More

    ಪ್ರಕೃತಿ ಗೀತೆಗೆ ವಿಜಯಪ್ರಕಾಶ್​ ಧ್ವನಿ; ಮುಖ್ಯಮಂತ್ರಿಗಳಿಂದ ‘ದುನಿಯಾ’ ಹಾಡು ಬಿಡುಗಡೆ

    ಬೆಂಗಳೂರು: ಕನ್ನಡದ ಹೆಮ್ಮೆಯ ಗಾಯಕ ವಿಜಯಪ್ರಕಾಶ್​ ಇದುವರೆಗೂ ಹಲವು ಗೀತೆಗಳನ್ನು ಹಾಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ‘ದುನಿಯಾ’ ಎಂಬ ಹಾಡು, ಅವರ ಮಟ್ಟಿಗೆ ವಿಶೇಷ. ಕಾರಣ ಇದೊಂದು ಪ್ರಕೃತಿ ಗೀತೆ. ಈ ಹಾಡನ್ನು ಬಾಲಿವುಡ್​ನ ಜನಪ್ರಿಯ ಸಂಗೀತ ನಿರ್ದೇಶಕರಾದ ಸಲೀಂ-ಸುಲೇಮಾನ್​ ಸಂಯೋಜಿಸಿದ್ದು, ಇತ್ತೀಚೆಗೆ ಬಿಡುಗಡೆಯಾಗಿದೆ.

    ಇದನ್ನೂ ಓದಿ: ‘ಆಧುನಿಕ ಬಸವಣ್ಣ’ ಡಾ. ಚನ್ನಬಸವ ಪಟ್ಟದೇವರು ಕುರಿತ ‘ಕಲ್ಯಾಣಕುವರ’ ಚಿತ್ರದ ಟ್ರೈಲರ್ ಬಿಡುಗಡೆ

    ಸಲೀಂ ಮತ್ತು ಸುಲೇಮಾನ್​ ಜೋಡಿ ಪ್ರತೀ ವರ್ಷ ‘ಭೂಮಿ’ ಎಂಬ ಆಲ್ಬಂ ಹೊರತರುತ್ತಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಆಲ್ಬಂನಲ್ಲಿ ಪರಿಸರ ಕಾಳಜಿ ಮೆರೆಯುವ ಹಲವು ಹಾಡುಗಳಿವೆ. ಇದೇ ಶೀರ್ಷಿಕೆಯಡಿ ಪ್ರತೀ ವರ್ಷ ಹಾಡುಗಳು ಮೂಡಿಬರುತ್ತಿದ್ದು, ಈ ಹಾಡುಗಳನ್ನು ದೇಶದ ಜನಪ್ರಿಯ ಗಾಯಕ-ಗಾಯಕಿಯರು ಹಾಡುತ್ತಾ ಬಂದಿದ್ದಾರೆ. ಈ ಬಾರಿಯ ವಿಶೇಷತೆಯೆಂದರೆ, ‘ಭೂಮಿ 2022’ ಆಲ್ಬಂನಲ್ಲಿ ಕನ್ನಡದಲ್ಲೂ ಒಂದು ಹಾಡು ಮೂಡಿಬಂದಿರುವುದು.

    ‘ದುನಿಯಾ’ ಎಂದು ಶುರುವಾಗುವ ಈ ಹಾಡಿಗೆ ವಿಜಯಪ್ರಕಾಶ್​ ಮತ್ತು ಸಲೀಮ್ ಮರ್ಚೆಂಟ್​ ಧ್ವನಿಯಾಗಿದ್ದಾರೆ. ವಿ. ನಾಗೇಂದ್ರ ಪ್ರಸಾದ್​ ರಚಿಸಿರುವ ‘ಉಸಿರಿನ ಮ್ಯಾಲೆ, ಹಸಿರಿನ ಮ್ಯಾಲೆ ಪರಪಂಚ … ಕಲ್ಲುಗಳ ಮ್ಯಾಲೆ ಮಣ್ಣುಗಳ ಮ್ಯಾಲೆ ಪರಪಂಚ … ಗಾಳಿಯಾಗೇ ಭೂಮಿ ನಿಂತೈತೆ ಸೋಜಿಗ ನೋಡೋ … ಭೂಮಿಯಾಗೆ ಎಲ್ಲ ತುಂಬೈತೆ …’ ಎಂದು ಸಾಗುವ ಈ ಹಾಡಿನ ರಿದಮ್​ ವಿಭಾಗದ ಉಸ್ತುವಾರಿಯನ್ನು ಜನಪ್ರಿಯ ಸಂಗೀತಗಾರ ತೌಫೀಕ್​ ಖುರೇಷಿ ವಹಿಸಿಕೊಂಡಿದ್ದಾರೆ.

    ಇದನ್ನೂ ಓದಿ: ನಾನು ಜೀವಂತ ಇದ್ದೇನೆ, ಮಗ ನನ್ನನ್ನು ಕೊಂದಿಲ್ಲ’ ಎಂದ ಹಿರಿಯ ನಟಿ; ಪೊಲೀಸರಿಗೂ ದೂರು

    ಇತ್ತೀಚೆಗೆ ಈ ಹಾಡನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಸಚಿವ ಕೆ. ಸುಧಾಕರ್​ ಬಿಡುಗಡೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯಪ್ರಕಾಶ್​ ಮತ್ತು ಸಲೀಮ್​ ಮರ್ಚೆಂಟ್​ ಸಹ ಹಾಜರಿದ್ದಾರೆ.

    ಮೊದಲ ದಿನ ‘ಅವತಾರ್ 2​’ ಚಿತ್ರ ಭಾರತದಲ್ಲಿ ಗಳಿಸಿದ್ದೆಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts