ವಿಜಯನಗರ: ಕರೊನಾ ವೈರಸ್ ಭಯದಲ್ಲಿದ್ದ ಗರ್ಭಿಣಿಗೆ ಸರಳ ಹೆರಿಗೆ ಮಾಡಿಸುವ ಮೂಲಕ 108 ಆಂಬ್ಯುಲೆನ್ಸ್ ಸಿಬ್ಬಂದಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಆಸ್ಪತ್ರೆಗೆ ಹೋಗದೆ ಆಂಬ್ಯುಲೆನ್ಸ್ನಲ್ಲೇ ಸರಳ ಹೆರಿಗೆ ಮಾಡಲಾಗಿದ್ದು, ತಾಯಿ ಮತ್ತು ಗಂಡು ಮಗು ಇಬ್ಬರೂ ಸುರಕ್ಷಿತವಾಗಿದ್ದಾರೆ.
ಆಸ್ಪತ್ರೆಗೆ ಹೋದರೆ ಕರೊನಾ ಆವರಿಸಿಬಿಡುತ್ತದೆ ಎಂಬ ಭಯದಲ್ಲಿದ್ದ ಗರ್ಭಿಣಿ ಮಹಿಳೆ ಚೈತ್ರ ಬಸವರಾಜ ಇದ್ದರು. ಆದರೆ, ಹೊಸಪೇಟೆ ತಾಲೂಕಿನ ವೆಂಕಟಾಪುರದಿಂದ ಹೊಸಪೇಟೆ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಗೆ ಕರೆತರುವ ಮಾರ್ಗ ಮಧ್ಯೆಯೇ ಹೆರಿಗೆ ಆಂಬ್ಯುಲೆನ್ಸ್ ಸಿಬ್ಬಂದಿ ಹೆರಿಗೆ ಮಾಡಿಸಿದ್ದಾರೆ.
ಆಸ್ಪತ್ರೆಗೆ ಹೋಗುವುದೇ ಕರೊನಾ ಮಹಾಮಾರಿಯನ್ನು ಅಂಟಿಸಿಕೊಂಡು ಮರಳುವುದಕ್ಕೆ ಎನ್ನುವ ಭಯದ ವಾತಾವರಣದಲ್ಲಿ ಹೊಸಪೇಟೆ ಜನರಿದ್ದು, ಇದೀಗ ಗರ್ಭಿಣಿಗೆ ಮಾರ್ಗಮಧ್ಯೆಯೇ ಹೆರಿಗೆ ಆಗಿರುವುದು ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. (ದಿಗ್ವಿಜಯ ನ್ಯೂಸ್)
ಡಿಎಲ್ಎಫ್ ಲಂಚ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ಗೆ ಕ್ಲೀನ್ ಚಿಟ್
ಪತ್ನಿಗೆ ಕರೆ ಮಾಡಿದಾಗಲೆಲ್ಲ ಕೇಳಿ ಬರ್ತಿದ್ದ ಒಂದೇ ಮಾತಿಂದ ಸೈಕೋ ಆದ ಗಂಡ: ನಡೆದೇ ಹೋಯ್ತು ಭೀಕರ ಕೃತ್ಯ!
ಏರ್ ಇಂಡಿಯಾ ಸರ್ವರ್ ಮೇಲೆ ಸೈಬರ್ ದಾಳಿ: 4.5 ಮಿಲಿಯನ್ ಗ್ರಾಹಕರ ದತ್ತಾಂಶ ಸೋರಿಕೆ