More

    ‘ಪಶ್ಚಿಮ ಬಂಗಾಳವೇ ಬಾಂಬ್​ ಅಡ್ಡೆ..’ ಹೀಗಂದಿದ್ದು ಬೇರಾರೂ ಅಲ್ಲ, ರಾಜ್ಯಪಾಲರೇ!

    ಕೋಲ್ಕತ: “ಪಶ್ಚಿಮ ಬಂಗಾಳವೇ ಬಾಂಬ್​ ಅಡ್ಡೆ” ಎಂಬಂಥ ದೊಡ್ಡ ಆರೋಪ ಈಗ ಕೇಳಿಬಂದಿದೆ. ಅಲ್ಲಿನ ರಾಜ್ಯಪಾಲರೇ ಇಂಥದ್ದೊಂದು ಆರೋಪ ಮಾಡಿರುವುದು ಮತ್ತಷ್ಟು ಕುತೂಹಲ ಕೆರಳಿಸಿದೆ.

    ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ನಲ್ಲಿ ಅಲ್​-ಖೈದಾ ಸಂಘಟನೆಯ ಆರು ಮಂದಿಯನ್ನು ಬಂಧಿಸಿದ ಬೆನ್ನಿಗೇ ಅಲ್ಲಿನ ರಾಜ್ಯಪಾಲ ಜಗದೀಪ್​ ಧನ್​ಕರ್​ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

    “ಕಾನೂನುಬಾಹಿರವಾಗಿ ಬಾಂಬ್​ ತಯಾರಿಸಲು ಪಶ್ಚಿಮಬಂಗಾಳ ಮನೆಯಂತಾಗಿದೆ, ಅದಾಗ್ಯೂ ರಾಜ್ಯಾಡಳಿತ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದೆ” ಎಂದಿರುವ ಅವರು, ಈ ಸಂಬಂಧ ಅಲ್ಲಿನ ಪೊಲೀಸ್​ ವರಿಷ್ಠಾಧಿಕಾರಿಗಳ ಬಗ್ಗೆಯೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಡಿಜಿಪಿ ಏನೂ ಗೊತ್ತಿರದವರಂತೆ ಇರುವುದು ಅಸಹನೀಯ” ಎಂದೂ ಅವರು ಬೇಸರ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts