More

    ವಾಡಿ; ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

    ವಾಡಿ: ಶ್ರೀ ನಿಜಗುಣಾನಂದ ಸ್ವಾಮೀಜಿ, ಸಚಿವರಾದ ಪ್ರಿಯಾಂಕ್ ಖರ್ಗೆ, ಸತೀಶ್ ಜಾರಕಿಹೊಳಿ, ದಿನೇಶ ಗುಂಡೂರಾವ್, ಸಾಹಿತಿ ದೇವನೂರು ಮಹಾದೇವ, ನಟ ಪ್ರಕಾಶ ರೈ ಅವರಿಗೆ ಕೊಲೆ ಬೆದರಿಕೆ ಹಾಕಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ದಲಿತ ಸೇನೆ ಜಿಲ್ಲಾಧ್ಯಕ್ಷ ಶ್ರವಣಕುಮಾರ ಮೋಸಲಗಿ ಒತ್ತಾಯಿಸಿದರು.

    ಸ್ವಾಮಿಗಳು, ಸಚಿವರು, ಪ್ರಗತಿಪರ ಸಾಹಿತಿ ಹಾಗೂ ಲೇಖಕರಿಗೆ ಕೊಲೆ ಬೆದರಿಕೆ ಹಾಕಿರುವ ಕೃತ್ಯ ಖಂಡಿಸಿ ಡಾ.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಮಾತನಾಡಿ, ರಾಜ್ಯದಲ್ಲಿ ಪ್ರಗತಿಪರ ರಾಜಕಾರಣಿಗಳು ಹಾಗೂ ಕಲಾವಿದರಿಗೆ ರಕ್ಷಣೆ ಇಲ್ಲದಂತಾಗಿದೆ. ಎಂ.ಎA. ಕಲಬುರ್ಗಿ, ಗೌರಿ ಲಂಕೇಶ್, ಅರವಿಂದ ಪಾನ್ಸಾರೆ, ನರೇಂದ್ರ ದಾಬೋಲಕರ್ ಅವರನ್ನು ಹತ್ಯೆ ಮಾಡಲಾಗಿದೆ. ಆದರೆ ಇಲ್ಲಿವರೆಗೂ ಅಪರಾಧಿಗಳನ್ನು ಬಂಧಿಸಿ, ಶಿಕ್ಷೆ ನೀಡುವ ಕೆಲಸವಾಗಿಲ್ಲ. ಕೂಡಲೇ ಜೀವ ಬೆದರಿಕೆ ಹಾಕಿದ ಕಿಡಿಗೇಡಿಗಳನ್ನು ಬಂಧಿಸಬೇಕು, ಇವರಿಗೆ ಕುಮ್ಮಕ್ಕು ನೀಡುತ್ತಿರುವ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಆಗ್ರಾಹಿಸಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬೋಳನಿ, ಪ್ರಮುಖರಾದ ಖೇಮಲಿಂಗ ಬೆಳಮಗಿ, ಬಸವರಾಜ ಕಾಟಮಳ್ಳಿ, ರಘುವೀರ ಪವಾರ್, ವಿಜಯ ಸಿಂಗೆ, ನಾಗೇಂದ್ರ ಜಯಗಂಗಾ, ಧರ್ಮಾ ಬಂಗರಗಾ, ಲಕ್ಷö್ಮಣ ತಳಕೇರಿ, ರಮೇಶ ಬಡಿಗೇರ, ಅಶ್ರಫ್ ಖಾನ್, ಚಾಂದ್ ಮಿಯಾ, ಶೈಲೇಶಕುಮಾರ ಹೆರೂರ, ರಾಜು ಗಟ್ಟು, ರವಿ ಕೋಳಕೂರ, ರಾಜು ಕೊಲ್ಲೂರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts