More

    ವಿಲನ್ ಆಗಲು ಇಷ್ಟವಿಲ್ಲ; ಹೀರೋಗಳು ಸಹಿಸುವುದಿಲ್ಲವೆಂದ ನಟ ವಿಜಯ್ ಸೇತುಪತಿ

    ತಮಿಳು ನಟ ವಿಜಯ ಸೇತುಪತಿ ಹಲವಾರು ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದರೂ, ಇತ್ತೀಚಿನ ವರ್ಷಗಳಲ್ಲಿ ವಿಲನ್ ಪಾತ್ರಗಳಲ್ಲಿ ಪ್ಯಾನ್ ಇಂಡಿಯಾ ಸದ್ದು ಮಾಡುತ್ತಿದ್ದಾರೆ. ‘ಮಾಸ್ಟರ್’, ‘ಜವಾನ್’, ‘ವಿಕ್ರಮ್’ ಹೀಗೆ ಹಲವು ಸಿನಿಮಾಗಳಲ್ಲಿ ಖಳನಟನಾಗಿ ನಟಿಸಿದ್ದಾರೆ. ಆದರೆ, ಇನ್ನುಮುಂದೆ ವಿಲನ್ ಪಾತ್ರಗಳಲ್ಲಿ ನಟಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ ವಿಜಯ್.

    ಇತ್ತೀಚೆಗೆ ಗೋವಾ ಫಿಲಂ ೆಸ್ಟಿವಲ್‌ನಲ್ಲಿ ವಿಜಯ್, ‘ನನಗೆ ಮೆಥಡ್ ಆ್ಯಕ್ಟಿಂಗ್ ಗೊತ್ತಿಲ್ಲ. ಕಥೆ ಕೇಳಿದಾಗ ನನಗೆ ಯಾಕೆ ಈ ಕಥೆಯನ್ನು ಹೇಳುತ್ತಿದ್ದಾರೆ ಎಂದು ಯೋಚಿಸಿ ಒಂದಿಷ್ಟು ಪ್ರಶ್ನೆಗಳನ್ನು ಕೇಳುತ್ತೇನೆ. ಅದರ ಆಧಾರದ ಮೇಲೆ ಪಾತ್ರಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ಆದರೆ, ಆ್ಯಕ್ಟಿಂಗ್‌ಗೆ ಯಾವುದೇ ಾರ್ಮುಲಾ ಗೊತ್ತಿಲ್ಲ. ಖಳನಟನ ಪಾತ್ರ ಖುಷಿ ಕೊಡುತ್ತದೆ. ಆದರೆ, ಅದಕ್ಕೇ ಸೀಮಿತವಾಗಲು ನನಗಿಷ್ಟವಿಲ್ಲ. ಜತೆಗೆ ಆ ಪಾತ್ರಗಳು ಭಾವನಾತ್ಮಕ ಒತ್ತಡ ಹೇರುತ್ತವೆ. ಅದನ್ನು ಎದುರಿಸಲು ನನಗೆ ಸಾಧ್ಯವಿಲ್ಲ. ಆ ಪಾತ್ರಗಳು ನಮ್ಮ ಮನಸ್ಸನ್ನು ಕಂಟ್ರೋಲ್ ಮಾಡುತ್ತವೆ. ನಾಯಕನ ವಿರುದ್ಧ ಗೆಲ್ಲುವ ಅವಕಾಶವಿರುವುದಿಲ್ಲ. ಸಂಕಲನದ ಸಮಯದಲ್ಲಿ ಪಾತ್ರಕ್ಕೆ ಕತ್ತರಿ ಹಾಕುತ್ತಾರೆ. ಹೀಗಾಗಿ ಕೆಲವು ವರ್ಷಗಳ ಕಾಲ ಖಳನಟನ ಪಾತ್ರದಿಂದ ಬ್ರೇಕ್ ಪಡೆಯಬೇಕು ಅಂದುಕೊಂಡಿದ್ದೇನೆ. ಆದರೂ ಕೆಲವರು ಕಥೆ ಕೇಳಿ ಎಂದು ಒತ್ತಾಯಿಸುತ್ತಾರೆ’ ಎಂದು ಹೇಳಿಕೊಂಡಿದ್ದಾರೆ.

    ವಿಜಯ್ ಸೇತುಪತಿ ಹಾಗೂ ಕತ್ರಿನಾ ಕ್ೈ ಅಭಿನಯದ ‘ಮೆರ‌್ರಿ ಕ್ರಿಸ್‌ಮಸ್’ ಸಿನಿಮಾದ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts