ಕೋಲ್ಕತ: “ಪಶ್ಚಿಮ ಬಂಗಾಳವೇ ಬಾಂಬ್ ಅಡ್ಡೆ” ಎಂಬಂಥ ದೊಡ್ಡ ಆರೋಪ ಈಗ ಕೇಳಿಬಂದಿದೆ. ಅಲ್ಲಿನ ರಾಜ್ಯಪಾಲರೇ ಇಂಥದ್ದೊಂದು ಆರೋಪ ಮಾಡಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.
ರಾಷ್ಟ್ರೀಯ ತನಿಖಾ ದಳ (ಎನ್ಐಎ) ಪಶ್ಚಿಮ ಬಂಗಾಳದ ಮುರ್ಷಿದಾಬಾದ್ನಲ್ಲಿ ಅಲ್-ಖೈದಾ ಸಂಘಟನೆಯ ಆರು ಮಂದಿಯನ್ನು ಬಂಧಿಸಿದ ಬೆನ್ನಿಗೇ ಅಲ್ಲಿನ ರಾಜ್ಯಪಾಲ ಜಗದೀಪ್ ಧನ್ಕರ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
“ಕಾನೂನುಬಾಹಿರವಾಗಿ ಬಾಂಬ್ ತಯಾರಿಸಲು ಪಶ್ಚಿಮಬಂಗಾಳ ಮನೆಯಂತಾಗಿದೆ, ಅದಾಗ್ಯೂ ರಾಜ್ಯಾಡಳಿತ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ” ಎಂದಿರುವ ಅವರು, ಈ ಸಂಬಂಧ ಅಲ್ಲಿನ ಪೊಲೀಸ್ ವರಿಷ್ಠಾಧಿಕಾರಿಗಳ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಡಿಜಿಪಿ ಏನೂ ಗೊತ್ತಿರದವರಂತೆ ಇರುವುದು ಅಸಹನೀಯ” ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)