More

    ಆನಂದ ಮಹಲ್ ನವೀಕರಣ ಕಾಮಗಾರಿ ಕೈಗೊಳ್ಳಿ

    ವಿಜಯಪುರ: ಐತಿಹಾಸಿಕ ಆನಂದ ಮಹಲ್ ನವೀಕರಣ ಕಾಮಗಾರಿಯನ್ನು, ಕಟ್ಟಡಕ್ಕೆ ಯಾವುದೇ ರೀತಿಯ ಹಾನಿಯಾಗದೆ ವೈಜ್ಞಾನಿಕ ರೀತಿಯಲ್ಲಿ ಕೈಗೊಳ್ಳಲು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

    ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆನಂದ್ ಮಹಲ್ ಸಂರಕ್ಷಣಾ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕಟ್ಟಡದಲ್ಲಿ ಬಿರುಕು ಬಿಟ್ಟಿರುವುದು ಸರಿಪಡಿಸಿ, ಭದ್ರ ಗೊಳಿಸುವುದು ಹಾಗೂ ಕಿಟಕಿ ಗಳನ್ನು ಹಾಕುವುದು ಹಾಗೂ ಬಣ್ಣ ಮಾಡುವುದು ಮಹಲಿನ ಮೇಲೆ ನೀರು ನಿಲ್ಲದಂತೆ ಹಾಗೂ ಮಹಲಿಗೆ ಸಂಬಂಧಪಟ್ಟ ಕಾಮಗಾರಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

    ಯಾವುದೇ ಕಾರಣಕ್ಕೂ ಮಹಲಿನ ಸೊಬಗಿಗೆ ಧಕ್ಕೆಯಾಗದ ರೀತಿಯಲ್ಲಿ ಹಾಗೂ ಕಟ್ಟಡದ ಸೊಬಗಿಗೆ ಧಕ್ಕೆ ಯಾಗದಂತೆ ಕಾಮಗಾರಿ ಕೈಗೊಳ್ಳಬೇಕು. ಸ್ಮಾರಕಗಳ ಸುತ್ತಮುತ್ತ ಅಕ್ರಮವಾಗಿ ನಿವೇಶನ ಆಗಲಿ ಅಥವಾ ಮನೆಗಳನ್ನು ನಿರ್ಮಾಣ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದರು.

    ಪಾಲಿಕೆ ಆಯುಕ್ತ ವಿಜಯ್ ಮೆಕ್ಕಳಕಿ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಭಜಂತ್ರಿ, ಜಿಲ್ಲಾ ತರಬೇತಿ ಸಂಸ್ಥೆ , ಪ್ರಾಂಶುಪಾಲ ಡಾ.ಔದ್ರಾಮ್, ಪೀಟರ್‌ಅಲೆಕ್ಸಾಂಡರ್, ಅಮೀನ್ ಹುಲ್ಲೂರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts