More

    ನಟಿ ರಶ್ಮಿಕಾ ಮಂದಣ್ಣರಿಂದಾಗಿ ಈ ಎರಡು ಸಿನಿಮಾಗಳಿಗೆ ಎದುರಾಯ್ತು ಸಂಕಷ್ಟ!

    ಹೈದರಾಬಾದ್​: ನಟಿ ರಶ್ಮಿಕಾ ಮಂದಣ್ಣರ ಕನ್ನಡ ನಿರ್ಲಕ್ಷ್ಯ ಧೋರಣೆಯಿಂದಾಗಿ ಕನ್ನಡಿಗರ ವಿರೋಧ ಎದುರಿಸುತ್ತಿದ್ದಾರೆ. ಹೋದಲ್ಲಿ, ಬಂದಲ್ಲಿ ಕನ್ನಡ ಮತ್ತು ಕನ್ನಡ ಸಿನಿಮಾಗಳ ಬಗ್ಗೆ ಹಗುರವಾಗಿ ಮಾತನಾಡುವ ರಶ್ಮಿಕಾರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್​ ಮಾಡುವ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾನು ನಟಿಸಿದ ಮೊದಲ ಕನ್ನಡ ಚಿತ್ರದ ನಿರ್ಮಾಣ ಸಂಸ್ಥೆಯ ಹೆಸರೇಳಲು ಹಿಂದೇಟು ಹಾಕಿದರು. ಹೀಗಾಗಿ ರಶ್ಮಿಕಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆ ವ್ಯಕ್ತವಾಗಿತ್ತು.

    ಕನ್ನಡ ನೆಲದಲ್ಲಿ ರಶ್ಮಿಕಾ ವಿರೋಧಿ ಕೂಗು ಜೋರಾಗಿ ಕೇಳಿಬರುತ್ತಿದ್ದು, ಮುಂಬರುವ ಅವರ ನಟನೆಯ ಎರಡು ಸಿನಿಮಾಗಳ ಮೇಲೆ ಋಣಾತ್ಮಕ ಪ್ರಭಾವ ಬೀರಲಿದೆ. ದಳಪತಿ ವಿಜಯ್ ಜೊತೆಗಿನ ವಾರಿಸು ಮತ್ತು ಅಲ್ಲು ಅರ್ಜುನ್​ ನಟನೆಯ ಪುಷ್ಪ 2 ಸಿನಿಮಾಗಳು ಕನ್ನಡ ನೆಲದಲ್ಲಿ ಬಿಡುಗಡೆಯಾಗಲು ಭಾರಿ ಅಡ್ಡಿ ಎದುರಾಗಲಿದೆ. ​

    ರಶ್ಮಿಕಾ ಕರ್ನಾಟಕಕ್ಕೆ ಬಂದಲ್ಲಿ ಪ್ರತಿಭಟನೆಯ ಬಿಸಿ ಸಹ ತಟ್ಟಲಿದೆ. ಮೂಲ ಬೇರನ್ನೇ ಮರೆಯುವ ರಶ್ಮಿಕಾಗೆ ನಿಯತ್ತು ಎಂಬುದೇ ಇಲ್ಲ ಎಂದು ಕನ್ನಡ ಸಿನಿ ಪ್ರಿಯರು ಜರಿಯುತ್ತಿದ್ದಾರೆ. ಹೀಗಾಗಿ ಮುಂಬರುವ ದಿನಗಳಲ್ಲಿ ರಶ್ಮಿಕಾಗೆ ಸಾಲು ಸಾಲು ಅಡ್ಡಿ ಎದುರಾಗುವುದು ಖಚಿತವಾಗಲಿದೆ. ಇಷ್ಟೇ ಅಲ್ಲದೆ, ಅವರ ಕನ್ನಡ ವಿರೋಧಿ ಮನಸ್ಥಿತಿಯಿಂದಾಗಿ ಆಕೆಯನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್​ ಮಾಡುವ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಹೇಳಲಾಗಿದೆ.

    ರಶ್ಮಿಕಾರ ವರ್ತನೆಯಿಂದಾಗಿ ಇದೀಗ ವಾರಿಸು ಮತ್ತು ಪುಷ್ಪ ಚಿತ್ರದ ನಿರ್ಮಾಪಕರು ಚಿಂತಿಸುವಂತಾಗಿದೆ. (ಏಜೆನ್ಸೀಸ್​)

    ಸಂಸದೆ ಸುಮಲತಾ ಆಪ್ತನ BJP ಸೇರ್ಪಡೆಗೆ ಡೇಟ್​ ಫಿಕ್ಸ್​! ಸ್ವಾಭಿಮಾನಿ ಸಂಸದೆಯ ನಿಲುವಿಗೆ ಬಿಜೆಪಿಗರ ಬೇಸರ

    ಇನ್ಫಿ ಮೂರ್ತಿ ಅಳಿಯ, ಬ್ರಿಟನ್​ ಪ್ರಧಾನಿ ರಿಷಿ ಸುನಕ್​ ಪುತ್ರಿ ಅನುಷ್ಕಾರಿಂದ ಕೂಚಿಪುಡಿ ನೃತ್ಯ ಪ್ರದರ್ಶನ: ವಿಡಿಯೋ ವೈರಲ್​

    ಸಪ್ತಪದಿ ತುಳಿಯೋ ಮುನ್ನವೇ ಸನ್ನಿಧಿಗೆ ಮೋಸ? ಈ ಸಂಗತಿ ಗೊತ್ತಾದ್ರೆ ವೈಷ್ಣವಿಗೆ ಉಗಿದು ಉಪ್ಪಿನಕಾಯಿ ಹಾಕ್ತಾರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts