More

    ಅರ್ಜಿ ಸಲ್ಲಿಸಲು ರೈತರಿಗೆ ಸೂಚನೆ

    ವಿಜಯಪುರ: ಜಿಲ್ಲೆಯಲ್ಲಿ ಈಗಾಗಲೇ ಹಿಂಗಾರಿನಲ್ಲಿ ಕೈಗೊಳ್ಳಲಾದ ತೋಟಗಾರಿಕೆ ಬೆಳೆ ಸಮೀಕ್ಷೆಯಲ್ಲಿ ಕಲ್ಲಂಗಡಿ ಮತ್ತು ಕರಬೂಜಗೆ ಸಂಬಂಧಿಸಿದಂತೆ ಹೆಸರು ಬಿಟ್ಟುಹೋಗಿದಲ್ಲಿ ಅಂತಹವರು ಜೂ.15ರೊಳಗೆ ಆಯಾ ತಾಲೂಕು ತೋಟಗಾರಿಕೆ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಅವರು ತಿಳಿಸಿದರು.
    ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, 2020-21ನೇ ಸಾಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರ ಧನ ವಿತರಿಸುವ ಕುರಿತು ಚರ್ಚಿಸಿದರು. ಈಗಾಗಲೆ ತೋಟಗಾರಿಕೆ ಬೆಳೆಗಳಾದ ನಿಗದಿತ ಹಣ್ಣು ಮತ್ತು ತರಕಾರಿಗಳಿಗೆ ಸರ್ಕಾರವು 15 ಸಾವಿರ ರೂ.ಗಳ ಸಹಾಯಧನ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ಹಿಂಗಾರಿನಲ್ಲಿ ಕೈಗೊಳ್ಳಲಾದ ಬೆಳೆ ಸಮಿಕ್ಷೆಯಿಂದ ಕಲ್ಲಂಗಡಿ ಮತ್ತು ಕರಬೂಜಗೆ ಸಂಬಂಧಿಸಿದಂತೆ ಸಮಿಕ್ಷೆಯಿಂದ ಕೈಬಿಟ್ಟು ಹೋಗಿದ್ದಲ್ಲಿ ತಕ್ಷಣ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.
    ಬಾಳೆ, ಪಪ್ಪಾಯ, ಅಂಜೂರ, ಅನಾನಸ್, ಕಲ್ಲಂಗಡಿ ಮತ್ತು ಕರಬೂಜ ಹಣ್ಣಿಗೆ ಸರ್ಕಾರ ಬೆಳೆಹಾನಿ ಪರಿಹಾರ ಘೋಷಿಸಿದೆ. ಅದರಂತೆ ತರಕಾರಿ ಬೆಳೆಗಳಾದ ಸಿಹಿ ಕುಂಬಳ, ಎಲೆ ಕೋಸು, ದಪ್ಪ ಮೆಣಸಿನಕಾಯಿ, ಹೂ ಕೋಸು, ಹಸಿರು ಮೆಣಸಿನಕಾಯಿ, ಟೊಮ್ಯಾಟೊ, ಈರುಳ್ಳಿ ಹಾಗೂ ಕ್ಯಾರೆಟ್ ತರಕಾರಿ ಬೆಳೆಗಾರರಿಗೆ ಪರಿಹಾರಧನ ಕಾರ್ಯಕ್ರಮದಡಿಯಲ್ಲಿ ಸರ್ಕಾರ ಪರಿಹಾರ ನೀಡಲು ಘೋಷಿಸಿದೆ. ಸದ್ಯ ಸಮೀಕ್ಷೆಯನ್ವಯ 285.67 ಹೆಕ್ಟೇರ್ ತರಕಾರಿ ಬೆಳೆ ಮತ್ತು 910.54 ಹೆಕ್ಟೇರ್ ವಿವಿಧ ಹಣ್ಣು ಬೆಳೆ ಇದ್ದು ಅರ್ಹರಿಗೆ ಪರಿಹಾರ ದೊರೆಯಲಿದೆ ಎಂದರು.
    ಅದರಂತೆ ಈರುಳ್ಳಿ ಮತ್ತು ಇತರ ಬೆಳೆಗಳ ಸಮೀಕ್ಷೆ ಈಗಾಗಲೇ ಕೈಗೊಂಡಿದ್ದು ಅರ್ಹ ಲಾನುಭವಿಗಳಿಗೆ ಸರ್ಕಾರದ ಈ ಸೌಲಭ್ಯ ದೊರೆಯಲು ಸಮೀಕ್ಷೆ ವರದಿಯನ್ನು ಮರು ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಬೇಕು. ಆಯಾ ಗ್ರಾಮ ಪಂಚಾಯಿತಿವಾರು ಬೆಳೆ ಸಮೀಕ್ಷೆ ವರದಿಯನ್ನು ಪ್ರಕಟಿಸಿದ್ದು, ಈ ಕುರಿತಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಆಯಾ ತಾಲೂಕು ತೋಟಗಾರಿಕೆ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಭೇಟಿಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.

    ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಸಂತೋಷ ಇನಾಂದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

    ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ

    ತೋಟಗಾರಿಕೆ ಬೆಳೆ ಸಮೀಕ್ಷೆಯಲ್ಲಿ ಹೆಸರುಗಳು ಬಿಟ್ಟುಹೊದಲ್ಲಿ ವಿಜಯಪುರ ತಾಲೂಕು ತೋಟಗಾರಿಕೆ ಅಧಿಕಾರಿ ಶಾಲಿನಿ ಎಸ್ ಮೊ; 9535185999, ಇಂಡಿ ತಾಲೂಕಿನ ಆರ್.ಡಿ ಹಿರೇಮಠ ಮೊ; 8123194479, ಸಿಂದಗಿ ತಾಲೂಕಿನ ಅಮೋಘ ಹಿರೇಕುರುಬರ ಮೊ; 8971766033, ಬ.ಬಾಗೇವಾಡಿಯ ಸಿ.ಬಿ ಪಾಟೀಲ ಮೊ; 9845215362, ಮುದ್ದೇಬಿಹಾಳದ ಸುಭಾಸ ಟಾಕಳೆ ಮೊ; 9972719844 ಅವರಿಗೆ ಸಂಪರ್ಕಿಸಬಹುದು.

    ಅರ್ಜಿ ಸಲ್ಲಿಸಲು ರೈತರಿಗೆ ಸೂಚನೆ
    ಅರ್ಜಿ ಸಲ್ಲಿಸಲು ರೈತರಿಗೆ ಸೂಚನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts