ಲಖನೌ: ನಿನ್ನೆ ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಬಂಧಿಸುತ್ತಿದ್ದಂತೆ ಇತ್ತ ಲಖನೌದಲ್ಲಿ ಆತನ ಪತ್ನಿ, ಮಗನನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು.
ಇಂದು ಉತ್ತರ ಪ್ರದೇಶ ಪೊಲೀಸರು ದುಬೆಯನ್ನು ಎನ್ಕೌಂಟರ್ ಮಾಡಿ ಕೊಂದಿದ್ದಾರೆ. ಆತನ ಅಂತ್ಯಕ್ರಿಯೆ ವೇಳೆ ಪತ್ನಿ ತುಂಬ ಭಾವುಕರಾದರು.
ವಿಕಾಸ್ ದುಬೆ ಅಂತಿಮ ಸಂಸ್ಕಾರವನ್ನು ವರದಿ ಮಾಡಲು ತೆರಳಿದ್ದ ಮಾಧ್ಯಮದವರು ಆಕೆಯ ಬಳಿ, ನಿಮ್ಮ ಪತಿಗೆ ಇಂಥದ್ದೊಂದು ಅಂತ್ಯ ಎದುರಾಗಿದ್ದು ನ್ಯಾಯವಾ? ಇಂಥ ಸಾವಿಗೆ ಅವರು ಯೋಗ್ಯರು ಎಂದು ನಿಮಗೆ ಅನ್ನಿಸುತ್ತಿದೆಯಾ ಎಂದು ಪ್ರಶ್ನೆ ಕೇಳಿದಾಗ ಆವೇಶದಿಂದಲೇ ಉತ್ತರ ನೀಡಿದ್ದಾರೆ. ಇದನ್ನೂ ಓದಿ: ವಿಕಾಸ್ ದುಬೆ ಎನ್ಕೌಂಟರ್ಗೆ ಮರುಗಿದ ಟಿಎಂಸಿ ಸಂಸದೆ; ನ್ಯಾಯವನ್ನೇ ಕೊಲ್ಲುತ್ತಿದ್ದಾರೆ ಯೋಗಿ ಜಿ ಎಂದ ಮಾಹುವಾ
ಹೌದು..ಹೌದು..ಎಂದು ಮೂರು ಬಾರಿ ಕೂಗಿದ ಆಕೆ, ಇಂಥದ್ದೊಂದು ಸಾವಿಗೆ ವಿಕಾಸ್ ದುಬೆ ಯೋಗ್ಯನಾಗಿದ್ದಾನೆ. ಅವನ ಹಣೆಬರಹದಂತೆ ಆಗಿದೆ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲ, ನೀವೆಲ್ಲ ಈ ಜಾಗದಿಂದ ಹೊರಟು ಹೋಗಿ ಎಂದು ಮಾಧ್ಯಮದವರ ಎದುರು ಕೂಗಾಡಿದ್ದಾರೆ ಎನ್ನಲಾಗಿದೆ.
ವಿಕಾಸ್ ದುಬೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಆತನ ಎದೆಗೆ ನಾಲ್ಕು ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ. ಮೃತದೇಹಕ್ಕೆ ಪೋಸ್ಟ್ ಮಾರ್ಟಮ್ ಕೂಡ ಮಾಡಲಾಗಿದ್ದು ಇನ್ನೂ ವರದಿ ಬಂದಿಲ್ಲ. (ಏಜೆನ್ಸೀಸ್)
ವಿಕಾಸ್ ದುಬೆ ಎನ್ಕೌಂಟರ್: ಸತ್ಯಾಸತ್ಯತೆಗಳ ಕುರಿತು ಹುಟ್ಟಿಕೊಂಡ ಪ್ರಶ್ನೆಗಳೇನು?