ಮುಂಬೈ: ಇತ್ತೀಚೆಗೆ ಹಿರಿಯ ನಟಿಯೊಬ್ಬರು ಮಗನಿಂದಲೇ ಕೊಲೆಯಾಗಿದ್ದರು ಎಂಬ ಸುದ್ದಿ ಹರಿದಾಡಿದ್ದು, ಇದೀಗ ಆ ನಟಿಯೇ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮಾತ್ರವಲ್ಲ, ನಾನು ಜೀವಂತ ಇದ್ದೇನೆ, ಮಗ ನನ್ನನ್ನು ಕೊಂದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿದ್ದರು, ಈ ಕುರಿತಂತೆ ಪೊಲೀಸರಿಗೂ ದೂರು ನೀಡಿದ್ದಾರೆ.
ಮುಂಬೈನ ಜುಹುನಲ್ಲಿ ಹಿಂದಿ ಕಿರುತೆರೆಯ ಹಿರಿಯ ನಟಿ ವೀಣಾ ಕಪೂರ್ ಮಗನಿಂದಲೇ ಕೊಲೆಯಾಗಿದ್ದರು ಎಂಬುದಾಗಿ ಕೆಲ ದಿನಗಳ ಹಿಂದೆ ಹಲವೆಡೆ ಸುದ್ದಿ ಹರಿದಾಡಿತ್ತು. ಆದರೆ ನಾನು ಜೀವಂತ ಇದ್ದೇನೆ, ಮಗ ನನ್ನನ್ನು ಕೊಂದಿಲ್ಲ ಎಂಬುದಾಗಿ ನಟಿ ವೀಣಾ ಕಪೂರ್ ಸ್ಪಷ್ಟನೆ ನೀಡಿದ್ದು, ಈ ಕುರಿತ ವದಂತಿಗಳ ಬಗ್ಗೆ ಕ್ರಮ ಜರುಗಿಸಬೇಕು ಎಂದು ಮುಂಬೈನ ದಿಂಡೋಶಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನನ್ನನ್ನು ಮಗನೇ ಕೊಂದಿದ್ದಾನೆ ಎಂಬುದಾಗಿ ವದಂತಿ ಹಬ್ಬಿದ್ದು, ಈ ಬಗ್ಗೆ ವಿಚಾರಿಸಿ ನನಗೆ ಹಲವಾರು ಕರೆ/ಮೆಸೇಜ್ಗಳು ಬರುತ್ತಿದ್ದು, ಕೆಲಸದ ಮೇಲೆ ಗಮನ ಹರಿಸಲು ಕೂಡ ಆಗುತ್ತಿಲ್ಲ ಎಂದು ಪೊಲೀಸರ ಬಳಿ ಆಕೆ ಅಲವತ್ತುಕೊಂಡಿದ್ದಾರೆ. ವೀಣಾ ಕಪೂರ್ ಪುತ್ರ ಅಭಿಷೇಕ್ ಛಡ್ಡಾ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತಾಯಿ ಜೀವಂತ ಇದ್ದು, ನಾನು ಹಾಗೆಲ್ಲ ಕನಸಲ್ಲೂ ಯೋಚಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಅಂದಹಾಗೆ ಪುತ್ರ ಸಚಿನ್ ಕಪೂರ್ನಿಂದ ಕೊಲೆಯಾದಾಕೆಯ ಹೆಸರು ಕೂಡ ವೀಣಾ ಕಪೂರ್ ಆಗಿದ್ದರಿಂದ ಮತ್ತು ಆಕೆಯೂ ನಟಿಸಿದ್ದರಿಂದ ಕಿರುತೆರೆಯಲ್ಲಿ ಜನಪ್ರಿಯರಾಗಿರುವ ಹಿರಿಯ ನಟಿ ವೀಣಾ ಕಪೂರ್ ಅವರೇ ಕೊಲೆಯಾಗಿದ್ದರು ಎಂಬ ವದಂತಿ ಹರಿದಾಡಿ ಈ ಅವಾಂತರವೆಲ್ಲ ಸೃಷ್ಟಿಯಾಗಿತ್ತು ಎಂಬುದು ತಿಳಿದುಬಂದಿದೆ.
ಹಿರಿಯ ನಟಿಯ ತಲೆಗೆ 40 ಸಲ ಬ್ಯಾಟ್ನಿಂದ ಬಾರಿಸಿ ಕೊಲೆ; ತಾಯಿಯನ್ನು ಕೊಲ್ಲಲು ಮಗನಿಗಿತ್ತು ವರ್ಷಗಳ ಕಾಲದ ಅಸಹನೆ!
ರಸ್ತೆ ಸಂಪರ್ಕ ಇಲ್ಲದ್ದರಿಂದ ರೋಗಿಯನ್ನು 5 ಕಿ.ಮೀ. ದೂರ ಹೊತ್ತುಕೊಂಡು ಆಸ್ಪತ್ರೆಗೆ ಹೋದ ಕುಟುಂಬಸ್ಥರು!