More

    ಸಿಹಿಮೊಗ್ಗೆಯಲ್ಲಿ ವೇದ ಹವಾ, ಶಿವಣ್ಣನ ನೋಡಲು ಮುಗಿಬಿದ್ದ ಅಭಿಮಾನಿಗಳು

    ಶಿವಮೊಗ್ಗ: ಶಿವಮೊಗ್ಗದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು ಶನಿವಾರ ಅಭಿಮಾನಿಗಳು ಮುಗಿಬಿದ್ದರು. ಗೀತಾ ಶಿವರಾಜ್‌ಕುಮಾರ್ ನಿರ್ಮಾಣದ ಚೊಚ್ಚಲ ವೇದ ಚಿತ್ರತಂಡವನ್ನು ಶಿಳ್ಳೆ, ಚಪ್ಪಾಳೆ ಜತೆಗೆ ಪಟಾಕಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.
    125ನೇ ಸಿನಿಮಾದ ಪ್ರಮೋಷನ್‌ಗಾಗಿ ವೇದ ಚಿತ್ರತಂಡದೊಂದಿಗೆ ನಟ ಶಿವರಾಜ್‌ಕುಮಾರ್ ಆಗಮಿಸಿದ್ದು ಮಧ್ಯಾಹ್ನ ಡಿವಿಎಸ್ ಕಾಲೇಜಿನ ಸಿಂಗಾರ ಸಭಾಂಗಣದಲ್ಲಿ ಮಹಿಳೆಯರೊಂದಿಗೆ ಸಂವಾದ ನಡೆಸಿದರು. ವಿಶೇಷ ಆಹ್ವಾನಿತರು, ಅಭಿಮಾನಿಗಳು, ಕಾಲೇಜು ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗಿಯಾಗಿದ್ದರು.
    ಮಹಿಳೆಯರ ಶೋಷಣೆ ಮತ್ತು ರಕ್ಷಣೆ ಬಗ್ಗೆ ಹಲವರು ಪ್ರಶ್ನೆ ಮಾಡಿದರು. ಪ್ರಶ್ನೆಗಳಿಗೆ ಅಷ್ಟೇ ಸಮರ್ಥವಾಗಿ ನಟ ಶಿವಣ್ಣ ಉತ್ತರ ನೀಡಿದ್ದು ವಿಶೇಷವಾಗಿತ್ತು. ಅಷ್ಟೇ ಅಲ್ಲದೇ ವೇದಿಕೆಯಲ್ಲೇ ವಜ್ರಕಾಯ ಚಿತ್ರದ ಹಾಡಿಗೆ ಪುಟ್ಟ ಬಾಲಕಿಯೊಂದಿಗೆ ಹೆಜ್ಜೆ ಹಾಕಿ ರಂಜಿಸಿದರು. ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್, ನಿರ್ದೇಶಕ ಹರ್ಷ, ನಟಿಯರಾದ ಗಾನ್ಹವಿ ಲಕ್ಷ್ಮೀ ಮತ್ತು ಅದಿತಿ ಸಾಗರ್, ಮಾಜಿ ಶಾಸಕ ಮಧು ಬಂಗಾರಪ್ಪ, ಡಿವಿಎಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts