More

    ಕರೊನಾವೈರಸ್​ಗೆ ಬಲಿಯಾದ ಉತ್ತರ ಪ್ರದೇಶದ ಮತ್ತೊಬ್ಬ ಸಚಿವ!

    ಲಕ್ನೋ: ಕರೊನಾವೈರಸ್​ ಸೋಂಕಿನಿಂದ ಬಳಲುತ್ತಿದ್ದ ಉತ್ತರ ಪ್ರದೇಶದ ಬಿಜೆಪಿ ಮುಖಂಡ ಹಾಗೂ ಸಚಿವ ಹನುಮಾನ್ ಮಿಶ್ರಾ (60) ಅವರು ಮಂಗಳವಾರ ಮೃತಪಟ್ಟಿದ್ದಾರೆ. ಅವರು ಸಹಕಾರ ಸಚಿವರಾಗಿದ್ದರು. ಅಲ್ಲದೇ ಅವರು ಉತ್ತರ ಪ್ರದೇಶದ ಕೋ ಆಪರೇಟಿವ್ ಯೂನಿಯನ್​​ನ ಅಧ್ಯಕ್ಷರೂ ಸಹ ಆಗಿದ್ದರು.

    ಕಳೆದ ಒಂದು ವಾರದ ಹಿಂದೆ ಕರೊನಾ ಸೋಂಕಿಗೆ ತುತ್ತಾಗಿದ್ದ ಮಿಶ್ರಾ, ಲಕ್ನೋದ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳದಿದ್ದಾರೆ.

    ಇದರೊಂದಿಗೆ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದ ಮೂವರು ಕೋವಿಡ್​ಗೆ ಬಲಿಯಾದಂತಾಗಿದೆ. ಸಚಿವರಾಗಿದ್ದ ಕಮಲ್ ರಾಣಿ ವರುಣ್ ಹಾಗೂ ಚೇತನ್ ಚೌಹಾಣ್ ಅವರು ಕೋವಿಡ್​ನಿಂದ ಕಳೆದ ವರ್ಷ ಮೃತಪಟ್ಟಿದ್ದರು.

    ಉತ್ತರ ಪ್ರದೇಶದಲ್ಲೂ ಕೂಡ ಕರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಸೋಮವಾರ ಸುಮಾರು 28 ಸಾವಿರ ಜನಕ್ಕೆ ಸೋಂಕು ತಗುಲಿತ್ತು. ಮಹಾರಾಷ್ಟ್ರ ಹೊರತುಪಡಿಸಿದರೇ ಅತಿ ಹೆಚ್ಚು ಪ್ರಮಾಣದಲ್ಲಿ ಉತ್ತರ ಪ್ರದೇಶದಲ್ಲಿ ಕರೊನಾ ಪಾಸಿಟಿವ್ ಕಂಡು ಬರುತ್ತಿವೆ.

    ವಲಸೆ ಕಾರ್ಮಿಕರು ತುಂಬಿದ್ದ ಬಸ್ ಪಲ್ಟಿ ; ಮೂವರ ದುರ್ಮರಣ

    ಲಾಕ್​ಡೌನ್​ ಆದೇಶಕ್ಕೆ ಸುಪ್ರೀಂ ಕೋರ್ಟ್​ ತಡೆ! ರಾಜ್ಯ ಸರ್ಕಾರದಿಂದ ವರದಿ ಕೇಳಿದ ನ್ಯಾಯಾಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts