More

    ವಿಶಾಳಿ ತೀರ್ಥಯಾತ್ರೆ ಸಂಪನ್ನ

    ಚಿಕ್ಕೋಡಿ ಗ್ರಾಮೀಣ: ಸಮೀಪದ ಕಲ್ಲೋಳ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ಗುರುವಾರ ಅವರಾತ್ರಿ ಅಮಾವಾಸ್ಯೆ ವಿಶಾಳಿ ತೀರ್ಥ ಯಾತ್ರೆ ನಿಮಿತ್ತ ಸಾವಿರಾರು ಭಕ್ತರು ಕೃಷ್ಣಾ ನದಿಯಲ್ಲಿ ಮಿಂದೆದ್ದರು.

    ಯಕ್ಸಂಬಾ, ಕಲ್ಲೋಳ, ಚಿಕ್ಕೋಡಿ, ಹತ್ತರವಾಟ, ಕರೋಶಿ, ಹಂಜ್ಯಾನವಾಡಿ, ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ ಹಾಗೂ ವಿವಿಧ ಗ್ರಾಮಗಳ ನೂರಕ್ಕೂ ಅಧಿಕ ಪಲ್ಲಕ್ಕಿಗಳು ಜತೆಗೆ ಭಕ್ತರು ಕೃಷ್ಣೆ ದಡದಲ್ಲಿ ಸ್ನಾನ ಮಾಡಿ ಪಲ್ಲಕ್ಕಿ ಉತ್ಸವದೊಂದಿಗೆ ಪ್ರದಕ್ಷಿಣೆ ಹಾಕಿದರು.

    ಭಕ್ತರು ದಂಡವತ್ತು, ಉರುಳು ಸೇವೆ, ಪಲ್ಲಕ್ಕಿ ಸೇವೆ, ಬುತ್ತಿ ಪೂಜೆ, ಅಕ್ಕಿ ಪೂಜೆ, ಎಲೆ ಪೂಜೆ ಸಲ್ಲಿಸಿದರು. ರೈತಾಪಿ ಜನರು ಕೃಷ್ಣಾ ನದಿಗೆ ಪೂಜೆ ಸಲ್ಲಿಸಿದರು. ಯಕ್ಸಂಬಾದ ವಿವಿಧ ದೇವರ ಪಲ್ಲಕ್ಕಿಗಳಿಗೆ ನೈವೇದ್ಯ ಹಾಗೂ ಮಹಾಪೂಜೆ ಜರುಗಿತು. ಮಧ್ಯಾಹ್ನ ದೇವರ ನುಡಿ ಕಾರ್ಯಕ್ರಮದಲ್ಲಿ ಭಂಡಾರದ ಓಕುಳಿ ಜರುಗಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts