More

    ದಿಶಾ‌ ಸಭೆಗೆ ಜನಪ್ರತಿನಿಧಿಗಳ ನಿರಾಸಕ್ತಿ

    ಹೊಸಪೇಟೆ: ಜಿಲ್ಲೆಯ ಅಭಿವೃದ್ಧಿ‌ ಸಹಕಾರ ಮತ್ತು ಮೇಲ್ವಿಚಾರಣೆ ಸಮಿತಿ ‌ಸಭೆಗೆ ಜಿಲ್ಲೆಯ ಶಾಸಕರು, ನಾಮ ನಿರ್ದೇಶಿತ ಸದಸ್ಯರಿಂದಲೇ ನಿರಾಸಕ್ತಿ ಮುಂದುವರಿದಿದೆ.
    ಸಂಸದ ವೈ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾ ಒಳಂಗಣ ಕ್ರೀಡಾಂಗಣದಲ್ಲಿ ಕರೆದಿದ್ದ ದಿಶಾ ಸಮಿತಿ ಸಭೆಗೆ ಜಿಲ್ಲೆಯ ಸಂಸದರು, ಶಾಸಕರು, ನಾಲ್ವರು ನಾಮನಿರ್ದೇಶಿತ ಸದಸ್ಯರ ಗೈರು ಹಾಜರಿ ಎದ್ದು‌ಕಾಣುತ್ತಿತ್ತು.‌
    ಸಮಿತಿಯಲ್ಲಿ ದಾವಣಗೆರೆ ಸಂಸದ ಜೆ.ಎಂ.ಸಿದ್ದೇಶ್ವರ, ರಾಜ್ಯಸಭೆ ಸದಸ್ಯ ಸೈಯದ್ ನಾಸೀರ್ ಹುಸೇನ್ ಸಹ ಅಧ್ಯಕ್ಷರಾಗಿದ್ದು, ಜಿಲ್ಲೆಯ ಐವರು ಶಾಸಕರು ಮತ್ತು ಮೂವರಲ್ಲಿ ಇಬ್ಬರು  ನಾಮನಿರ್ದೇಶಿತ ಸದಸ್ಯರು ಕೂಡಾ ಹಾಜರಾಗಿರಲಿಲ್ಲ. ಇದರಿಂದಾಗಿ‌ ಈ ಸಭೆ ಸಮಿತಿ ಅಧ್ಯಕ್ಷರಾದ‌ ಸಂಸದ ದೇವೇಂದ್ರಪ್ಪ ಅವರಿಗೆ ಸೀಮಿತ ಎನ್ನುವಂತಾಯಿತು.
    ಅಲ್ಲದೇ ಕೇಂದ್ರ ಪುರಸ್ಕೃತ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ೩೬ ಯೋಜನೆಗಳ ಪ್ರಗತಿ ಪರಿಶೀಲನೆ, ಆಯಾ ವಿಧಾನಸಭಾ ಕ್ಷೇತ್ರಗಳ ಸಮಸ್ಯೆಗಳಲ್ಲಿ ಯೋಜನೆಗಳ ಅನುಷ್ಠಾನ ದ ಬಗ್ಗೆ ಗಂಭೀರ ಚರ್ಚೆಯಾಗಲಿಲ್ಲ. ಅಧಿಕಾರಿಗಳ ಗಿಳಿ ಪಾಠಕ್ಕೆ ಸಂಸದರು ತಲೆ ದೂಗುವಂತಾಯಿತು.‌

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts