More

    PHOTO GALLERY| ನೆರೆಸಂತ್ರಸ್ತರ ನೆರವಿಗಾಗಿ ಸ್ವತಃ ನೀರಿಗಿಳಿದ ‘ಎನ್​ಕೌಂಟರ್ ಸ್ಪೆಷಲಿಸ್ಟ್’!

    ಹೈದರಾಬಾದ್: ಉತ್ತರ ಕರ್ನಾಟಕದ ಹಾಗೆಯೇ ಆಂಧ್ರ, ತೆಲಂಗಾಣದಲ್ಲಿಯೂ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ತೀವ್ರ ಅಸ್ತವ್ಯಸ್ತವಾಗಿದೆ.

    ಪ್ರವಾಹದಿಂದಾಗಿ ಸಾವಿರಾರು ಜನರು ಸೂರು ಕಳೆದುಕೊಂಡಿದ್ದಾರೆ. ಜಲಾವೃತವಾಗಿರುವ ಪ್ರದೇಶಗಳಿಂದ ಜನರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗಿದೆ.

    ರಕ್ಷಣಾ ಕಾರ್ಯದಲ್ಲಿ ಸೈಬರಾಬಾದ್ ಪೊಲೀಸ್ ಕಮಿಷನರ್ ಆಗಿರುವ ಕನ್ನಡಿಗ, ‘ಎನ್ ಕೌಂಟರ್ ಸ್ಪೆಷಲಿಸ್ಟ್’ ವಿ.ಸಿ. ಸಜ್ಜನರ್ ಕೂಡ ಸಕ್ರಿಯವಾಗಿ ಭಾಗವಹಿಸುತ್ತಿರುವುದು ಗಮನ ಸೆಳೆಯುತ್ತಿದೆ. ತಮ್ಮ ಸಿಬ್ಬಂದಿಯೊಂದಿಗೆ ಸ್ವತಃ ಸಜ್ಜನರ್ ಕೂಡ ಆಳೆತ್ತರದ ನೆರೆ ನೀರಿನಲ್ಲಿಳಿದು ಪ್ರವಾಹ ಸಂತ್ರಸ್ತರನ್ನು ರಕ್ಷಿಸುತ್ತಿರುವುದು ವಿಶೇಷ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts