್ಯೆ ಹಣಕಾಸಿನ ವ್ಯವಹಾರವಿರಬಹುದು. ಹಾಗಾಗಿ ಈ ರೀತಿ ಬಂದು ಸ್ಟಂಟ್​ ಮಾಡುತ್ತಿದ್ದಾರೆ’ ಎಂದು ಪಾಯಲ್​ ಹೇಳಿಕೊಂಡಿದ್ದಾರೆ.

    ‘ಇದು ಕ್ಲೀನ್​ ಮಾಡೋ ಟೈಮ್..’ ಅಂದಿದ್ಯಾಕೆ ‘ಮಸ್ತ್​ ಮಸ್ತ್ ಹುಡ್ಗಿ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts