More

    ಸಿನಿಮಾ ಕಾರ್ಮಿಕರಿಗೆ ರೇಷನ್ ಕಿಟ್ ವಿತರಿಸಿದ ಉಪೇಂದ್ರ

    ಬೆಂಗಳೂರು: ಕನ್ನಡ ಚಲನಚಿತ್ರ ಕಾಮಿರ್ಕರ ಮತ್ತು ತಂತ್ರಜ್ಞರ ಒಕ್ಕೂಟದ ಅಡಿಯಲ್ಲಿ ಬರುವ 15ಕ್ಕೂ ಹೆಚ್ಚು ಸಂಗಳ ಮೂರು ಸಾವಿರಕ್ಕೂ ಹೆಚ್ಚು ಕಾಮಿರ್ಕರ ನೆರವಿಗೆ ಬಂದಿರುವ ಉಪೇಂದ್ರ, ಅವರಿಗೆ ರೇಷನ್​ ಕಿಟ್​ಗಳನ್ನು ವಿತರಿಸುವುದಾಗಿ ಕೆಲವು ದಿನಗಳ ಹಿಂದೆ ಘೋಷಿಸಿದ್ದರು. ಅದರಂತೆ, ಗುರುವಾರ ಅವರು ನೂರಾರು ಜನರಿಗೆ ರೇಷನ್​ ಕಿಟ್​ಗಳನ್ನು ವಿತರಿಸಿದ್ದಾರೆ.

    ಇದನ್ನೂ ಓದಿ: ಜೀ ಕನ್ನಡದಲ್ಲಿ ಮೇ 17ರಿಂದ ವಿನೂತನ ಧಾರಾವಾಹಿ “ಕೃಷ್ಣ ಸುಂದರಿ” ಪ್ರಾರಂಭ

    ಗುರುವಾರ, ಉಪೇಂದ್ರ ಅವರು ತಮ್ಮ ಕತ್ರಿಗುಪ್ಪೆಯ ಮನೆಯ ಎದುರು ರೇಷನ್​ ಕಿಟ್​ ವಿತರಣೆಯನ್ನು ಆಯೋಜಿಸಿದ್ದರು. ಒಕ್ಕೂಟದ ಸದಸ್ಯರಾಗಿರುವವರು, ತಮ್ಮ ಐಡಿ ಕಾರ್ಡ್​ಗಳನ್ನು ಪ್ರದರ್ಶಿಸಿ ರೇಷನ್​ ಕಿಟ್​ ಪಡೆಯಬಹುದು ಎಂದು ಬುಧವಾರವೇ ಸೋಷಿಯಲ್​ ಮೀಡಿಯಾದಲ್ಲಿ ಹೇಳಿದ್ದರು.

    ಅದರಂತೆ ಒಕ್ಕೂಟದ ನೂರಾರು ಜನರು ಉಪೇಂದ್ರ ಅವರ ಮನೆಯ ಬಳಿ ಧಾವಿಸಿ ರೇಷನ್​ ಕಿಟ್​ಗಳನ್ನು ಪಡೆದಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ನಟ ಬಿರಾದಾರ್​ ಸೇರಿದಂತೆ ಹಲವರು ಹಾಜರಿದ್ದು, ಕಿಟ್​ಗಳನ್ನು ಪಡೆದಿದ್ದಾರೆ.

    ಇದನ್ನೂ ಓದಿ: ಇಡೀ ದೇಶದಲ್ಲಿ ಕೇವಲ ಮೂರು ಚಿತ್ರಮಂದಿರಗಳಲ್ಲಿ ರಾಧೇ ಬಿಡುಗಡೆ …

    ಉಪೇಂದ್ರ ಅವರ ಈ ಕೆಲಸಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿರುವ ಜತೆಗೆ ಮತ್ತಷ್ಟು ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಉಪ್ಪಿ ಜತೆಗೆ ಕೈಜೋಡಿಸಿದ್ದಾರೆ. ಹಿರಿಯ ನಟಿ ಬಿ. ಸರೋಜಾದೇವಿ ಅವರು ನಾಲ್ಕು ಲಕ್ಷ, ಸಾಧು ಕೋಕಿಲ ಎರಡೂವರೆ ಲಕ್ಷ, ಮಾನ್ಯ ಒಂದು ಲಕ್ಷ, ನಿರ್ದೇಶಕ ಪವನ್​ ಒಡೆಯರ್ 20 ಸಾವಿರ, ಶೋಭರಾಜ್​ 10 ಸಾವಿರ ರೂಗಳನ್ನು, ಸಂತ್ರಸ್ತರಿಗೆ ಕಿಟ್​ ವಿತರಿಸುವುದಕ್ಕೆ ಉಪ್ಪಿ ಫೌಂಡೇಶನ್​ ಖಾತೆಗೆ ಸ್ವಯಂಪ್ರೇರಿತರಾಗಿ ವರ್ಗಾವಣೆ ಮಾಡಿದ್ದಾರೆ.

    ‘ಪುಷ್ಪ’ ಚಿತ್ರದ ಒಟ್ಟಾರೆ ಬಜೆಟ್​ ಬಹಿರಂಗ; ಟಾಲಿವುಡ್​ನಲ್ಲಿ ಸಂಚಲನ ಸೃಷ್ಟಿಸಿದ ಬಿಗ್ ಮೊತ್ತ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts