ಉತ್ತರಕನ್ನಡ: ಕರೊನಾ ಬರದಂತೆ ತಡೆಯಬಹುದು ಎಂದು ಗಿಡಮೂಲಿಕೆ ಔಷಧ ಕುಡಿದು ಮಗ ಸಾವಿಗೀಡಾಗಿ, ತಂದೆ ಅಸ್ವಸ್ಥಗೊಂಡಿರುವ ಘಟನೆ ಶಿರಸಿ ತಾಕೂಕಿನ ರಾಮನಬೈಲಿನಲ್ಲಿ ನಡೆದಿದೆ.
ಫ್ರಾನ್ಸಿಸ್ ರೇಘೋ(42) ಮೃತ ಮಗ. ಆತನ ತಂದೆ ನೆಕ್ಲಾಂ ಅಂಥೋನಿ ( 70) ಗಂಭೀರವಾಗಿದ್ದು, ಶಿರಸಿ ಸರ್ಕಾರಿ ಆಸ್ವತ್ರೆಗೆ ದಾಖಲಿಸಲಾಗಿದೆ.
ಕರೊನಾ ಭೀತಿ ಹಿನ್ನೆಲೆಯಲ್ಲಿ ಸೋಂಕು ಬರದಂತೆ ತಡೆಯಬಹುದು ಎಂದು ನಂಬಿ ಅಪ್ಪ-ಮಗ ಗಿಡಮೂಲಿಕೆ ಔಷಧವನ್ನು ಸೇವಿಸಿದ್ದಾರೆ. ಬಳಿಕ ಔಷಧದ ಅಡ್ಡ ಪರಿಣಾಮದಿಂದ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಇದನ್ನೂ ಓದಿ: 8 ವರ್ಷಗಳಿಂದ ಭೇದಿಸಲಾಗದ ದರೋಡೆ ಪ್ರಕರಣವನ್ನು ಕ್ಷಣದಲ್ಲೇ ಪರಿಹರಿಸಿದ 6 ವರ್ಷದ ಬಾಲಕ!
ಘಟನಾ ಸ್ಥಳಕ್ಕೆ ಶಿರಸಿ ನಗರ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್)
ಸಾಮೂಹಿಕ ನಮಾಜ್ ಮಾಡಬೇಡಿ ಎಂದ ಪೊಲೀಸರ ಮೇಲೆ ಕಲ್ಲು ತೂರಾಟ- ಶಾಸಕನಿಂದಲೇ ನಿಯಮ ಉಲ್ಲಂಘನೆ!