More

    ಸ್ಟಾರ್​ಗಳ ಜತೆಗಷ್ಟೇ ನಮ್ಮ ಸಿನಿಮಾ, ನಿಮ್ಮಂತವರ ಜತೆಗಲ್ಲ!; ಬೆತ್ತಲಾಯ್ತು ಕರಣ್ ಜೋಹರ್​​ ಹೇಳಿಕೆ

    ಬಾಲಿವುಡ್​ ಕೇವಲ ಸ್ಟಾರ್​ ಕಲಾವಿದರಿಗಷ್ಟೇ ಮತ್ತು ಸಿನಿಮಾ ಕುಟುಂಬದ ಹಿನ್ನೆಲೆಯಿಂದ ಬಂದವರಿಗಷ್ಟೇ ಎಂಬ ಮಾತಿತ್ತು. ಆದರೆ, ಆ ಸಂಪ್ರದಾಯ ಈಗಿಲ್ಲ ಎನ್ನುವಂತಿಲ್ಲ. ತೆರೆಮರೆಯಲ್ಲಿ ಅದು ಹೆಡೆಬಿಚ್ಚಿ ಭುಸುಗುಡುತ್ತಿದೆ. ಹಾಗೆ ಅಡಗಿ ಕುಳಿತಿದ್ದ ಆ ನೆಪೋಟಿಸಂ ಸಂಪ್ರದಾಯ ಸುಶಾಂತ್​ ಸಾವಿನ ಬೆನ್ನಲ್ಲೇ ತೀವ್ರ ಸ್ವರುಪ ಪಡೆದುಕೊಂಡಿದೆ. ಬಾಲಿವುಡ್​ನಲ್ಲಿನ ಹಲವು ಸಿನಿ ಮಂದಿಯ ಬಣಗಳೂ ಇದೀಗ ಬಟ್ಟೆ ಬಿಚ್ಚಿ ಬೆತ್ತಲಾಗಿ ಎಲ್ಲರ ಮುಂದೆ ಬಂದು ನಿಂತಿವೆ. ಆ ನೆಪೋಟಿಸಂನ ಕರಾಳ ಮುಖವನ್ನು ಆಯುಷ್ಮಾನ್​ ಖುರಾನಾ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸುಶಾಂತ್​ ಆತ್ಮಹತ್ಯೆ: ಆಲಿಯಾಗೆ ಗುಡ್​​ಬೈ ಹೇಳಿದ ಕರಣ್​…

    ಬಾಲಿವುಡ್​ನ ಸಾಲು ಸಾಲು ಸೂಪರ್​ ಹಿಟ್ ಸಿನಿಮಾಗಳ ಸರದಾರ ಆಯುಷ್ಮಾನ್​ ಖುರಾನಾ, ಗಾಡ್​ಫಾದರ್​ ಇಲ್ಲದೆ ಸಿನಿಮಾರಂಗಕ್ಕೆ ಬಂದು ಒಂದಷ್ಟು ಏರಿಳಿತ ಎದುರಿಸಿ ಇದೀಗ ಸ್ಟಾರ್ ನಾಯಕನ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಇಂಥ ಆಯುಷ್ಮಾನ್​ಗೆ 2007ರಲ್ಲಿಯೇ ಕರಣ್​ ಜೋಹರ್​ ಸಿನಿಮಾದಲ್ಲಿ ಚಾನ್ಸ್​ ಕೊಡಿಸುವುದಾಗಿ ಹೇಳಿ ಕಾಗೆ ಹಾರಿಸಿದ್ರು!

    ಇದನ್ನೂ ಓದಿ: ಬಾಲಿವುಡ್​​ನಲ್ಲಿ ಸಿನಿಮಾ ಆಗ್ತಿದೆ ಸುಶಾಂತ್​ ಆತ್ಮಹತ್ಯೆ ಪ್ರಕರಣ!

    ‘ಅದು 2007. ಆವತ್ತು ರೇಡಿಯೋ ಜಾಕಿ ಆಗಿದ್ದ ನಾನು ಕರಣ್​ ಜೋಹರ್​ ಅವರನ್ನು ಸಂದರ್ಶನ ಮಾಡಿದ್ದೆ. ಸಂದರ್ಶನ ಮುಗಿದ ಬಳಿಕ, ಸಿನಿಮಾ ಆಸಕ್ತಿ ಇದೆ ಎಂದು ಅವರ ಬಳಿ ಕೇಳಿಕೊಂಡಿದ್ದೆ. ಅದರಂತೆ, ಆಫೀಸ್​ ನಂಬರ್​ ಕೊಟ್ಟು ಸಂಪರ್ಕಿಸುವಂತೆಯೂ ಹೇಳಿಕೊಂಡಿದ್ದರು. ಅದರಂತೆ ಹಲವು ಬಾರಿ ಕರಣ್​ ಆಫೀಸ್​ಗೆ ಹೋದರೆ, ಅವರಿಲ್ಲ ಎಂಬುದಷ್ಟೇ ಉತ್ತರ ಸಿಗುತ್ತಿತ್ತು. ಪದೇಪದೆ ಕೇಳಿದರೆ, ಅವರು ಬಿಜಿಯಾಗಿದ್ದಾರೆ ಎಂಬ ಮಾತು. ಅವರು ಹೇಳಿದಾಗಲೆಲ್ಲ ನಾನು ಫೋನ್​ ಮಾಡಿ ಕೇಳುತ್ತಿದ್ದೆ… ಒನ್​ ಫೈನ್​ ಡೇ, ‘‘ನಾವು ಸ್ಟಾರ್ ನಟರೊಂದಿಗೆ ಮಾತ್ರ ಸಿನಿಮಾ ಮಾಡುತ್ತೇವೆ… ನಿಮ್ಮಂಥವರ ಜತೆಗಲ್ಲ. ಸಿನಿಮಾ ಹಿನ್ನೆಲೆ ಇರದ ಮತ್ತು ಹೊಸಬರನ್ನು ನಾವು ಆಡಿಷನ್​ ಮಾಡುವುದಿಲ್ಲ’’ ಎಂಬ ಪ್ರತ್ಯುತ್ತರ ಸಿಕ್ಕಿತ್ತು. ಅಂದಿನಿಂದ ನನ್ನ ಕೆಲಸದಲ್ಲಿ ನಾನು ತೊಡಗಿಸಿಕೊಂಡೆ. ಸಿನಿಮಾ ಅವಕಾಶವೂ ಸಿಕ್ಕಿತು’ ಎಂದು ಆ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಆಯುಷ್ಮಾನ್​.

    ಇದನ್ನೂ ಓದಿ: ಇಲ್ಲಿ ಯಾರನ್ನೂ ಉದ್ಧಾರ ಆಗೋಕೆ ಬಿಡಲ್ಲ …

    ಸದ್ಯ ಬಾಲಿವುಡ್​ನಲ್ಲಿ ಏ ಲಿಸ್ಟರ್ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸುಶಾಂತ್​, ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಸ್ವತಃ ಕರಣ್​ ಜೋಹರ್​ ಅವರೇ ಕಾಫಿ ವಿಥ್​ ಕರಣ್​ ಶೋಗೆ ಕರೆಸಿ ಅವರ ಸಂದರ್ಶನ ಮಾಡಿದ್ದಾರೆ. ಇದಲ್ಲವೇ ಸಾಧನೆ? (ಏಜೆನ್ಸೀಸ್​)

    ಟಿಕ್ ಟಾಕ್​ಗೆ ಎಳ್ಳು ನೀರು ಬಿಟ್ಟ ದರ್ಶನ್​ ಅಭಿಮಾನಿಗಳು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts