More

    ಸುಶಾಂತ್​ಗೆ ಡಿಪ್ರೆಶನ್​ ಇತ್ತು ಅಂತ ಜನ ಯಾಕೆ ನಂಬ್ತಿಲ್ಲ? ಸ್ವರ ಪ್ರಶ್ನೆ …

    ಸುಶಾಂತ್​ ಸಿಂಗ್ ರಜಪೂತ್​ ಸಾವಿಗೆ ಕಾರಣವೇನು?

    ಅವರಿಗೆ ಮಾನಸಿಕ ಸಮಸ್ಯೆಗಳಿದ್ದವು ಎಂದು ಕೆಲವರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಸುಶಾಂತ್​, ನೆಪೋಟಿಸಂಗೆ (ಸ್ವಜನಪಕ್ಷಪಾತ) ಬಲಿಯಾದರು ಎಂದು ಹೇಳುತ್ತಾರೆ. ಹಾಗೆಯೇ ಸುಶಾಂತ್​ ಸಾವಿನ ಹಿಂದೆ ಅವರ ಗೆಳತಿ ರಿಯಾ ಚಕ್ರವರ್ತಿ ಅವರ ಕೈವಾಡವಿದೆ ಎಂಬ ಥಿಯರಿಯೂ ಇದೆ.

    ಇದನ್ನೂ ಓದಿ: ಎಲ್ಲಾ ಸರಿ, ಈ ಪನ್ನಾ ಯಾರು? ಉತ್ತರಕ್ಕಾಗಿ ನಾಳೆವರೆಗೂ ಕಾಯಬೇಕು …

    ಅದರಲ್ಲೂ ಸುಶಾಂತ್​ಗೆ ಮಾನಸಿಕ ಸಮಸ್ಯೆಗಳಿದ್ದವು ಎಂದು ಅವರಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರೇ ಹೇಳಿದ್ದಾರೆ. ಅವರಿಗೆ ಬೈಪೋಲಾರ್​ ಸಮಸ್ಯೆ ಇತ್ತು ಮತ್ತು ಅದೇ ಕಾರಣಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ವಿಷಯವನ್ನು ಕೆಲವರು ನಂಬುವ ಸ್ಥಿತಿಯಲ್ಲಿಲ್ಲ. ಸುಶಾಂತ್​ ಯಾವುದೋ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ ಎಂಬ ಅನುಮಾನವನ್ನು ಪದೇಪದೇ ವ್ಯಕ್ತಪಡಿಸುತ್ತಲೇ ಇದ್ದಾರೆ.

    ಸುಶಾಂತ್​ಗೆ ಮಾನಸಿಕ ಸಮಸ್ಯೆಗಳಿದ್ದವು ಮತ್ತು ಅವರು ಬೈಪೋಲಾರ್​ನಿಂದ ಬಳಲುತ್ತಿದ್ದರು ಎಂಬ ವಿಷಯವನ್ನು ಇಷ್ಟಕ್ಕೂ ಜನ ಯಾಕೆ ನಂಬುತ್ತಿಲ್ಲ ಎಂಬುದು ತನಗೆ ಅರ್ಥವೇ ಆಗುತ್ತಿಲ್ಲ ಎಂದು ನಟಿ ಸ್ವರಾ ಭಾಸ್ಕರ್​ ಹೆಳಿಕೊಂಡಿದ್ದಾರೆ.

    ಇದನ್ನೂ ಓದಿ: ‘ಜೋಗಿ’ ಹೆಸರಲ್ಲಿದೆ ಇಷ್ಟೆಲ್ಲಾ ದಾಖಲೆಗಳು!

    ‘ಸುಶಾಂತ್​ಗೆ ಬೈಪೋಲಾರ್​ ಖಾಯಿಲೆ ಇತ್ತು ಎಂದು ಜನ ಯಾಕೆ ನಂಬುತ್ತಿಲ್ಲ ಎಂಬುದು ಗೊತ್ತಾಗುತ್ತಿಲ್ಲ. ಸುಶಾಂತ್​ ಡಿಪ್ರೆಶನ್​ಗೆ ಒಳಗಾದವರಂತೆ ಕಾಣುತ್ತಿರಲಿಲ್ಲ ಎಂದು ಯಾವುದೋ ಲೇಖನದಲ್ಲಿ ಓದಿದೆ. ಇದ್ಯಾವ ತರಹದ ವಾದ. ಇದೊಂದು ಆಂತರಿಕ ಸಮಸ್ಯೆ. ಕಾಣುತ್ತಿಲ್ಲ ಎಂದರೆ ಏನರ್ಥ?’ ಎಂದು ಅವರು ಪ್ರಶ್ನಿಸಿದ್ದಾರೆ.

    ಈ ಕುರಿತು ಮತ್ತಷ್ಟು ಮಾತನಾಡಿರುವ ಅವರು, ‘ಒಬ್ಬ ಮನುಷ್ಯ ಜನಪ್ರಿಯ ಮತ್ತು ಯಶಸ್ವಿಯಾಗಿದ್ದಾನೆ ಎಂಬ ಕಾರಣಕ್ಕೆ ಅವನಲ್ಲೇನೂ ಸಮಸ್ಯೆ ಇಲ್ಲ, ಎಲ್ಲವೂ ಸರಿಯಾಗಿದೆ ಎಂದರ್ಥವಲ್ಲ. ಎಷ್ಟೇ ಜನಪ್ರಿಯ ಮತ್ತು ಯಶಸ್ವಿಯಾಗಿದ್ದರೂ, ಅವರನ್ನೇನೋ ಕಾಡುತ್ತಿರಬಹುದು. ಅದು ಮೇಲ್ನೋಟಕ್ಕೆ ಕಾಣದಿರಬಹುದು’ ಎಂದು ಅವರು ಹೇಳಿದ್ದಾರೆ.

    ಆಶಿಕಾ ಪಾಲಿಗೆ ಇಂದು ವಿಶೇಷವಾದ ದಿನ? ಯಾಕಿರಬಹುದು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts