ಲಖನೌ: ಉತ್ತರ ಪ್ರದೇಶದ ಶಿಯಾ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಮ್ ರಿಜ್ವಿ ಈಗಿರುವ ಕುರಾನ್ನಲ್ಲಿ ಬದಲಾವಣೆಗಳನ್ನು ಮಾಡಿ ಹೊಸ ಕುರಾನ್ ರಚಿಸಿರುವುದಾಗಿ ಹೇಳಿಕೊಂಡಿದ್ದಾರೆ. ಆ ಕುರಾನ್ ಬಳಕೆಗೆ ಅವಕಾಶ ಮಾಡಿಕೊಡಿ ಎಂದು ಪ್ರಧಾನಿಗೆ ಮನವಿ ಪತ್ರವನ್ನೂ ಬರೆದಿದ್ದಾರೆ.
ಈಗಿರುವ ಕುರಾನ್ನಲ್ಲಿ ಕಾನೂನನ್ನು ಉಲ್ಲಂಘಿಸಿ ಉಗ್ರವಾದವನ್ನು ಉತ್ತೇಜಿಸುವಂತಹ 26 ಪದ್ಯಗಳನ್ನು ರಿಜ್ವಿ ತೆಗೆದುಹಾಕಿದ್ದಾರಂತೆ. ಹಾಗಾಗಿ ಈ ಹೊಸ ಕುರಾನ್ ಅನ್ನು ದೇಶದ ಎಲ್ಲ ಮದರಸ ಹಾಗೂ ಮುಸ್ಲಿಂ ಸಂಸ್ಥೆಗಳಲ್ಲಿ ಬಳಸಲು ಅಧಿಕಾರ ಮಾಡಿಕೊಡಿ ಎಂದು ಅವರು ಮನವಿಯಲ್ಲಿ ಕೇಳಿಕೊಂಡಿದ್ದಾರೆ. ಹಾಗೆಯೇ ಈ ಕುರಾನ್ ಅನ್ನು ಶೀಘ್ರವೇ ಮಾರುಕಟ್ಟೆಗೆ ತರುವುದಾಗಿಯೂ ಅವರು ಹೇಳಿಕೊಂಡಿದ್ದಾರೆ.
ರಿಜ್ವಿ ಅವರು ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಲ್ಲಿರುತ್ತಿದ್ದರು. ಇದೀಗ ಹೊಸ ಕುರಾನ್ ಮೂಲಕ ಸುದ್ದಿಯಾಗುತ್ತಿದ್ದಾರೆ. ಅವರ ವಿರುದ್ಧ ಸಿಬಿಐ ತನಿಖೆಯೂ ನಡೆಯುತ್ತಿದೆ. (ಏಜೆನ್ಸೀಸ್)
‘ಸಿನಿಮಾದಲ್ಲಿ ನೀನಿರಬೇಕೆಂದರೆ ಹೀರೋ ಜತೆ ಮಲಗಬೇಕೆಂದರು!’ ನಟಿ ಬಿಚ್ಚಿಟ್ಟ ಸತ್ಯ
ಜಾರಕಿಹೊಳಿ ಸಿಡಿ ಪ್ರಕರಣ: ನರೇಶ್, ಶ್ರವಣ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಮುಂದಾದ ಎಸ್ಐಟಿ