More

    ಮದುವೆಗೆ ಹೋಗೋ ಮುನ್ನ ಎಚ್ಚರ​! ಅಕ್ಷತೆ ಹಾಕುವ ಬದಲು ಕಪ್ಪೆ ಓಟ ಮಾಡಬೇಕಾದೀತು ಹುಷಾರ್​..

    ಭೋಪಾಲ್​: ಕರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸೋಂಕಿನ ನಿಯಂತ್ರಣಕ್ಕೆಂದು ಲಾಕ್​ಡೌನ್​ ಮಾಡಲಾಗಿದೆ. ಲಾಕ್​ಡೌನ್​ ಮುಗಿಯುವವರೆಗೂ ದಯವಿಟ್ಟು ಯಾರೂ ಹೊರಗೆ ಹೋಗಬೇಡಿ, ಮದುವೆ ಕಾರ್ಯಕ್ರಮ ಎಂದು ಓಡಾಡಬೇಡಿ ಎಂದು ಸರ್ಕಾರ ಮನವಿ ಮಾಡುತ್ತಲೇ ಇದೆ. ಆದರೂ ಕೇಳದೆ ಮದುವೆಗೆ ಹೋಗಿದ್ದ ಜನರಿಗೆ ಪೊಲೀಸರು ವಿಶೇಷ ಶಿಕ್ಷೆ ನೀಡಿರುವ ಘಟನೆ ಮಧ್ಯಪ್ರದೇಶದ ಭಿಂದ್​ ಜಿಲ್ಲೆಯಲ್ಲಿ ನಡೆದಿದೆ.

    ಭಿಂದ್​ ಜಿಲ್ಲೆಯ ಉಮಾರಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಸುಮಾರು 300 ಜನರು ಸೇರಿಕೊಂಡು ಭರ್ಜರಿಯಾಗಿ ಮದುವೆ ಮಾಡುತ್ತಿದ್ದರು. ಈ ವೇಳೆ ಕರೊನಾ ನಿಯಮ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸಲು ಪೊಲೀಸರು ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದಾರೆ. ನೂರಾರು ಜನರು ಮಾಸ್ಕ್​, ಸಾಮಾಜಿಕ ಅಂತರವಿಲ್ಲದೆಯೇ ಮದುವೆ ಮಾಡುತ್ತಿದ್ದುದ್ದನ್ನು ಕಂಡ ಪೊಲೀಸರು, ಅವರಿಗೆ ಶಿಕ್ಷೆ ನೀಡುವ ನಿರ್ಧಾರ ಮಾಡಿದ್ದಾರೆ.

    ಪೊಲೀಸರು ಬಂದಿದ್ದನ್ನು ಕಂಡೊಡನೆ ಅನೇಕರು ಮದುವೆ ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಸುತ್ತುವರೆದ ಪೊಲೀಸರು ಸಾಕಷ್ಟು ಜನರಿಗೆ ಕಪ್ಪೆ ಓಟ ಮಾಡುವ ಶಿಕ್ಷೆ ನೀಡಿದ್ದಾರೆ. ಈ ಶಿಕ್ಷೆಯ ವಿಡಿಯೋ ಕೂಡ ವೈರಲ್​ ಆಗಿದೆ. (ಏಜೆನ್ಸೀಸ್)

    ಕಾರು ಮಾರೋಕೆ ಫೋಟೋ ಹಾಕುವಾಗ ಗುಪ್ತಾಂಗದ್ದೂ ಫೋಟೋ ಹಾಕಿಬಿಟ್ಟ! ಮಾರಾಟ ಆಗಿದ್ದೇನು?

    ನಿಂತಿದ್ದ ಆ್ಯಂಬುಲೆನ್ಸ್​ ಅಲ್ಲಾಡುತ್ತಿತ್ತು; ಹತ್ತಿರ ಹೋಗಿ ನೋಡಿದ ಪೊಲೀಸರಿಗೆ ಕಂಡಿದ್ದು ಬೇರೆಯದ್ದೇ ದೃಶ್ಯ!

    ಕರೊನಾ ಮೂರನೇ ಅಲೆ ದೇಶಕ್ಕೆ ಕಾಲಿಟ್ಟೇ ಬಿಡ್ತಾ? ಆತಂಕಕಾರಿ‌ ಮಾಹಿತಿ ಹೊರಹಾಕಿದ ವಿಧಿ ವಿಜ್ಞಾನ ತಜ್ಞ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts