ನವದೆಹಲಿ: ಕರೊನಾ ವೈರಸ್ ಭಯದ ನಡುವೆಯೂ ನಾಳೆಯಿಂದ ಸಂಸತ್ ಅಧಿವೇಶನ ಪ್ರಾರಂಭವಾಗಲಿದೆ. ಕರೊನಾ ಮುನ್ನೆಚ್ಚರಿಕೆಯಾಗಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಅದರ ಒಂದು ಭಾಗವಾಗಿ ಮಾಧ್ಯಮದವರು ಸಂಸದರು, ಸಚಿವರ ಬೈಟ್ (ಹೇಳಿಕೆ)ಗಳನ್ನು ಮೊಬೈಲ್ಗಳ ಮೂಲಕ ತೆಗೆದುಕೊಳ್ಳುವುದನ್ನು ನಿಷೇಧಿಸಲಾಗಿದೆ.
ಸಂಸತ್ ಭವನದ ಸಂಕೀರ್ಣದ ಒಳಗೆ ಯಾವುದೇ ಮಾಧ್ಯಮದವರು ನೇರ ಪ್ರಸಾರಕ್ಕಾಗಿ ಸಚಿವರು, ಸಂಸದರ ಹೇಳಿಕೆಗಳನ್ನು ಮೊಬೈಲ್ಗಳ ಮೂಲಕ ತೆಗೆದುಕೊಳ್ಳಬಾರದು ಎಂದು ಲೋಕಸಭಾ ಸಚಿವಾಲಯ ತಿಳಿಸಿದೆ. ಮಾಧ್ಯಮಗಳಿಗೂ ಈ ಬಗ್ಗೆ ಹೇಳಲಾಗಿದೆ. ಸಂಕೀರ್ಣದ ಒಳಗೆ ಮೊಬೈಲ್ ಮೂಲಕ ಬೈಟ್ ತೆಗೆದುಕೊಳ್ಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಹಾಗೇ ಮೊಬೈಲ್ ಕ್ಯಾಮರಾ ಮೂಲಕವೇ ಕೆಲವರು ಲೈವ್ ಕೊಡುತ್ತಾರೆ. ಈ ಬಾರಿ ಅದಕ್ಕೂ ಅವಕಾಶ ಇಲ್ಲ ಎಂದು ಇಂದು ಹೊರಡಿಸಿದ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಹಾಗೇ ಮಾಧ್ಯಮ ಸಿಬ್ಬಂದಿ ಸಾಮಾಜಿಕ ಅಂತರ ನಿಯಮ ಪಾಲನೆ ಮಾಡಬೇಕು ಎಂದೂ ಹೇಳಲಾಗಿದೆ.
ಸೋಮವಾರ (ನಾಳೆ) ಬೆಳಗ್ಗೆ 9 ಗಂಟೆಯಿಂದ ಸಂಸತ್ ಅಧಿವೇಶನ ಪ್ರಾರಂಭವಾಗಲಿದೆ. (ಏಜೆನ್ಸೀಸ್)
ಗಾಲ್ವಾನ್ ಸಂಘರ್ಷದಲ್ಲಿ ಹತ್ಯೆಯಾದ ಚೀನಾ ಯೋಧರ ಸಂಖ್ಯೆ 60ಕ್ಕೂ ಹೆಚ್ಚು; ಅಮೆರಿಕ ಮೂಲದಿಂದ ಸತ್ಯ ಬಯಲು…!