ಬೆಂಗಳೂರು: ವಿಜಯ ಬ್ಯಾಂಕ್ನ ಚೇರ್ಮನ್ ಆಗಿದ್ದ ಕೆ. ಸದಾನಂದ ಶೆಟ್ಟಿ ಅವರು ನಿಧನರಾದರು. ಸೋಹಂ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ಹಾಗೂ ಚೇರ್ಮನ್ ಕೂಡ ಆಗಿದ್ದ ಅವರು ಇಂದು ಫ್ರಾನ್ಸ್ನಲ್ಲಿ ಕೊನೆಯುಸಿರೆಳೆದರು. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಸದಾನಂದ ಶೆಟ್ಟಿ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಕರೆತರಲಿದ್ದು, ಇಲ್ಲಿಯೇ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಶೆಟ್ಟಿ ಅವರು 1937ರ ಮೇ 6ರಂದು ಮಂಗಳೂರಿನ ಕೊಡಿಯಾಲ್ಬೈಲ್ನಲ್ಲಿ ಜನಿಸಿದ್ದರು. ಅವರು ಪತ್ನಿ ಸುಜಾತ ಶೆಟ್ಟಿ, ಪುತ್ರರಾದ ಸಂಜಿತ್ ಶೆಟ್ಟಿ ಮತ್ತು ಸುಚಿಂದ್ರ ಶೆಟ್ಟಿ ಅವರನ್ನು ಅಗಲಿದ್ದಾರೆ.
ಈಗ ಬ್ಯಾಂಕ್ ಆಫ್ ಬರೋಡ ಜತೆ ವಿಲೀನಗೊಂಡಿರುವ ವಿಜಯ ಬ್ಯಾಂಕ್ಗೆ 1983ರಿಂದ 90ರ ವರೆಗೆ ಸದಾನಂದ ಶೆಟ್ಟಿ ಚೇರ್ಮನ್ ಆಗಿದ್ದರು. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ನ ಉಪಾಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸಿದ್ದರು. ಏರ್ ಇಂಡಿಯಾ, ಇಂಡಸ್ಟ್ರಿಯಲ್ ರಿಕನ್ಸ್ಟ್ರಕ್ಷನ್ ಬ್ಯಾಂಕ್ ಆಫ್ ಇಂಡಿಯಾದ ಆಡಳಿತ ಮಂಡಳಿಯಲ್ಲೂ ಅವರು ಒಬ್ಬರಾಗಿದ್ದರು.
ರಿನೀವೇಬಲ್ ಎನರ್ಜಿ ಡೆವಲಪರ್ಸ್ ಅಸೋಸಿಯೇಷನ್ ಆಫ್ ಕರ್ನಾಟಕದ ಈಗಿನ ಅಧ್ಯಕ್ಷರಾಗಿಯೂ ಅವರು ಅಧಿಕಾರದಲ್ಲಿದ್ದರು. 2004ರಲ್ಲಿ ಅವರು ಸೋಹಂ ರಿನೀವೇಬಲ್ ಎನರ್ಜಿ ಗ್ರೂಪ್ ಆಫ್ ಕಂಪನೀಸ್ ಸ್ಥಾಪನೆ ಮಾಡಿದ್ದರು.
ಕುಂದಾಪುರದ ಫ್ಲೈಓವರ್ನಲ್ಲಿ ಕೈ ಇಟ್ಟಲ್ಲೆಲ್ಲ ಕರೆಂಟ್!; ವಿದ್ಯುತ್ ಸೋರಿಕೆ, ಸಂಪರ್ಕ ಕಡಿತಗೊಳಿಸಿದ ಮೆಸ್ಕಾಂ
ಸಾಯಲೆಂದು ನದಿಗೆ ಹಾರಲು ಯತ್ನಿಸಿದವನನ್ನು ಹಿಡಿದು ರಕ್ಷಿಸಿ ಮನೆಯವರಿಗೆ ಒಪ್ಪಿಸಿದ ಸಾರ್ವಜನಿಕರು..